<p><strong>ಲಖೀಂಪುರ ಖೇರಿ (ಉ.ಪ್ರದೇಶ):</strong> ಆಧ್ಯಾತ್ಮಿಕ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಡಬಲ್ ಎಂಜಿನ್ ಸರ್ಕಾರವು ಉತ್ತೇಜನ ನೀಡಲಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಶನಿವಾರ) ಹೇಳಿದ್ದಾರೆ. </p><p>ಲಖೀಂಪುರ ಖೇರಿಯ ಗೋಲ ಗೋಕರ್ಣನಾಥ ರಾಜೇಂದ್ರ ಗಿರಿ ಸ್ಮಾರಕ ಕ್ರೀಡಾಂಗಣದಲ್ಲಿ ₹1,622 ಕೋಟಿಯ 373 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. </p><p>ಈ ಮಹತ್ತರ ಯೋಜನೆಯಲ್ಲಿ ಗೋಲ ಗೋಕರ್ಣನಾಥ ಶಿವ ದೇವಾಲಯ ಕಾರಿಡಾರ್ ಸೇರಿದೆ. </p><p>ಈ ವೇಳೆ ಮಾತನಾಡಿದ ಆದಿತ್ಯನಾಥ್, 'ಲಖೀಂಪುರ ಖೇರಿ ಹಿಂದುಳಿದ ಜಿಲ್ಲೆಯಲ್ಲ. ಇಲ್ಲಿನ ಫಲವತ್ತಾದ ಭೂಮಿ ಚಿನ್ನದಂತೆ' ಎಂದು ಹೇಳಿದ್ದಾರೆ. </p><p>'ಕೇಂದ್ರ ಹಾಗೂ ರಾಜ್ಯ ಸೇರಿದಂತೆ ಡಬಲ್ ಎಂಜಿನ್ ಸರ್ಕಾರವು ಆಧ್ಯಾತ್ಮಿಕ ಹಾಗೂ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಹೆಚ್ಚಿಸಲಿದೆ. ಆ ಮೂಲಕ ಉದ್ಯೋಗದ ಅಭಾವ ಎದುರಾಗದಂತೆ ನೋಡಿಕೊಳ್ಳಲಿದೆ' ಎಂದು ಹೇಳಿದ್ದಾರೆ. </p>.ಮಹಾ ಕುಂಭ, ಸನಾತನ ಧರ್ಮಕ್ಕೆ ಅಗೌರವ ಸಹಿಸಲ್ಲ: ಯೋಗಿ ಆದಿತ್ಯನಾಥ್ .ಕುಂಭಮೇಳದ ಕುರಿತು ಆರೋಪ ಆಧಾರರಹಿತ: ಯೋಗಿ ಆದಿತ್ಯನಾಥ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖೀಂಪುರ ಖೇರಿ (ಉ.ಪ್ರದೇಶ):</strong> ಆಧ್ಯಾತ್ಮಿಕ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಡಬಲ್ ಎಂಜಿನ್ ಸರ್ಕಾರವು ಉತ್ತೇಜನ ನೀಡಲಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಶನಿವಾರ) ಹೇಳಿದ್ದಾರೆ. </p><p>ಲಖೀಂಪುರ ಖೇರಿಯ ಗೋಲ ಗೋಕರ್ಣನಾಥ ರಾಜೇಂದ್ರ ಗಿರಿ ಸ್ಮಾರಕ ಕ್ರೀಡಾಂಗಣದಲ್ಲಿ ₹1,622 ಕೋಟಿಯ 373 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. </p><p>ಈ ಮಹತ್ತರ ಯೋಜನೆಯಲ್ಲಿ ಗೋಲ ಗೋಕರ್ಣನಾಥ ಶಿವ ದೇವಾಲಯ ಕಾರಿಡಾರ್ ಸೇರಿದೆ. </p><p>ಈ ವೇಳೆ ಮಾತನಾಡಿದ ಆದಿತ್ಯನಾಥ್, 'ಲಖೀಂಪುರ ಖೇರಿ ಹಿಂದುಳಿದ ಜಿಲ್ಲೆಯಲ್ಲ. ಇಲ್ಲಿನ ಫಲವತ್ತಾದ ಭೂಮಿ ಚಿನ್ನದಂತೆ' ಎಂದು ಹೇಳಿದ್ದಾರೆ. </p><p>'ಕೇಂದ್ರ ಹಾಗೂ ರಾಜ್ಯ ಸೇರಿದಂತೆ ಡಬಲ್ ಎಂಜಿನ್ ಸರ್ಕಾರವು ಆಧ್ಯಾತ್ಮಿಕ ಹಾಗೂ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಹೆಚ್ಚಿಸಲಿದೆ. ಆ ಮೂಲಕ ಉದ್ಯೋಗದ ಅಭಾವ ಎದುರಾಗದಂತೆ ನೋಡಿಕೊಳ್ಳಲಿದೆ' ಎಂದು ಹೇಳಿದ್ದಾರೆ. </p>.ಮಹಾ ಕುಂಭ, ಸನಾತನ ಧರ್ಮಕ್ಕೆ ಅಗೌರವ ಸಹಿಸಲ್ಲ: ಯೋಗಿ ಆದಿತ್ಯನಾಥ್ .ಕುಂಭಮೇಳದ ಕುರಿತು ಆರೋಪ ಆಧಾರರಹಿತ: ಯೋಗಿ ಆದಿತ್ಯನಾಥ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>