<p><strong>ನವದೆಹಲಿ</strong>: ‘ನ್ಯಾಯಾಂಗವು ಯಾವ ರೀತಿಯ ಮಂತ್ರದಂಡವನ್ನು ಪ್ರಯೋಗಿಸಬೇಕು? ವಾಯು ಗುಣಮಟ್ಟವು ತೀರಾ ಹದಗೆಟ್ಟಿರುವುದು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ (ಎನ್ಸಿಆರ್) ಮಾರಕ ಎಂದು ತಿಳಿದಿದೆ. ಆದರೆ, ಇದಕ್ಕೆ ಪರಿಹಾರವೇನು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಪ್ರಶ್ನಿಸಿದರು.</p>.<p>ದೆಹಲಿ ಮತ್ತು ಎನ್ಸಿಆರ್ನಲ್ಲಿ ವಾಯು ಗುಣಮಟ್ಟ ಕುಸಿದಿರುವ ಕಾರಣ ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆಯನ್ನು ಡಿ.3ರಂದು ನಡೆಸಲು ಸಿಜೆಐ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯಾ ಬಾಗ್ಚಿ ಅವರ ಪೀಠವು ಗುರುವಾರ ಒಪ್ಪಿಗೆ ನೀಡಿದೆ. ‘ಈ ವಿಚಾರದ ಬಗ್ಗೆ ನಿರಂತರವಾಗಿಯೇ ಮೇಲ್ವಿಚಾರಣೆ ನಡೆಸಬೇಕು’ ಎಂದಿತು.</p>.<p>‘ವಾಯು ಗುಣಮಟ್ಟ ಎಷ್ಟು ಹದಗೆಟ್ಟಿದೆ ಎಂದರೆ, ದೆಹಲಿ ಮತ್ತು ಎನ್ಸಿಆರ್ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದೆ’ ಎಂದು ಹೇಳಿದ ಹಿರಿಯ ವಕೀಲ ಅಪರಾಜಿತ ಸಿಂಗ್ ಅವರ ಮಾತುಗಳನ್ನು ಪೀಠ ಉಲ್ಲೇಖಿಸಿತು. ವಾಯು ಗುಣಮಟ್ಟ ಕುಸಿತದ ಪ್ರಕರಣಗಳಲ್ಲಿ ಈ ಪೀಠಕ್ಕೆ ಅಪರಾಜಿತ ಸಿಂಗ್ ಅವರು ಅಮಿಕಸ್ ಕ್ಯೂರಿಯಾಗಿದ್ದಾರೆ.</p>.<p>‘ನಾವು ಏನು ನಿರ್ದೇಶನ ನೀಡಬೇಕು? ನಾವು ಕೆಲವು ನಿರ್ದೇಶನಗಳನ್ನು ನೀಡುತ್ತೇವೆ ಎಂದಿಟ್ಟುಕೊಳ್ಳಿ... ಆ ತಕ್ಷಣವೇ ನಾವು ಉತ್ತಮ ಗುಣಮಟ್ಟದ ಗಾಳಿಯನ್ನು ಉಸಿರಾಡುತ್ತೇವೆಯೇ? ಸರ್ಕಾರವು ಯಾವ ರೀತಿಯ ಸಮಿತಿಯನ್ನು ರಚಿಸುತ್ತದೆಯೋ ನೋಡೋಣ’ ಎಂದು ಸಿಜೆಐ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ನ್ಯಾಯಾಂಗವು ಯಾವ ರೀತಿಯ ಮಂತ್ರದಂಡವನ್ನು ಪ್ರಯೋಗಿಸಬೇಕು? ವಾಯು ಗುಣಮಟ್ಟವು ತೀರಾ ಹದಗೆಟ್ಟಿರುವುದು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ (ಎನ್ಸಿಆರ್) ಮಾರಕ ಎಂದು ತಿಳಿದಿದೆ. ಆದರೆ, ಇದಕ್ಕೆ ಪರಿಹಾರವೇನು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಪ್ರಶ್ನಿಸಿದರು.</p>.<p>ದೆಹಲಿ ಮತ್ತು ಎನ್ಸಿಆರ್ನಲ್ಲಿ ವಾಯು ಗುಣಮಟ್ಟ ಕುಸಿದಿರುವ ಕಾರಣ ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆಯನ್ನು ಡಿ.3ರಂದು ನಡೆಸಲು ಸಿಜೆಐ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯಾ ಬಾಗ್ಚಿ ಅವರ ಪೀಠವು ಗುರುವಾರ ಒಪ್ಪಿಗೆ ನೀಡಿದೆ. ‘ಈ ವಿಚಾರದ ಬಗ್ಗೆ ನಿರಂತರವಾಗಿಯೇ ಮೇಲ್ವಿಚಾರಣೆ ನಡೆಸಬೇಕು’ ಎಂದಿತು.</p>.<p>‘ವಾಯು ಗುಣಮಟ್ಟ ಎಷ್ಟು ಹದಗೆಟ್ಟಿದೆ ಎಂದರೆ, ದೆಹಲಿ ಮತ್ತು ಎನ್ಸಿಆರ್ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದೆ’ ಎಂದು ಹೇಳಿದ ಹಿರಿಯ ವಕೀಲ ಅಪರಾಜಿತ ಸಿಂಗ್ ಅವರ ಮಾತುಗಳನ್ನು ಪೀಠ ಉಲ್ಲೇಖಿಸಿತು. ವಾಯು ಗುಣಮಟ್ಟ ಕುಸಿತದ ಪ್ರಕರಣಗಳಲ್ಲಿ ಈ ಪೀಠಕ್ಕೆ ಅಪರಾಜಿತ ಸಿಂಗ್ ಅವರು ಅಮಿಕಸ್ ಕ್ಯೂರಿಯಾಗಿದ್ದಾರೆ.</p>.<p>‘ನಾವು ಏನು ನಿರ್ದೇಶನ ನೀಡಬೇಕು? ನಾವು ಕೆಲವು ನಿರ್ದೇಶನಗಳನ್ನು ನೀಡುತ್ತೇವೆ ಎಂದಿಟ್ಟುಕೊಳ್ಳಿ... ಆ ತಕ್ಷಣವೇ ನಾವು ಉತ್ತಮ ಗುಣಮಟ್ಟದ ಗಾಳಿಯನ್ನು ಉಸಿರಾಡುತ್ತೇವೆಯೇ? ಸರ್ಕಾರವು ಯಾವ ರೀತಿಯ ಸಮಿತಿಯನ್ನು ರಚಿಸುತ್ತದೆಯೋ ನೋಡೋಣ’ ಎಂದು ಸಿಜೆಐ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>