<p><strong>ಹೈದರಾಬಾದ್</strong>: ಭಾರತದ ಜನಸಂಖ್ಯೆಯಲ್ಲಿ ಶೇ 0.5ರಷ್ಟಿರುವ ಜೈನ ಸಮುದಾಯದಿಂದ ಶೇ 24ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.</p>.<p>ಮೂರು ದಿನಗಳ ಜೆಐಟಿಒ ಕನೆಕ್ಟ್ 2025 (ಜೈನ ಅಂತರರಾಷ್ಟ್ರೀಯ ವ್ಯಾಪರ ಸಂಸ್ಥೆ) ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯವು ಜಗತ್ತಿನ ಅತ್ಯಂತ ಪರಿಶ್ರಮ ಜೀವಿಗಳಿರುವ ಸಮೃದ್ಧ ಸಮಾಜವೆಂದು ಪರಿಗಣಿಸಲಾಗಿದೆ ಎಂದರು.</p>.<p>ಈ ಸಮುದಾಯವು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾಗಿ ಬೇರೂರಿದೆ. ಅದರ ಇತಿಹಾಸವು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉನ್ನತಿಗೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.</p>.<p>ಭಾರತದ ಆರ್ಥಿಕತೆಯಲ್ಲಿ ಜೈನ ಸಮುದಾಯದ ಕೊಡುಗೆ ಮಹತ್ವದ್ದು. ಔಷಧ, ಶಿಕ್ಷಣ ಮತ್ತು ವಾಯುಯಾನ ಕ್ಷೇತ್ರದಲ್ಲೂ ಜೈನರು ಮುಂದಿದ್ದಾರೆ ಎಂದು ಸಿಂಗ್ ಹೇಳಿದರು.</p><p>---</p>.<p><strong>ಪಾಕಿಸ್ತಾನ ವಿರುದ್ಧದ ದಾಳಿ ವೇಳೆ ಭಾರತ ಧರ್ಮವನ್ನು ನೋಡಿಲ್ಲ. ಪ್ರಜೆಗಳ ರಕ್ಷಣೆ ಮತ್ತು ಭಾರತದ ಏಕತೆ– ಸಮಗ್ರತೆಗಾಗಿ ದೇಶವು ಯಾವುದೇ ಗಡಿಯನ್ನು ಬೇಕಾದರೂ ದಾಟಬಲ್ಲದು</strong></p><p><strong>-ರಾಜನಾಥ್ ಸಿಂಗ್ ರಕ್ಷಣಾ ಸಚಿವ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಭಾರತದ ಜನಸಂಖ್ಯೆಯಲ್ಲಿ ಶೇ 0.5ರಷ್ಟಿರುವ ಜೈನ ಸಮುದಾಯದಿಂದ ಶೇ 24ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ.</p>.<p>ಮೂರು ದಿನಗಳ ಜೆಐಟಿಒ ಕನೆಕ್ಟ್ 2025 (ಜೈನ ಅಂತರರಾಷ್ಟ್ರೀಯ ವ್ಯಾಪರ ಸಂಸ್ಥೆ) ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯವು ಜಗತ್ತಿನ ಅತ್ಯಂತ ಪರಿಶ್ರಮ ಜೀವಿಗಳಿರುವ ಸಮೃದ್ಧ ಸಮಾಜವೆಂದು ಪರಿಗಣಿಸಲಾಗಿದೆ ಎಂದರು.</p>.<p>ಈ ಸಮುದಾಯವು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾಗಿ ಬೇರೂರಿದೆ. ಅದರ ಇತಿಹಾಸವು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉನ್ನತಿಗೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.</p>.<p>ಭಾರತದ ಆರ್ಥಿಕತೆಯಲ್ಲಿ ಜೈನ ಸಮುದಾಯದ ಕೊಡುಗೆ ಮಹತ್ವದ್ದು. ಔಷಧ, ಶಿಕ್ಷಣ ಮತ್ತು ವಾಯುಯಾನ ಕ್ಷೇತ್ರದಲ್ಲೂ ಜೈನರು ಮುಂದಿದ್ದಾರೆ ಎಂದು ಸಿಂಗ್ ಹೇಳಿದರು.</p><p>---</p>.<p><strong>ಪಾಕಿಸ್ತಾನ ವಿರುದ್ಧದ ದಾಳಿ ವೇಳೆ ಭಾರತ ಧರ್ಮವನ್ನು ನೋಡಿಲ್ಲ. ಪ್ರಜೆಗಳ ರಕ್ಷಣೆ ಮತ್ತು ಭಾರತದ ಏಕತೆ– ಸಮಗ್ರತೆಗಾಗಿ ದೇಶವು ಯಾವುದೇ ಗಡಿಯನ್ನು ಬೇಕಾದರೂ ದಾಟಬಲ್ಲದು</strong></p><p><strong>-ರಾಜನಾಥ್ ಸಿಂಗ್ ರಕ್ಷಣಾ ಸಚಿವ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>