<p><strong>ವೈಕಂ (ಕೇರಳ):</strong> ತಮಿಳುನಾಡು ಸರ್ಕಾರ ನೀಡುವ 2024ನೇ ಸಾಲಿನ ಚೊಚ್ಚಲ ‘ವೈಕಂ’ ಪ್ರಶಸ್ತಿಯನ್ನು ಸಾಹಿತಿ ದೇವನೂರ ಮಹಾದೇವ ಅವರಿಗೆ ಕೇರಳದ ವೈಕಂನಲ್ಲಿ ಗುರುವಾರ ಪ್ರದಾನ ಮಾಡಲಾಯಿತು.</p>.<p>ಪೆರಿಯಾರ್ ನೇತೃತ್ವದ ವೈಕಂ ಹೋರಾಟದ ಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಪೆರಿಯಾರ್ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.</p>.<p>ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿಗಳಿಬ್ಬರೂ ಪೆರಿಯಾರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಪೆರಿಯಾರ್ ಅವರ ಜೀವನ, ಚಳವಳಿ-ಹೋರಾಟದ ಚಿತ್ರಗಳಿರುವ ಚಿತ್ರಸಂಗ್ರಹಾಲಯ ಹಾಗೂ ಗ್ರಂಥಾಲಯವನ್ನು ಉದ್ಘಾಟಿಸಿದರು.</p>.<p>ಪಿಣರಾಯಿ ವಿಜಯನ್ ಅವರು ಮಾತನಾಡಿ, ‘ಇಂದಿನ ಜನಸಮುದಾಯಕ್ಕೆ ಅರಿವು, ವಿದ್ಯಾಭ್ಯಾಸ, ಲೋಕಜ್ಞಾನ, ಸ್ವಾಭಿಮಾನ ಅತ್ಯಗತ್ಯ ಎಂಬುದನ್ನು ಪೆರಿಯಾರ್ ಅವರು ಅಂದೇ ತಿಳಿಸಿದ್ದರು. ಪೆರಿಯಾರ್ ಅವರ ಪತ್ನಿ ನಾಗಮ್ಮ ಅವರ ಸಮುದಾಯ ಸೇವೆಯೂ ಸ್ಮರಣೀಯ’ ಎಂದರು.</p>.<p>ಸ್ಟಾಲಿನ್ ಅವರು, ವೈಕಂ ಸ್ಥಳ ಹಾಗೂ ಇಲ್ಲಿನ ಸತ್ಯಾಗ್ರಹದ ಮಹತ್ವ ತಿಳಿಸಿದರು. ‘ತಳಸಮುದಾಯದ ಧ್ವನಿಯಾಗಿ ನಿಂತ ದೇವನೂರ ಮಹಾದೇವ ಅವರಿಗೆ ‘ವೈಕಂ ಸತ್ಯಾಗ್ರಹ’ದ ಶತಮಾನೋತ್ಸವ ಸ್ಮರಣಾರ್ಥ ಮೊದಲ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ’ ಎಂದು ಹೇಳಿದರು.</p>.<p>ಇಬ್ಬರೂ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದ ಪರವಾಗಿ ಮತ್ತು ಬ್ರಾಹ್ಮಣಶಾಹಿಯ ವಿರುದ್ಧವಾಗಿ ಮಾತನಾಡಿದರು.</p>.<p>ದೇವನೂರ ಮಹಾದೇವ ಅವರು ಸ್ಟಾಲಿನ್ ಅವರಿಗೆ ತಮಿಳು ಮತ್ತು ಕನ್ನಡದ ಪುಸ್ತಕಗಳನ್ನು ಹಾಗೂ ಪಿಣರಾಯಿ ವಿಜಯನ್ ಅವರಿಗೆ ಮಲಯಾಳ, ಕನ್ನಡ ಪುಸ್ತಕಗಳನ್ನು ನೀಡಿದರು. ದ್ರಾವಿಡ ಕಳಗಂನ ಅಧ್ಯಕ್ಷ ಕೆ.ವೀರಾಸಾಮಿಯವರಿಗೆ ‘ಆರ್ಎಸ್ಎಸ್ ಆಳ-ಅಗಲ’ ಪುಸ್ತಕಗಳನ್ನು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೈಕಂ (ಕೇರಳ):</strong> ತಮಿಳುನಾಡು ಸರ್ಕಾರ ನೀಡುವ 2024ನೇ ಸಾಲಿನ ಚೊಚ್ಚಲ ‘ವೈಕಂ’ ಪ್ರಶಸ್ತಿಯನ್ನು ಸಾಹಿತಿ ದೇವನೂರ ಮಹಾದೇವ ಅವರಿಗೆ ಕೇರಳದ ವೈಕಂನಲ್ಲಿ ಗುರುವಾರ ಪ್ರದಾನ ಮಾಡಲಾಯಿತು.</p>.<p>ಪೆರಿಯಾರ್ ನೇತೃತ್ವದ ವೈಕಂ ಹೋರಾಟದ ಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಪೆರಿಯಾರ್ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.</p>.<p>ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿಗಳಿಬ್ಬರೂ ಪೆರಿಯಾರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಪೆರಿಯಾರ್ ಅವರ ಜೀವನ, ಚಳವಳಿ-ಹೋರಾಟದ ಚಿತ್ರಗಳಿರುವ ಚಿತ್ರಸಂಗ್ರಹಾಲಯ ಹಾಗೂ ಗ್ರಂಥಾಲಯವನ್ನು ಉದ್ಘಾಟಿಸಿದರು.</p>.<p>ಪಿಣರಾಯಿ ವಿಜಯನ್ ಅವರು ಮಾತನಾಡಿ, ‘ಇಂದಿನ ಜನಸಮುದಾಯಕ್ಕೆ ಅರಿವು, ವಿದ್ಯಾಭ್ಯಾಸ, ಲೋಕಜ್ಞಾನ, ಸ್ವಾಭಿಮಾನ ಅತ್ಯಗತ್ಯ ಎಂಬುದನ್ನು ಪೆರಿಯಾರ್ ಅವರು ಅಂದೇ ತಿಳಿಸಿದ್ದರು. ಪೆರಿಯಾರ್ ಅವರ ಪತ್ನಿ ನಾಗಮ್ಮ ಅವರ ಸಮುದಾಯ ಸೇವೆಯೂ ಸ್ಮರಣೀಯ’ ಎಂದರು.</p>.<p>ಸ್ಟಾಲಿನ್ ಅವರು, ವೈಕಂ ಸ್ಥಳ ಹಾಗೂ ಇಲ್ಲಿನ ಸತ್ಯಾಗ್ರಹದ ಮಹತ್ವ ತಿಳಿಸಿದರು. ‘ತಳಸಮುದಾಯದ ಧ್ವನಿಯಾಗಿ ನಿಂತ ದೇವನೂರ ಮಹಾದೇವ ಅವರಿಗೆ ‘ವೈಕಂ ಸತ್ಯಾಗ್ರಹ’ದ ಶತಮಾನೋತ್ಸವ ಸ್ಮರಣಾರ್ಥ ಮೊದಲ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ’ ಎಂದು ಹೇಳಿದರು.</p>.<p>ಇಬ್ಬರೂ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದ ಪರವಾಗಿ ಮತ್ತು ಬ್ರಾಹ್ಮಣಶಾಹಿಯ ವಿರುದ್ಧವಾಗಿ ಮಾತನಾಡಿದರು.</p>.<p>ದೇವನೂರ ಮಹಾದೇವ ಅವರು ಸ್ಟಾಲಿನ್ ಅವರಿಗೆ ತಮಿಳು ಮತ್ತು ಕನ್ನಡದ ಪುಸ್ತಕಗಳನ್ನು ಹಾಗೂ ಪಿಣರಾಯಿ ವಿಜಯನ್ ಅವರಿಗೆ ಮಲಯಾಳ, ಕನ್ನಡ ಪುಸ್ತಕಗಳನ್ನು ನೀಡಿದರು. ದ್ರಾವಿಡ ಕಳಗಂನ ಅಧ್ಯಕ್ಷ ಕೆ.ವೀರಾಸಾಮಿಯವರಿಗೆ ‘ಆರ್ಎಸ್ಎಸ್ ಆಳ-ಅಗಲ’ ಪುಸ್ತಕಗಳನ್ನು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>