<p><strong>ನವದೆಹಲಿ:</strong> ದೆಹಲಿಯಲ್ಲಿ ರಸ್ತೆ ದೂಳು ಮಾಲಿನ್ಯ ನಿಯಂತ್ರಣ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಯೋಜನೆಗೆ 10 ವರ್ಷಗಳ ಅವಧಿಯಲ್ಲಿ ₹2,388 ಕೋಟಿ ವೆಚ್ಚವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. </p>.<p>ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ಸಂಪುಟ ಸಭೆಯಲ್ಲಿ ‘ಮಾಲಿನ್ಯ ನಿಯಂತ್ರಣ ಮತ್ತು ತುರ್ತು ಕ್ರಮಗಳು’ ಯೋಜನೆಗೆ ಅನುಮೋದನೆ ನೀಡಲಾಯಿತು.</p>.<p>ಈ ಯೋಜನೆ ಅಡಿಯಲ್ಲಿ ₹1,158 ಅಂದಾಜು ವೆಚ್ಚದಲ್ಲಿ ಹೊಗೆ ನಿರೋಧಕ ಗನ್ಗಳನ್ನು ಅಳವಡಿಸಲಾದ ನೀರು ಸಿಂಪಡಣಾ ಯಂತ್ರಗಳನ್ನು ಬಳಸಲಾಗುತ್ತದೆ. ಅಲ್ಲದೇ, ರಸ್ತೆ ಗುಡಿಸುವ 70 ಯಂತ್ರಗಳು (ಎಮ್ಆರ್ಎಸ್), 210 ನೀರು ಸಿಂಪಡಣಾ ಯಂತ್ರಗಳು, ನೀರಿನ ಟ್ಯಾಂಕರ್ಗಳು ಹಾಗೂ ಹೊಗೆ ನಿರೋಧಕ ಗನ್ಗಳನ್ನು 7 ವರ್ಷದ ಅವಧಿಗೆ ₹1,230 ಕೋಟಿಗೆ ಬಾಡಿಗೆಗೆ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮಳೆಗಾಲ ಹೊರತುಪಡಿಸಿ, ವರ್ಷವಿಡೀ ಈ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯು ಕಾರ್ಯಗತಗೊಳಿಸಲಿದೆ.</p>.<p>ದೆಹಲಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಈ ಯೋಜನೆ ಕೈಗೊಳ್ಳಲಾಗಿದೆ. ಈ ವಿಧಾನವು ಗಾಳಿಯಲ್ಲಿನ ಪಿಎಮ್–10ನ ಸಾಂದ್ರತೆಯನ್ನು ಕಡಿಮೆ ಮಾಡುವಲ್ಲಿ ಶೇ55ರಷ್ಟು ಪರಿಣಾಮಕಾರಿಯಾಗಿರಲಿದೆ ಎಂದು ವರದಿಯಾಗಿದೆ. </p>.<p>ರೇಖಾ ಗುಪ್ತಾ ಹಾಗೂ ಪರಿಸರ ಸಚಿವರಾದ ಮಂಜಿಂದರ್ ಸಿಂಗ್ ಸಿರ್ಸಾ ಯೋಜನೆಯನ್ನು ಉದ್ಘಾಟಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೆಹಲಿಯಲ್ಲಿ ರಸ್ತೆ ದೂಳು ಮಾಲಿನ್ಯ ನಿಯಂತ್ರಣ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಯೋಜನೆಗೆ 10 ವರ್ಷಗಳ ಅವಧಿಯಲ್ಲಿ ₹2,388 ಕೋಟಿ ವೆಚ್ಚವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. </p>.<p>ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ಸಂಪುಟ ಸಭೆಯಲ್ಲಿ ‘ಮಾಲಿನ್ಯ ನಿಯಂತ್ರಣ ಮತ್ತು ತುರ್ತು ಕ್ರಮಗಳು’ ಯೋಜನೆಗೆ ಅನುಮೋದನೆ ನೀಡಲಾಯಿತು.</p>.<p>ಈ ಯೋಜನೆ ಅಡಿಯಲ್ಲಿ ₹1,158 ಅಂದಾಜು ವೆಚ್ಚದಲ್ಲಿ ಹೊಗೆ ನಿರೋಧಕ ಗನ್ಗಳನ್ನು ಅಳವಡಿಸಲಾದ ನೀರು ಸಿಂಪಡಣಾ ಯಂತ್ರಗಳನ್ನು ಬಳಸಲಾಗುತ್ತದೆ. ಅಲ್ಲದೇ, ರಸ್ತೆ ಗುಡಿಸುವ 70 ಯಂತ್ರಗಳು (ಎಮ್ಆರ್ಎಸ್), 210 ನೀರು ಸಿಂಪಡಣಾ ಯಂತ್ರಗಳು, ನೀರಿನ ಟ್ಯಾಂಕರ್ಗಳು ಹಾಗೂ ಹೊಗೆ ನಿರೋಧಕ ಗನ್ಗಳನ್ನು 7 ವರ್ಷದ ಅವಧಿಗೆ ₹1,230 ಕೋಟಿಗೆ ಬಾಡಿಗೆಗೆ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮಳೆಗಾಲ ಹೊರತುಪಡಿಸಿ, ವರ್ಷವಿಡೀ ಈ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯು ಕಾರ್ಯಗತಗೊಳಿಸಲಿದೆ.</p>.<p>ದೆಹಲಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಈ ಯೋಜನೆ ಕೈಗೊಳ್ಳಲಾಗಿದೆ. ಈ ವಿಧಾನವು ಗಾಳಿಯಲ್ಲಿನ ಪಿಎಮ್–10ನ ಸಾಂದ್ರತೆಯನ್ನು ಕಡಿಮೆ ಮಾಡುವಲ್ಲಿ ಶೇ55ರಷ್ಟು ಪರಿಣಾಮಕಾರಿಯಾಗಿರಲಿದೆ ಎಂದು ವರದಿಯಾಗಿದೆ. </p>.<p>ರೇಖಾ ಗುಪ್ತಾ ಹಾಗೂ ಪರಿಸರ ಸಚಿವರಾದ ಮಂಜಿಂದರ್ ಸಿಂಗ್ ಸಿರ್ಸಾ ಯೋಜನೆಯನ್ನು ಉದ್ಘಾಟಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>