<p><strong>ನವದೆಹಲಿ</strong>: ನವದೆಹಲಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಯಮುನಾ ನದಿಯ ಸ್ವಚ್ಛತೆ ಸೇರಿದಂತೆ ವಿವಿಧ ಭರವಸೆಗಳುಳ್ಳ ಪ್ರಣಾಳಿಕೆಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿತು.</p>.<p>ದೆಹಲಿಯಲ್ಲಿರುವ 1,700 ಅನಧಿಕೃತ ಕಾಲೊನಿಗಳ ನಿವಾಸಿಗಳಿಗೆ ಮಾಲೀಕತ್ವದ ಪೂರ್ಣ ಹಕ್ಕು ನೀಡುವುದು, ಗಿಗ್ ನೌಕರರ ಏಳಿಗೆಗಾಗಿ ಕಲ್ಯಾಣ ಮಂಡಳಿ ರಚನೆ, ವಿಮಾ ಭದ್ರತೆ ಭರವಸೆಗಳು ಸೇರಿವೆ.</p>.<p>ಬಿಜೆಪಿ ‘ಸಂಕಲ್ಪ ಪತ್ರ’ದ ಅಂತಿಮ ಭಾಗವನ್ನು ಹಿರಿಯ ಮುಖಂಡ ಅಮಿತ್ ಶಾ ಬಿಡುಗಡೆ ಮಾಡಿದರು. </p> <p>ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿರುವ ಇತರೆ ಭರವಸೆಗಳು...</p> <p>* ವಿದ್ಯಾರ್ಥಿಗಳಿಗೆ ವಾರ್ಷಿಕ ₹4,000 ಮೊತ್ತದವರೆಗೂ ದೆಹಲಿ ಮೆಟ್ರೊದಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ</p>.<p>* ಗಿಗ್ ನೌಕರರ ಏಳಿಗೆಗಾಗಿ ಕಲ್ಯಾಣ ಮಂಡಳಿ ರಚನೆ. ₹10 ಲಕ್ಷ ಮೌಲ್ಯದ ವಿಮಾ ಭದ್ರತೆ, ₹5 ಲಕ್ಷದವರೆಗೆ ಅಪಘಾತ ವಿಮೆ ಸೌಲಭ್ಯ</p>.<p>* ಪಾರದರ್ಶಕ ಕ್ರಮದಲ್ಲಿ 50 ಸಾವಿರ ಉದ್ಯೋಗ ಭರ್ತಿ. 20 ಲಕ್ಷ ಮಂದಿ ಸ್ವ ಉದ್ಯೋಗ ಅವಕಾಶ ಕಲ್ಪಿಸಲು ಗ್ರಾಂಡ್ ಮಹಾಭಾರತ್ ಕಾರಿಡಾರ್ ರಚನೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ನವದೆಹಲಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಯಮುನಾ ನದಿಯ ಸ್ವಚ್ಛತೆ ಸೇರಿದಂತೆ ವಿವಿಧ ಭರವಸೆಗಳುಳ್ಳ ಪ್ರಣಾಳಿಕೆಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿತು.</p>.<p>ದೆಹಲಿಯಲ್ಲಿರುವ 1,700 ಅನಧಿಕೃತ ಕಾಲೊನಿಗಳ ನಿವಾಸಿಗಳಿಗೆ ಮಾಲೀಕತ್ವದ ಪೂರ್ಣ ಹಕ್ಕು ನೀಡುವುದು, ಗಿಗ್ ನೌಕರರ ಏಳಿಗೆಗಾಗಿ ಕಲ್ಯಾಣ ಮಂಡಳಿ ರಚನೆ, ವಿಮಾ ಭದ್ರತೆ ಭರವಸೆಗಳು ಸೇರಿವೆ.</p>.<p>ಬಿಜೆಪಿ ‘ಸಂಕಲ್ಪ ಪತ್ರ’ದ ಅಂತಿಮ ಭಾಗವನ್ನು ಹಿರಿಯ ಮುಖಂಡ ಅಮಿತ್ ಶಾ ಬಿಡುಗಡೆ ಮಾಡಿದರು. </p> <p>ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿರುವ ಇತರೆ ಭರವಸೆಗಳು...</p> <p>* ವಿದ್ಯಾರ್ಥಿಗಳಿಗೆ ವಾರ್ಷಿಕ ₹4,000 ಮೊತ್ತದವರೆಗೂ ದೆಹಲಿ ಮೆಟ್ರೊದಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ</p>.<p>* ಗಿಗ್ ನೌಕರರ ಏಳಿಗೆಗಾಗಿ ಕಲ್ಯಾಣ ಮಂಡಳಿ ರಚನೆ. ₹10 ಲಕ್ಷ ಮೌಲ್ಯದ ವಿಮಾ ಭದ್ರತೆ, ₹5 ಲಕ್ಷದವರೆಗೆ ಅಪಘಾತ ವಿಮೆ ಸೌಲಭ್ಯ</p>.<p>* ಪಾರದರ್ಶಕ ಕ್ರಮದಲ್ಲಿ 50 ಸಾವಿರ ಉದ್ಯೋಗ ಭರ್ತಿ. 20 ಲಕ್ಷ ಮಂದಿ ಸ್ವ ಉದ್ಯೋಗ ಅವಕಾಶ ಕಲ್ಪಿಸಲು ಗ್ರಾಂಡ್ ಮಹಾಭಾರತ್ ಕಾರಿಡಾರ್ ರಚನೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>