<p><strong>ಅಮರಾವತಿ</strong>: ಮೊಂಥಾ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದ ರಾಜ್ಯಕ್ಕೆ ₹5,265 ಕೋಟಿ ನಷ್ಟವಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ ಮಾಹಿತಿ ನೀಡಿದ್ದಾರೆ. </p><p>ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ರಸ್ತೆ ಮತ್ತು ಕಟ್ಟಡಗಳಿಗೆ ಉಂಟಾದ ಹಾನಿಯಿಂದ ₹2,079 ಕೋಟಿ ನಷ್ಟವಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕೃಷಿ ಕ್ಷೇತ್ರದಲ್ಲಿ ₹829 ಕೋಟಿ, ತೋಟಗಾರಿಕೆಯಲ್ಲಿ ₹40 ಕೋಟಿ, ರೇಷ್ಮೆ ಕೃಷಿಯಲ್ಲಿ ₹65 ಲಕ್ಷ ನಷ್ಟವಾಗಿದೆ.</p><p>ಮೀನುಗಾರಿಕೆಯಲ್ಲಿ ₹1,270 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ ₹109 ಕೋಟಿ, ನೀರಾವರಿ ಇಲಾಖೆಯಲ್ಲಿ ₹207 ಕೋಟಿ, ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ ಇಲಾಖೆಯಲ್ಲಿ ₹1.2 ಕೋಟಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ₹ 9 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ₹ 1.52 ನಷ್ಟವಾಗಿದೆ.</p><p>ನೆರೆಯಿಂದಾದ ನಷ್ಟದ ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ, ಇದರಿಂದಾಗಿ ಚಂಡಮಾರುತದಿಂದ ಸಂಭವಿಸಬಹುದಾದ ಹಾನಿಯ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ವಿವರಿಸಿದರು.</p>.ಆಂಧ್ರಪ್ರದೇಶ | ‘ಮೊಂಥಾ’ ಅಬ್ಬರಕ್ಕೆ 87 ಸಾವಿರ ಎಕರೆ ಬೆಳೆ ಹಾನಿ.ಮೊಂಥಾ: ಆಂಧ್ರದಲ್ಲಿ ಮೂಲಸೌಕರ್ಯ ಪುನರ್ಸ್ಥಾಪಿಸಲು 11 ಸಾವಿರ ಸಿಬ್ಬಂದಿ ನಿಯೋಜನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ</strong>: ಮೊಂಥಾ ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದ ರಾಜ್ಯಕ್ಕೆ ₹5,265 ಕೋಟಿ ನಷ್ಟವಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ ಮಾಹಿತಿ ನೀಡಿದ್ದಾರೆ. </p><p>ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ರಸ್ತೆ ಮತ್ತು ಕಟ್ಟಡಗಳಿಗೆ ಉಂಟಾದ ಹಾನಿಯಿಂದ ₹2,079 ಕೋಟಿ ನಷ್ಟವಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕೃಷಿ ಕ್ಷೇತ್ರದಲ್ಲಿ ₹829 ಕೋಟಿ, ತೋಟಗಾರಿಕೆಯಲ್ಲಿ ₹40 ಕೋಟಿ, ರೇಷ್ಮೆ ಕೃಷಿಯಲ್ಲಿ ₹65 ಲಕ್ಷ ನಷ್ಟವಾಗಿದೆ.</p><p>ಮೀನುಗಾರಿಕೆಯಲ್ಲಿ ₹1,270 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ ₹109 ಕೋಟಿ, ನೀರಾವರಿ ಇಲಾಖೆಯಲ್ಲಿ ₹207 ಕೋಟಿ, ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಕೆ ಇಲಾಖೆಯಲ್ಲಿ ₹1.2 ಕೋಟಿ, ಪಂಚಾಯತ್ ರಾಜ್ ಇಲಾಖೆಯಲ್ಲಿ ₹ 9 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ₹ 1.52 ನಷ್ಟವಾಗಿದೆ.</p><p>ನೆರೆಯಿಂದಾದ ನಷ್ಟದ ಮಾಹಿತಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ, ಇದರಿಂದಾಗಿ ಚಂಡಮಾರುತದಿಂದ ಸಂಭವಿಸಬಹುದಾದ ಹಾನಿಯ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ವಿವರಿಸಿದರು.</p>.ಆಂಧ್ರಪ್ರದೇಶ | ‘ಮೊಂಥಾ’ ಅಬ್ಬರಕ್ಕೆ 87 ಸಾವಿರ ಎಕರೆ ಬೆಳೆ ಹಾನಿ.ಮೊಂಥಾ: ಆಂಧ್ರದಲ್ಲಿ ಮೂಲಸೌಕರ್ಯ ಪುನರ್ಸ್ಥಾಪಿಸಲು 11 ಸಾವಿರ ಸಿಬ್ಬಂದಿ ನಿಯೋಜನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>