‘ಸ್ವತಃ ಪ್ರಧಾನಿಯವರೇ ಲೋಕಸಭೆಯಲ್ಲಿ ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. 750 ಹುತಾತ್ಮ ರೈತರ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ಮಾಡಬೇಕೆಂಬ ಮನವಿಯನ್ನೂ ಕಡೆಗಣಿಸಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಪ್ರಧಾನಿಯೇ ಆಗಲಿ ಕೇಂದ್ರ ಕೃಷಿ ಸಚಿವರೇ ಆಗಲಿ ಎಷ್ಟೇ ಸುಳ್ಳುಗಳನ್ನು ಹೇಳಿದರೂ ರೈತರು ನಂಬುವುದಿಲ್ಲ. ಅವರ ಪರಮಶತ್ರುಗಳು ನೀವೇ ಎಂಬುದನ್ನು ರೈತರು ಅರ್ಥೈಸಿಕೊಂಡಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.