<p><strong>ಕೋಲ್ಕತ್ತ</strong>: ಕೋವಿಡ್–19ನಿಂದಾಗಿ ಇಲ್ಲಿರುವ ದುರ್ಗಾ ಮೂರ್ತಿ ತಯಾರಿಸುವ ಕುಶಲಕರ್ಮಿಗಳ ಬದುಕು ದುಸ್ತರವಾಗಿದೆ. ಬೇಡಿಕೆ ಕುಸಿಯುತ್ತಿರುವ ಕಾರಣ ಕುಶಲಕರ್ಮಿಗಳು ಈ ಬಾರಿ ₹ 40 ಕೋಟಿ ನಷ್ಟ ಅನುಭವಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.</p>.<p>ನವರಾತ್ರಿ ಸಂದರ್ಭದಲ್ಲಿ ನಡೆಯುವ ದುರ್ಗಾ ಮೂರ್ತಿ ಪೂಜೆಗಾಗಿ ಜೂನ್ ಮಧ್ಯದಲ್ಲಿಯೇ ಪೂಜಾ ಸಮಿತಿಗಳು ಬೇಡಿಕೆ ಸಲ್ಲಿಸುವುದು ರೂಢಿ. ಆದರೆ, ಈಗ ಕೊರೊನಾ ಸೋಂಕಿನಿಂದಾಗಿ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡು ಬಂದ ಕಾರಣ, 500 ಕುಶಲಕರ್ಮಿಗಳು ಸಂಕಷ್ಟದಲ್ಲಿದ್ದಾರೆ.</p>.<p>ಉತ್ತರ ಕೋಲ್ಕತ್ತದ ಕುಮಾರ್ಟುಲಿ ಪ್ರದೇಶದಲ್ಲಿಯೇ ಹೆಚ್ಚಾಗಿ ವಾಸಿಸುವ ಕುಶಲಕರ್ಮಿಗಳು ಕಳೆದ ವರ್ಷ ಇದೇ ಅವಧಿಯಲ್ಲಿ 3,500ಕ್ಕೂ ಅಧಿಕ ದುರ್ಗಾ ಮೂರ್ತಿಗಳು, 10,000ಕ್ಕೂ ಅಧಿಕ ಕಾಳಿ ಮೂರ್ತಿಗಳನ್ನು ತಯಾರಿಸಿದ್ದರು. ಈ ವರ್ಷ ಕೆಲವೇ ಮೂರ್ತಿಗಳನ್ನು ತಯಾರಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಕುಮಾರ್ಟುಲಿ ಮೃತ್ಶಿಲ್ಪಿ ಸಂಸ್ಕೃತಿ ಸಮಿತಿ ಹೇಳುತ್ತದೆ.</p>.<p>ಕುಶಲಕರ್ಮಿಗಳ ಸಂಘಟನೆಯಾದ ಸಮಿತಿಯ ಸದಸ್ಯರ ಸಂಖ್ಯೆ 3000ಕ್ಕೂ ಅಧಿಕ. ಈಗ ಇವರ ಜೀವನೋಪಾಯಕ್ಕೇ ಪೆಟ್ಟು ಬಿದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಕೋವಿಡ್–19ನಿಂದಾಗಿ ಇಲ್ಲಿರುವ ದುರ್ಗಾ ಮೂರ್ತಿ ತಯಾರಿಸುವ ಕುಶಲಕರ್ಮಿಗಳ ಬದುಕು ದುಸ್ತರವಾಗಿದೆ. ಬೇಡಿಕೆ ಕುಸಿಯುತ್ತಿರುವ ಕಾರಣ ಕುಶಲಕರ್ಮಿಗಳು ಈ ಬಾರಿ ₹ 40 ಕೋಟಿ ನಷ್ಟ ಅನುಭವಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.</p>.<p>ನವರಾತ್ರಿ ಸಂದರ್ಭದಲ್ಲಿ ನಡೆಯುವ ದುರ್ಗಾ ಮೂರ್ತಿ ಪೂಜೆಗಾಗಿ ಜೂನ್ ಮಧ್ಯದಲ್ಲಿಯೇ ಪೂಜಾ ಸಮಿತಿಗಳು ಬೇಡಿಕೆ ಸಲ್ಲಿಸುವುದು ರೂಢಿ. ಆದರೆ, ಈಗ ಕೊರೊನಾ ಸೋಂಕಿನಿಂದಾಗಿ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡು ಬಂದ ಕಾರಣ, 500 ಕುಶಲಕರ್ಮಿಗಳು ಸಂಕಷ್ಟದಲ್ಲಿದ್ದಾರೆ.</p>.<p>ಉತ್ತರ ಕೋಲ್ಕತ್ತದ ಕುಮಾರ್ಟುಲಿ ಪ್ರದೇಶದಲ್ಲಿಯೇ ಹೆಚ್ಚಾಗಿ ವಾಸಿಸುವ ಕುಶಲಕರ್ಮಿಗಳು ಕಳೆದ ವರ್ಷ ಇದೇ ಅವಧಿಯಲ್ಲಿ 3,500ಕ್ಕೂ ಅಧಿಕ ದುರ್ಗಾ ಮೂರ್ತಿಗಳು, 10,000ಕ್ಕೂ ಅಧಿಕ ಕಾಳಿ ಮೂರ್ತಿಗಳನ್ನು ತಯಾರಿಸಿದ್ದರು. ಈ ವರ್ಷ ಕೆಲವೇ ಮೂರ್ತಿಗಳನ್ನು ತಯಾರಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಕುಮಾರ್ಟುಲಿ ಮೃತ್ಶಿಲ್ಪಿ ಸಂಸ್ಕೃತಿ ಸಮಿತಿ ಹೇಳುತ್ತದೆ.</p>.<p>ಕುಶಲಕರ್ಮಿಗಳ ಸಂಘಟನೆಯಾದ ಸಮಿತಿಯ ಸದಸ್ಯರ ಸಂಖ್ಯೆ 3000ಕ್ಕೂ ಅಧಿಕ. ಈಗ ಇವರ ಜೀವನೋಪಾಯಕ್ಕೇ ಪೆಟ್ಟು ಬಿದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>