ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಪಶ್ಚಿಮಘಟ್ಟ: ಪ್ರತ್ಯೇಕ ಅಧಿಸೂಚನೆ ಹೊರಡಿಸಲು ಕೇಂದ್ರ ಚಿಂತನೆ

Published : 5 ಆಗಸ್ಟ್ 2024, 23:48 IST
Last Updated : 5 ಆಗಸ್ಟ್ 2024, 23:48 IST
ಫಾಲೋ ಮಾಡಿ
Comments
36 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು
ಚಿಕ್ಕಮಗಳೂರು: ಪಶ್ಚಿಮಘಟ್ಟ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ ರಚನೆ ಮಾಡಿದ ಮೊದಲ ದಿನವೇ ಕೊಪ್ಪ ತಾಲ್ಲೂಕಿನ 36 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಕೊಪ್ಪ ತಾಲ್ಲೂಕಿನ ತನೂಡಿ ಸರ್ವೆ ನಂಬರ್ 9, 21, 22,23, 72 ಮತ್ತು 97 ಸೇರಿ ಒಟ್ಟು 36 ಎಕರೆ ಅರಣ್ಯ ಭೂಮಿಯನ್ನು ಅದರಲ್ಲಿದ್ದ ಕಾಫಿ ಗಿಡಗಳನ್ನು ಕತ್ತರಿಸಿಸುವಂತೆ ಸೂಚಿಸಿ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದರು. ಅರಣ್ಯ ರಕ್ಷಣೆಗೆ ಕಾರ್ಯಪಡೆ ಇದೆ. ಆದರೆ, ವಿಶೇಷವಾಗಿ ಪಶ್ಚಿಮಘಟ್ಟದ ಅರಣ್ಯ ಒತ್ತುವರಿ ತೆರವಿಗೆ ಸ್ಥಳೀಯವಾಗಿ ಕಾರ್ಯಪಡೆ ರಚನೆಯಾಗಬೇಕಿದೆ. ಮೊದಲ ದಿನ ತೆರವು ಕಾರ್ಯ ನಡೆಸಿರುವ ಅಧಿಕಾರಿಗಳು, ಸರ್ಕಾರದಿಂದ ಬರುವ ಮಾರ್ಗಸೂಚಿಗಾಗಿ ಕಾಯುತ್ತಿದ್ದಾರೆ. ಇನ್ನೂ ಹಲವೆಡೆ ತೆರವು ಕಾರ್ಯಾಚರಣೆ ನಡೆಸಲು ಜಾಗ ಗುರುತಿಸುವ ಕೆಲಸ ಆರಂಭವಾಗಿದೆ. ಒಟ್ಟು 69 ಎಕರೆ ತೆರವುಗೊಳಿಸಲು ಸಿದ್ಧತೆಯನ್ನು ಅಧಿಕಾರಿಗಳು ನಡೆಸಿದ್ದರು. ಸೋಮವಾರ 36 ಎಕರೆ ತೆರವಾಗಿದ್ದು, ಬಾಕಿ ಒತ್ತುವರಿ ತೆರವು ಮಂಗಳವಾರ ಆಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ನೂರಾರು ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಕೊಪ್ಪ ಉಪ ಅರಣ್ಯ ವ್ಯಾಪ್ತಿಯಲ್ಲಿ ತೆರವು ಕಾರ್ಯ ಆರಂಭ ವಾಗಿದೆ. ಚಿಕ್ಕಮಗಳೂರು ಉಪ ಅರಣ್ಯ ವ್ಯಾಪ್ತಿಯಲ್ಲೂ ಕಾರ್ಯಾ ಚರಣೆ ಆರಂಭಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ನಡೆದಿಲ್ಲ ತೆರವು (ಮಂಗಳೂರು/ಉಡುಪಿ ವರದಿ): ಮಂಗಳೂರು ವೃತ್ತದ ವ್ಯಾಪ್ತಿಯ ಕುಂದಾಪುರ ವಿಭಾಗ, ಕುದುರೆಮುಖ ವನ್ಯಜೀವಿ ವಿಭಾಗ ಹಾಗೂ ಮಂಗಳೂರು ವಿಭಾಗಗಳಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಅಕ್ರಮ ಹೋಮ್‌ಸ್ಟೇ ಅಥವಾ ಅಕ್ರಮ ರೆಸಾರ್ಟ್‌ಗಳ ತೆರವು ಕಾರ್ಯ ಸೋಮವಾರ ನಡೆದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ರೆಸಾರ್ಟ್ ಮಾಲೀಕರು ಕೋರ್ಟ್‌ ಮೊರೆ
ಹಾಸನ: ‘ಜಿಲ್ಲೆಯ ಯಸಳೂರು ಮತ್ತು ಸಕಲೇಶಪುರ ಭಾಗದಲ್ಲಿರುವ ಕೆಲವು ಅನಧಿಕೃತ ರೆಸಾರ್ಟ್ ಮತ್ತು ಹೋಂ ಸ್ಟೇಗಳ ‌ಮಾಲೀಕರು ಕೋರ್ಟ್‌ ಮೊರೆ ಹೋಗಿರುವುದರಿಂದ, ಸನ್ನಿವೇಶಕ್ಕೆ ತಕ್ಕಂತೆ ತೆರವು ಕ್ರಮ ಕೈಗೊಳ್ಳಲು ವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಡಿಸಿಎಫ್ ಸೌರಭ್‌ಕುಮಾರ್ ತಿಳಿಸಿದ್ದಾರೆ. ‘ಅಧಿಕಾರಿಗಳ ಸಭೆ ನಡೆಸಿದ್ದು, ಅನಧಿಕೃತ ರೆಸಾರ್ಟ್ ಮತ್ತು ಹೋಮ್‌ಸ್ಟೇಗಳ ಪಟ್ಟಿಯನ್ನು ತಯಾರಿಸಲು ಸೂಚಿಸಲಾಗಿದೆ’ ಎಂದಿದ್ದಾರೆ. (ಕೊಡಗು ವರದಿ): ‘ಕೊಡಗು ಜಿಲ್ಲೆಯಲ್ಲಿ 2015ಕ್ಕೂ ಮುಂಚೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡಲಾಗುತ್ತಿದೆ’ ಎಂದು ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ. ‘ಸುಮಾರು 5 ಸಾವಿರ ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು, ಕಾಫಿತೋಟಗಳನ್ನಾಗಿ ಮಾಡಲಾಗಿದ್ದು, ಅಂತಹವರಿಗೆ ನೋಟಿಸ್ ನೀಡಲಾಗುತ್ತಿದೆ. 2015ರ ನಂತರ ಒತ್ತುವರಿ ಮಾಡಿಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಪ್ರಕರಣಗಳು ಅತಿ ವಿರಳವಾಗಿವೆ. ಅಂಥವುಗಳನ್ನು ತೆರವುಗೊಳಿಸಲು ಕಾರ್ಯಪಡೆ ರಚಿಸಿರುವ ಕುರಿತು ಮಾಹಿತಿ ಬಂದಿಲ್ಲ’ ಎಂದಿದ್ದಾರೆ. ಸೋಮವಾರ ಹಾಸನ, ಕೊಡಗಿನಲ್ಲಿ ತೆರವು ಕಾರ್ಯಾಚರಣೆ ನಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT