<p><strong>ಪುಣೆ:</strong> ‘ಲೋಕಸಭೆ ಚುನಾವಣೆಯ ಐದು ತಿಂಗಳ ಬಳಿಕ ನಡೆದ ವಿಧಾನಸಭೆ ಚುನಾವಣೆಯ ಹೊತ್ತಿಗೆ ಮಹಾರಾಷ್ಟ್ರದಲ್ಲಿ 39 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪವನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ತಳ್ಳಿಹಾಕಿದ್ದಾರೆ.</p>.<p>‘ಜೈಪುರ ಡೈಲಾಗ್ಸ್ ಡೆಕ್ಕನ್ ಸಮಿಟ್, ಪುಣೆ 2025’ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿಧಾನಸಭೆ ಚುನಾವಣೆಗಳಲ್ಲಿ ಯಾವಾಗಲೂ ಮತದಾರರ ಸಂಖ್ಯೆ ಹೆಚ್ಚಾಗುತ್ತದೆ. ಲೋಕಸಭೆ ಚುನಾವಣೆಯ ವೇಳೆ ಹಲವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಆದ್ದರಿಂದ ಈ ವಿಚಾರವನ್ನು ನಾವು ಚುನಾವಣಾ ಆಯೋಗದ ಮುಂದಿಡಲಾಯಿತು. ಆಯೋಗವು ಅಭಿಯಾನ ಆರಂಭಿಸಿತು’ ಎಂದರು.</p>.<p>‘ಆಯೋಗ ನಡೆಸಿದ ಅಭಿಯಾನದ ಕಾರಣದಿಂದ ಹೊಸ ಮತದಾರರ ಸಂಖ್ಯೆ ಅಧಿಕಗಗೊಂಡಿತು. ರಾಹುಲ್ ಗಾಂಧಿ ಅವರು ತಮ್ಮ ಮುಖದಲ್ಲಿ ಇರುವ ದೂಳನ್ನು ಒರೆಸಿಕೊಳ್ಳುವ ಬದಲು, ಕನ್ನಡಿಯನ್ನೇ ಒರೆಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.</p>.<p>‘ನಮ್ಮ ವ್ಯವಸ್ಥೆಯೊಳಗಿನ ಸಂಸ್ಥೆಗಳ ಮೇಲೆ ರಾಹುಲ್ ಅವರಿಗೆ ನಂಬಿಕೆ ಇಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪನಂಬಿಕೆ ಹುಟ್ಟು ಹಾಕುವ ಯತ್ನವನ್ನು ನಗರ ನಕ್ಸಲರು ಮಾಡುತ್ತಿದ್ದಾರೆ. ರಾಹುಲ್ ಅವರು ನಗರ ನಕ್ಸಲರ ಈ ಕಾರ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ’ ಎಂದು ಆರೋಪಿಸಿದರು.</p>.ದೆಹಲಿ ಸೋಲಿನ ಭೀತಿಯಿಂದ ಸುಳ್ಳು ಹರಡುತ್ತಿರುವ ರಾಹುಲ್ ಗಾಂಧಿ: ಮಹಾ ಸಿಎಂ ಫಡಣವೀಸ್.ವಾಸ್ತವಾಂಶದೊಂದಿಗೆ ಉತ್ತರ: ರಾಹುಲ್ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ:</strong> ‘ಲೋಕಸಭೆ ಚುನಾವಣೆಯ ಐದು ತಿಂಗಳ ಬಳಿಕ ನಡೆದ ವಿಧಾನಸಭೆ ಚುನಾವಣೆಯ ಹೊತ್ತಿಗೆ ಮಹಾರಾಷ್ಟ್ರದಲ್ಲಿ 39 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿರುವ ಆರೋಪವನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ತಳ್ಳಿಹಾಕಿದ್ದಾರೆ.</p>.<p>‘ಜೈಪುರ ಡೈಲಾಗ್ಸ್ ಡೆಕ್ಕನ್ ಸಮಿಟ್, ಪುಣೆ 2025’ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿಧಾನಸಭೆ ಚುನಾವಣೆಗಳಲ್ಲಿ ಯಾವಾಗಲೂ ಮತದಾರರ ಸಂಖ್ಯೆ ಹೆಚ್ಚಾಗುತ್ತದೆ. ಲೋಕಸಭೆ ಚುನಾವಣೆಯ ವೇಳೆ ಹಲವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಆದ್ದರಿಂದ ಈ ವಿಚಾರವನ್ನು ನಾವು ಚುನಾವಣಾ ಆಯೋಗದ ಮುಂದಿಡಲಾಯಿತು. ಆಯೋಗವು ಅಭಿಯಾನ ಆರಂಭಿಸಿತು’ ಎಂದರು.</p>.<p>‘ಆಯೋಗ ನಡೆಸಿದ ಅಭಿಯಾನದ ಕಾರಣದಿಂದ ಹೊಸ ಮತದಾರರ ಸಂಖ್ಯೆ ಅಧಿಕಗಗೊಂಡಿತು. ರಾಹುಲ್ ಗಾಂಧಿ ಅವರು ತಮ್ಮ ಮುಖದಲ್ಲಿ ಇರುವ ದೂಳನ್ನು ಒರೆಸಿಕೊಳ್ಳುವ ಬದಲು, ಕನ್ನಡಿಯನ್ನೇ ಒರೆಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.</p>.<p>‘ನಮ್ಮ ವ್ಯವಸ್ಥೆಯೊಳಗಿನ ಸಂಸ್ಥೆಗಳ ಮೇಲೆ ರಾಹುಲ್ ಅವರಿಗೆ ನಂಬಿಕೆ ಇಲ್ಲ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪನಂಬಿಕೆ ಹುಟ್ಟು ಹಾಕುವ ಯತ್ನವನ್ನು ನಗರ ನಕ್ಸಲರು ಮಾಡುತ್ತಿದ್ದಾರೆ. ರಾಹುಲ್ ಅವರು ನಗರ ನಕ್ಸಲರ ಈ ಕಾರ್ಯಕ್ಕೆ ಶಕ್ತಿ ತುಂಬುತ್ತಿದ್ದಾರೆ’ ಎಂದು ಆರೋಪಿಸಿದರು.</p>.ದೆಹಲಿ ಸೋಲಿನ ಭೀತಿಯಿಂದ ಸುಳ್ಳು ಹರಡುತ್ತಿರುವ ರಾಹುಲ್ ಗಾಂಧಿ: ಮಹಾ ಸಿಎಂ ಫಡಣವೀಸ್.ವಾಸ್ತವಾಂಶದೊಂದಿಗೆ ಉತ್ತರ: ರಾಹುಲ್ ಆರೋಪಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>