<p><strong>ನವದೆಹಲಿ:</strong> ಎಫ್ಐಆರ್ ರದ್ದು ಮಾಡಬೇಕಾದರೆ ಸರ್ಕಾರಿ ಶಿಶು ಪಾಲನಾ ಕೇಂದ್ರದ ಮಕ್ಕಳಿಗೆ ಪಿಜ್ಜಾ ಹಾಗೂ ಮಜ್ಜಿಗೆ ನೀಡಬೇಕು ಎಂದು ಸಾಕು ಪ್ರಾಣಿ ಸಂಬಂಧ ಜಗಳವಾಡಿ ಕೋರ್ಟ್ ಮೆಟ್ಟಲೇರಿದ್ದ ನರೆಹೊರೆಯ ಇಬ್ಬರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.</p>.ಮೋದಿ ಪದವಿ ವ್ಯಾಸಂಗ ವಿವರ ಕೇಳಿದ್ದ ಪ್ರಕರಣ:ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್.<p>ಜಿಬಿಟಿ ಆಸ್ಪತ್ರೆ ಸನಿಹ ಇರುವ ಸಂಸ್ಕಾರ ಆಶ್ರಮದ ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಅಮುಲ್ ಟೆಟ್ರಾ ಪ್ಯಾಕ್ ಮಜ್ಜಿಗೆ ಹಾಗೂ ತರಕಾರಿ ಮಿಶ್ರಿತ ಪಿಜ್ಜಾ ವಿತರಿಸಬೇಕು ಎಂದು ನ್ಯಾಯಮೂರ್ತಿ ಅರುಣ್ ಮೊಂಗ ನಿರ್ದೇಶಿಸಿದ್ದಾರೆ.</p><p>ಓರ್ವ ದೂರುದಾರ ಪಿಜ್ಜಾ ತಯಾರಿಸಬೇಕು, ಮತ್ತೊಬ್ಬ ಅದನ್ನು ಹಂಚಬೇಕು, ಇದನ್ನು ಸಮುದಾಯ ಸೇವೆ ಎಂದು ಪರಿಗಣಿಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.</p>.‘ಉದಯಪುರ ಫೈಲ್ಸ್’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ.<p>ಸಾಕು ಪ್ರಾಣಿ ಸಂಬಂಧ ನಡೆದ ಮಾತುಕತೆ ಜಗಳಕ್ಕೆ ತಿರುಗಿ, ಹಲ್ಲೆ ನಡೆಸಲಾಗಿದೆ ಎಂದು ಪರಸ್ಪರ ಇಬ್ಬರು ದೂರು ನೀಡಿದ್ದರು. ಈ ಬಗ್ಗೆ ಎಫ್ಐಆರ್ ಕೂಡ ದಾಖಲಾಗಿತ್ತು. ಪ್ರಕರಣವನ್ನು ಮಾತುಕತೆ ಮೂಲಕ ಬಗೆಹರಿಸಿದ್ದೇವೆ ಎಂದು ಇಬ್ಬರೂ ಕೋರ್ಟ್ ಮುಂದೆ ಅರುಹಿದ್ದಾರೆ.</p><p>ನೆರೆಮನೆಯವರಿಬ್ಬರ ಜಗಳ ಖಾಸಗಿ ವಿಷಯವಾಗಿದ್ದು, ಈ ಬಗ್ಗೆ ದಾಖಲಾಗಿರುವ ಕ್ರಿಮಿನಲ್ ದೂರನ್ನು ಮುಂದುವರಿಸುವುದು ಸಮಂಜಸವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.</p>.ಪರವಾನಗಿ ರದ್ದು: ಟರ್ಕಿ ಸೆಲೆಬಿ ಕಂಪನಿಯ ಮೇಲ್ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್.<p>ವಿಚಾರಣೆ ವೇಳೆ ಆರೋಪಿಗಳಲ್ಲಿ ಒಬ್ಬರು ಪಿಜ್ಜಾ ತಯಾರಕರು ಎನ್ನುವುದು ಕೋರ್ಟ್ ಗಮನಕ್ಕೆ ಬಂದಿದೆ. ಹೀಗಾಗಿ ಶಿಶು ಪಾಲನಾ ಮಂದಿರಕ್ಕೆ ಪಿಜ್ಜಾ ಹಾಗೂ ಮಜ್ಜಿಗೆ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.</p><p>ಕೋರ್ಟ್ ಆದೇಶ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎನ್ನುವುದನ್ನು ತನಿಖಾಧಿಕಾರಿ ಖಚಿತಪಡಿಸಿಕೊಳ್ಳಬೇಕು ಎಂದೂ ಕೋರ್ಟ್ ಹೇಳಿದೆ.</p>.<p><strong>(ಬಾರ್ ಆ್ಯಂಡ್ ಬೆಂಚ್ ವರದಿ ಆಧರಿಸಿ ಮಾಡಿದ ಸುದ್ದಿ)</strong></p>.ಸಾರ್ವಜನಿಕ ಸ್ಥಳದ ಒತ್ತುವರಿ ಮುಂದುವರಿಸುವಂತಿಲ್ಲ: ದೆಹಲಿ ಹೈಕೋರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಎಫ್ಐಆರ್ ರದ್ದು ಮಾಡಬೇಕಾದರೆ ಸರ್ಕಾರಿ ಶಿಶು ಪಾಲನಾ ಕೇಂದ್ರದ ಮಕ್ಕಳಿಗೆ ಪಿಜ್ಜಾ ಹಾಗೂ ಮಜ್ಜಿಗೆ ನೀಡಬೇಕು ಎಂದು ಸಾಕು ಪ್ರಾಣಿ ಸಂಬಂಧ ಜಗಳವಾಡಿ ಕೋರ್ಟ್ ಮೆಟ್ಟಲೇರಿದ್ದ ನರೆಹೊರೆಯ ಇಬ್ಬರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.</p>.ಮೋದಿ ಪದವಿ ವ್ಯಾಸಂಗ ವಿವರ ಕೇಳಿದ್ದ ಪ್ರಕರಣ:ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್.<p>ಜಿಬಿಟಿ ಆಸ್ಪತ್ರೆ ಸನಿಹ ಇರುವ ಸಂಸ್ಕಾರ ಆಶ್ರಮದ ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಅಮುಲ್ ಟೆಟ್ರಾ ಪ್ಯಾಕ್ ಮಜ್ಜಿಗೆ ಹಾಗೂ ತರಕಾರಿ ಮಿಶ್ರಿತ ಪಿಜ್ಜಾ ವಿತರಿಸಬೇಕು ಎಂದು ನ್ಯಾಯಮೂರ್ತಿ ಅರುಣ್ ಮೊಂಗ ನಿರ್ದೇಶಿಸಿದ್ದಾರೆ.</p><p>ಓರ್ವ ದೂರುದಾರ ಪಿಜ್ಜಾ ತಯಾರಿಸಬೇಕು, ಮತ್ತೊಬ್ಬ ಅದನ್ನು ಹಂಚಬೇಕು, ಇದನ್ನು ಸಮುದಾಯ ಸೇವೆ ಎಂದು ಪರಿಗಣಿಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.</p>.‘ಉದಯಪುರ ಫೈಲ್ಸ್’ ಸಿನಿಮಾ ಬಿಡುಗಡೆಗೆ ದೆಹಲಿ ಹೈಕೋರ್ಟ್ ತಡೆ.<p>ಸಾಕು ಪ್ರಾಣಿ ಸಂಬಂಧ ನಡೆದ ಮಾತುಕತೆ ಜಗಳಕ್ಕೆ ತಿರುಗಿ, ಹಲ್ಲೆ ನಡೆಸಲಾಗಿದೆ ಎಂದು ಪರಸ್ಪರ ಇಬ್ಬರು ದೂರು ನೀಡಿದ್ದರು. ಈ ಬಗ್ಗೆ ಎಫ್ಐಆರ್ ಕೂಡ ದಾಖಲಾಗಿತ್ತು. ಪ್ರಕರಣವನ್ನು ಮಾತುಕತೆ ಮೂಲಕ ಬಗೆಹರಿಸಿದ್ದೇವೆ ಎಂದು ಇಬ್ಬರೂ ಕೋರ್ಟ್ ಮುಂದೆ ಅರುಹಿದ್ದಾರೆ.</p><p>ನೆರೆಮನೆಯವರಿಬ್ಬರ ಜಗಳ ಖಾಸಗಿ ವಿಷಯವಾಗಿದ್ದು, ಈ ಬಗ್ಗೆ ದಾಖಲಾಗಿರುವ ಕ್ರಿಮಿನಲ್ ದೂರನ್ನು ಮುಂದುವರಿಸುವುದು ಸಮಂಜಸವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.</p>.ಪರವಾನಗಿ ರದ್ದು: ಟರ್ಕಿ ಸೆಲೆಬಿ ಕಂಪನಿಯ ಮೇಲ್ಮನವಿ ವಜಾಗೊಳಿಸಿದ ದೆಹಲಿ ಹೈಕೋರ್ಟ್.<p>ವಿಚಾರಣೆ ವೇಳೆ ಆರೋಪಿಗಳಲ್ಲಿ ಒಬ್ಬರು ಪಿಜ್ಜಾ ತಯಾರಕರು ಎನ್ನುವುದು ಕೋರ್ಟ್ ಗಮನಕ್ಕೆ ಬಂದಿದೆ. ಹೀಗಾಗಿ ಶಿಶು ಪಾಲನಾ ಮಂದಿರಕ್ಕೆ ಪಿಜ್ಜಾ ಹಾಗೂ ಮಜ್ಜಿಗೆ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.</p><p>ಕೋರ್ಟ್ ಆದೇಶ ಪಾಲನೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎನ್ನುವುದನ್ನು ತನಿಖಾಧಿಕಾರಿ ಖಚಿತಪಡಿಸಿಕೊಳ್ಳಬೇಕು ಎಂದೂ ಕೋರ್ಟ್ ಹೇಳಿದೆ.</p>.<p><strong>(ಬಾರ್ ಆ್ಯಂಡ್ ಬೆಂಚ್ ವರದಿ ಆಧರಿಸಿ ಮಾಡಿದ ಸುದ್ದಿ)</strong></p>.ಸಾರ್ವಜನಿಕ ಸ್ಥಳದ ಒತ್ತುವರಿ ಮುಂದುವರಿಸುವಂತಿಲ್ಲ: ದೆಹಲಿ ಹೈಕೋರ್ಟ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>