<p><strong>ಪುಣೆ</strong>: ನಗರದ ಜೈಲಿನಲ್ಲಿದ್ದ ಗ್ಯಾಂಗ್ಸ್ಟರ್ ಗಜಾನನ ಮಾರ್ನೆಯನ್ನು ಮತ್ತೊಂದು ಜೈಲಿಗೆ ಕರೆದೊಯ್ಯುವ ವೇಳೆ 'ವಿಶೇಷ ಸತ್ಕಾರ' ನೀಡಿದ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.</p><p>ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ಮಾರ್ನೆಯನ್ನು ಭದ್ರತೆಯ ಕಾರಣದಿಂದ ಪುಣೆಯ ಯೆರವಾಡಾ ಕೇಂದ್ರ ಕಾರಾಗೃಹದಿಂದ ಸಂಗೋಲಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಆ ವೇಳೆ, ಆತನಿಗೆ ಅನುಕೂಲ ಮಾಡಿಕೊಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.</p><p>ಮಾರ್ನೆ ಜೊತೆಗಿದ್ದ ಪೊಲೀಸರ ತಂಡ ಮಾರ್ಗ ಮಧ್ಯೆ ಢಾಬಾ ಬಳಿ ವಾಹನ ನಿಲ್ಲಿಸಿತ್ತು. ಪೊಲೀಸರ ವಾಹನ ಹಿಂಬಾಲಿಸಿಕೊಂಡು ಬಂದಿದ್ದ, ಮಾರ್ನೆ ಸಹಚರರು ಊಟ ಮಾಡಿಸಿದ್ದರು ಎನ್ನಲಾಗಿದೆ.</p><p>'ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಅಪರಾಧ ದಳದ ನಾಲ್ವರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಿದ್ದೇವೆ' ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.</p><p>'ಪೊಲೀಸ್ ಬೆಂಗಾವಲು ವಾಹನವನ್ನು ಹಿಂಬಾಲಿಸಿಕೊಂಡು ಬಂದು, ಗ್ಯಾಂಗ್ಸ್ಟರ್ಗೆ ವಿಶೇಷ ಆತಿಥ್ಯ ನೀಡಲು ನೆರವಾದವರ ವಿರುದ್ಧ ಎಂಸಿಒಸಿಎ ಅಡಿಯಲ್ಲಿ ಕ್ರಮ ಜರುಗಿಸುತ್ತೇವೆ' ಎಂದು ಮಾಹಿತಿ ನೀಡಿದ್ದಾರೆ.</p><p>ಅಪರಾಧಿಗಳನ್ನು, ಅದರಲ್ಲೂ ಎಂಸಿಒಸಿಎ ಅಡಿಯಲ್ಲಿ ಬಂಧನಕ್ಕೊಳಗಾದವರನ್ನು ವೈಭವೀಕರಿಸುವುದನ್ನು ಸಹಿಸುವುದಿಲ್ಲ. ಸ್ಪಷ್ಟ ಹಾಗೂ ಬಲವಾದ ಸಂದೇಶ ರವಾನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.</p><p>ಸಬ್ ಇನ್ಸ್ಪೆಕ್ಟರ್ ಸೂರಜ್ ಕುಮಾರ್ ರಾಜಗುರು, ಕಾನ್ಸ್ಟೆಬಲ್ಗಳಾದ ಮಹೇಶ್ ಬಂಗುಡೆ, ಸಚಿನ್ ಮೆಮಾನೆ, ರಮೇಶ್ ಮೆಮಾನೆ ಹಾಗೂ ರಾಹುಲ್ ಪರ್ದೇಶಿ ಅಮಾನತಾದವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ</strong>: ನಗರದ ಜೈಲಿನಲ್ಲಿದ್ದ ಗ್ಯಾಂಗ್ಸ್ಟರ್ ಗಜಾನನ ಮಾರ್ನೆಯನ್ನು ಮತ್ತೊಂದು ಜೈಲಿಗೆ ಕರೆದೊಯ್ಯುವ ವೇಳೆ 'ವಿಶೇಷ ಸತ್ಕಾರ' ನೀಡಿದ ಆರೋಪದಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.</p><p>ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಬಂಧನಕ್ಕೊಳಗಾಗಿದ್ದ ಮಾರ್ನೆಯನ್ನು ಭದ್ರತೆಯ ಕಾರಣದಿಂದ ಪುಣೆಯ ಯೆರವಾಡಾ ಕೇಂದ್ರ ಕಾರಾಗೃಹದಿಂದ ಸಂಗೋಲಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಆ ವೇಳೆ, ಆತನಿಗೆ ಅನುಕೂಲ ಮಾಡಿಕೊಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.</p><p>ಮಾರ್ನೆ ಜೊತೆಗಿದ್ದ ಪೊಲೀಸರ ತಂಡ ಮಾರ್ಗ ಮಧ್ಯೆ ಢಾಬಾ ಬಳಿ ವಾಹನ ನಿಲ್ಲಿಸಿತ್ತು. ಪೊಲೀಸರ ವಾಹನ ಹಿಂಬಾಲಿಸಿಕೊಂಡು ಬಂದಿದ್ದ, ಮಾರ್ನೆ ಸಹಚರರು ಊಟ ಮಾಡಿಸಿದ್ದರು ಎನ್ನಲಾಗಿದೆ.</p><p>'ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಅಪರಾಧ ದಳದ ನಾಲ್ವರು ಕಾನ್ಸ್ಟೆಬಲ್ಗಳನ್ನು ಅಮಾನತು ಮಾಡಿದ್ದೇವೆ' ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.</p><p>'ಪೊಲೀಸ್ ಬೆಂಗಾವಲು ವಾಹನವನ್ನು ಹಿಂಬಾಲಿಸಿಕೊಂಡು ಬಂದು, ಗ್ಯಾಂಗ್ಸ್ಟರ್ಗೆ ವಿಶೇಷ ಆತಿಥ್ಯ ನೀಡಲು ನೆರವಾದವರ ವಿರುದ್ಧ ಎಂಸಿಒಸಿಎ ಅಡಿಯಲ್ಲಿ ಕ್ರಮ ಜರುಗಿಸುತ್ತೇವೆ' ಎಂದು ಮಾಹಿತಿ ನೀಡಿದ್ದಾರೆ.</p><p>ಅಪರಾಧಿಗಳನ್ನು, ಅದರಲ್ಲೂ ಎಂಸಿಒಸಿಎ ಅಡಿಯಲ್ಲಿ ಬಂಧನಕ್ಕೊಳಗಾದವರನ್ನು ವೈಭವೀಕರಿಸುವುದನ್ನು ಸಹಿಸುವುದಿಲ್ಲ. ಸ್ಪಷ್ಟ ಹಾಗೂ ಬಲವಾದ ಸಂದೇಶ ರವಾನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.</p><p>ಸಬ್ ಇನ್ಸ್ಪೆಕ್ಟರ್ ಸೂರಜ್ ಕುಮಾರ್ ರಾಜಗುರು, ಕಾನ್ಸ್ಟೆಬಲ್ಗಳಾದ ಮಹೇಶ್ ಬಂಗುಡೆ, ಸಚಿನ್ ಮೆಮಾನೆ, ರಮೇಶ್ ಮೆಮಾನೆ ಹಾಗೂ ರಾಹುಲ್ ಪರ್ದೇಶಿ ಅಮಾನತಾದವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>