<p><strong>ನವದೆಹಲಿ:</strong> ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಓರ್ವ ಮಹಿಳೆ ಹಾಗೂ ಐದು ವರ್ಷದ ಮಗುವನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.</p><p>ಗುರುವಾರ ಸಂಜೆ 5.30ಕ್ಕೆ ಘಟನೆ ನಡೆದಿದೆ. ತಾರಾ ಅಪಾರ್ಟ್ಮೆಂಟ್ನ ಸಮೀಪ ಇರುವ ಸಿಗ್ನಲ್ನಲ್ಲಿ ಕಾಯುತ್ತಿದ್ದ ವೇಳೆ ಮರ್ಸಿಡೀಸ್ ಬೆಂಜ್ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.</p>.ಹವಾಲ ಮೂಲಕ ದುಬೈನಲ್ಲಿ ಭಾರತೀಯರ ಅಕ್ರಮ ಆಸ್ತಿ : ದೆಹಲಿ, ಗೋವಾದಲ್ಲಿ ಇ.ಡಿ ದಾಳಿ.<p>ನಿಯಂತ್ರಣ ಕೊಠಡಿಗೆ ಕರೆ ಬಂದ ಕೂಡಲೇ ಪೊಲೀಸರು ಹಾಗೂ ಸಂಚಾರ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.</p><p>‘ಈ ವೇಳೆ ಅಸಾಧಾರಣ ಧೈರ್ಯ ಹಾಗೂ ಸಮಯಪ್ರಜ್ಞೆ ತೋರಿಸಿದ್ದ ಪೊಲೀಸ್ ಸಿಬ್ಬಂದಿಯ ತಂಡ ಕಲ್ಕಾಜಿ ಬಡಾವಣೆಯ ನಿವಾಸಿ 38 ವರ್ಷ ಮಹಿಳೆ ಹಾಗೂ ಅವರ ಐದು ವರ್ಷದ ಮಗುವನ್ನು ಉರಿಯುತ್ತಿದ್ದ ಕಾರಿನಿಂದ ಸುರಕ್ಷಿತವಾಗಿ ರಕ್ಷಿಸಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.‘ಫಾಸಿ ಘರ್’ ವಿವಾದ: ಕೇಜ್ರಿವಾಲ್, ಸಿಸೋಡಿಯಾಗೆ ದೆಹಲಿ ವಿಧಾನಸಭೆ ನೋಟಿಸ್.<p>ಬೆಂಕಿ ಹೆಚ್ಚಾಗುತ್ತಿದ್ದಂತೆಯೇ, ದೆಹಲಿ ಜಲ ಮಂಡಲಿಯ ನೀರಿನ ಟ್ಯಾಂಕರ್ ತರಿಸಿ ಬೆಂಕಿಯನ್ನು ಆರಿಸಲಾಗಿದೆ. ತ್ವರಿತ ಸಮನ್ವಯ ಮತ್ತು ಪ್ರಯತ್ನಗಳಿಂದ ಬೆಂಕಿಯನ್ನು ನಂದಿಸಿ, ಪ್ರಾಣಹಾನಿ ಅಥವಾ ಹತ್ತಿರದ ವಾಹನಗಳಿಗೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಘಟನೆಯ ಬಳಿಕ ತನ್ನನ್ನು ಹಾಗೂ ಮಗುವನ್ನು ರಕ್ಷಣೆ ಮಾಡಿದ್ದಕ್ಕೆ ಪೊಲೀಸರಿಗೆ ಮಹಿಳೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.</p>.ದೆಹಲಿ ದೇಶದ ಆರನೇ ಕಲುಷಿತ ನಗರಿ: ವರದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಓರ್ವ ಮಹಿಳೆ ಹಾಗೂ ಐದು ವರ್ಷದ ಮಗುವನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.</p><p>ಗುರುವಾರ ಸಂಜೆ 5.30ಕ್ಕೆ ಘಟನೆ ನಡೆದಿದೆ. ತಾರಾ ಅಪಾರ್ಟ್ಮೆಂಟ್ನ ಸಮೀಪ ಇರುವ ಸಿಗ್ನಲ್ನಲ್ಲಿ ಕಾಯುತ್ತಿದ್ದ ವೇಳೆ ಮರ್ಸಿಡೀಸ್ ಬೆಂಜ್ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.</p>.ಹವಾಲ ಮೂಲಕ ದುಬೈನಲ್ಲಿ ಭಾರತೀಯರ ಅಕ್ರಮ ಆಸ್ತಿ : ದೆಹಲಿ, ಗೋವಾದಲ್ಲಿ ಇ.ಡಿ ದಾಳಿ.<p>ನಿಯಂತ್ರಣ ಕೊಠಡಿಗೆ ಕರೆ ಬಂದ ಕೂಡಲೇ ಪೊಲೀಸರು ಹಾಗೂ ಸಂಚಾರ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.</p><p>‘ಈ ವೇಳೆ ಅಸಾಧಾರಣ ಧೈರ್ಯ ಹಾಗೂ ಸಮಯಪ್ರಜ್ಞೆ ತೋರಿಸಿದ್ದ ಪೊಲೀಸ್ ಸಿಬ್ಬಂದಿಯ ತಂಡ ಕಲ್ಕಾಜಿ ಬಡಾವಣೆಯ ನಿವಾಸಿ 38 ವರ್ಷ ಮಹಿಳೆ ಹಾಗೂ ಅವರ ಐದು ವರ್ಷದ ಮಗುವನ್ನು ಉರಿಯುತ್ತಿದ್ದ ಕಾರಿನಿಂದ ಸುರಕ್ಷಿತವಾಗಿ ರಕ್ಷಿಸಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>.‘ಫಾಸಿ ಘರ್’ ವಿವಾದ: ಕೇಜ್ರಿವಾಲ್, ಸಿಸೋಡಿಯಾಗೆ ದೆಹಲಿ ವಿಧಾನಸಭೆ ನೋಟಿಸ್.<p>ಬೆಂಕಿ ಹೆಚ್ಚಾಗುತ್ತಿದ್ದಂತೆಯೇ, ದೆಹಲಿ ಜಲ ಮಂಡಲಿಯ ನೀರಿನ ಟ್ಯಾಂಕರ್ ತರಿಸಿ ಬೆಂಕಿಯನ್ನು ಆರಿಸಲಾಗಿದೆ. ತ್ವರಿತ ಸಮನ್ವಯ ಮತ್ತು ಪ್ರಯತ್ನಗಳಿಂದ ಬೆಂಕಿಯನ್ನು ನಂದಿಸಿ, ಪ್ರಾಣಹಾನಿ ಅಥವಾ ಹತ್ತಿರದ ವಾಹನಗಳಿಗೆ ಹಾನಿಯಾಗುವುದನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಘಟನೆಯ ಬಳಿಕ ತನ್ನನ್ನು ಹಾಗೂ ಮಗುವನ್ನು ರಕ್ಷಣೆ ಮಾಡಿದ್ದಕ್ಕೆ ಪೊಲೀಸರಿಗೆ ಮಹಿಳೆ ಧನ್ಯವಾದ ಅರ್ಪಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.</p>.ದೆಹಲಿ ದೇಶದ ಆರನೇ ಕಲುಷಿತ ನಗರಿ: ವರದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>