<p><strong>ನವದೆಹಲಿ:</strong> ಈಗಿನ ಡಿಜಿಟಲ್ ದಿನಗಳಲ್ಲಿ ಬಾಲಕಿಯರು ಸುಲಭವಾಗಿ ದಾಳಿಗೆ ಒಳಗಾಗುವ ಅಪಾಯ ಎದುರಿಸುತ್ತಿದ್ದಾರೆ. ಇಂತಹ ದೌರ್ಜನ್ಯಗಳಿಂದ ಬಾಲಕಿಯರನ್ನು ರಕ್ಷಿಸುವ ಸಂಬಂಧ ವಿಶೇಷ ಕಾನೂನು ರೂಪಿಸಬೇಕು ಹಾಗೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತರಬೇತಿಯ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಶನಿವಾರ ಹೇಳಿದರು.</p>.<p>‘ಆನ್ಲೈನ್ ವೇದಿಕೆಗಳ ಮೂಲಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ವೈಯಕ್ತಿಕ ದತ್ತಾಂಶಗಳ ದುರ್ಬಳಕೆ ಹಾಗೂ ಡೀಪ್ಫೇಕ್ ಚಿತ್ರಗಳನ್ನು ಬಳಸಿ ಹೆಣ್ಣು ಮಗುವಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟುವುದು ಮುಖ್ಯ’ ಎಂದರು.</p>.<p>ಸುಪ್ರೀಂ ಕೋರ್ಟ್ನ ಬಾಲ ನ್ಯಾಯ ಸಮಿತಿಯು (ಜೆಜೆಸಿ) ಯುನಿಸೆಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಲ್ಲ ಭಾಗೀದಾರರ ವಾರ್ಷಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಬಾಲಕಿಯರ ರಕ್ಷಣೆಗೆ ಸಾಂವಿಧಾನಿಕ ಮತ್ತು ಕಾನೂನಿನ ಖಾತರಿ ಇದ್ದರೂ, ದೇಶದಾದ್ಯಂತ ಅವರಿಗೆ ಮೂಲಭೂತ ಹಕ್ಕುಗಳು ಹಾಗೂ ಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ’ ಎಂದರು.</p>.<p>‘ಹೆಣ್ಣುಮಗು ಸುಲಭವಾಗಿ ದಾಳಿಗೆ ಒಳಗಾಗುವ ಕಾರಣ, ಅವರು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಅಪಾಯ ಹೆಚ್ಚು. ಗುಪ್ತಾಂಗ ವಿರೂಪಗೊಳಿಸುವಿಕೆ, ಅಪೌಷ್ಟಿಕತೆ, ಭ್ರೂಣದ ಲಿಂಗ ಪತ್ತೆ ಬಳಿಕ ಗರ್ಭಪಾತ ಮಾಡಿಸುವುದು, ಮಾನವ ಕಳ್ಳಸಾಗಣೆ, ಬಾಲ್ಯವಿವಾಹದಂತಹ ಅಪಾಯಗಳನ್ನು ಕೂಡ ಅವರು ಎದುರಿಸುತ್ತಾರೆ’ ಎಂದು ಸಿಜೆಐ ವಿಶ್ಲೇಷಿಸಿದರು.</p>.<p>ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣಾದೇವಿ, ಯುನಿಸೆಫ್–ಇಂಡಿಯಾ ಪ್ರತಿನಿಧಿ ಸಿಂಥಿಯಾ ಮ್ಯಾಕ್ಕ್ಯಾಫ್ರಿ, ನ್ಯಾಯಮೂರ್ತಿ ಹಾಗೂ ಜೆಜೆಸಿ ಅಧ್ಯಕ್ಷೆ ಬಿ.ವಿ.ನಾಗರತ್ನ, ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಉಪಸ್ಥಿತರಿದ್ದರು.</p>.<div><blockquote>ಬಾಲಕಿಯರು ಕೇವಲ ದೈಹಿಕ ಬೆದರಿಕೆಗಳನ್ನು ಎದುರಿಸುತ್ತಿಲ್ಲ. ನಿಯಂತ್ರಣವೇ ಇಲ್ಲದಿರುವ ಡಿಜಿಟಲ್ ವೇದಿಕೆಗಳಿಂದಲೂ ಅವರು ಅಪಾಯ ಎದುರಿಸುತ್ತಿದ್ದಾರೆ </blockquote><span class="attribution">ಬಿ.ಆರ್.ಗವಾಯಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಈಗಿನ ಡಿಜಿಟಲ್ ದಿನಗಳಲ್ಲಿ ಬಾಲಕಿಯರು ಸುಲಭವಾಗಿ ದಾಳಿಗೆ ಒಳಗಾಗುವ ಅಪಾಯ ಎದುರಿಸುತ್ತಿದ್ದಾರೆ. ಇಂತಹ ದೌರ್ಜನ್ಯಗಳಿಂದ ಬಾಲಕಿಯರನ್ನು ರಕ್ಷಿಸುವ ಸಂಬಂಧ ವಿಶೇಷ ಕಾನೂನು ರೂಪಿಸಬೇಕು ಹಾಗೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತರಬೇತಿಯ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಶನಿವಾರ ಹೇಳಿದರು.</p>.<p>‘ಆನ್ಲೈನ್ ವೇದಿಕೆಗಳ ಮೂಲಕ ಕಿರುಕುಳ ನೀಡುವುದು, ಬೆದರಿಕೆ ಹಾಕುವುದು, ವೈಯಕ್ತಿಕ ದತ್ತಾಂಶಗಳ ದುರ್ಬಳಕೆ ಹಾಗೂ ಡೀಪ್ಫೇಕ್ ಚಿತ್ರಗಳನ್ನು ಬಳಸಿ ಹೆಣ್ಣು ಮಗುವಿನ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟುವುದು ಮುಖ್ಯ’ ಎಂದರು.</p>.<p>ಸುಪ್ರೀಂ ಕೋರ್ಟ್ನ ಬಾಲ ನ್ಯಾಯ ಸಮಿತಿಯು (ಜೆಜೆಸಿ) ಯುನಿಸೆಫ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಲ್ಲ ಭಾಗೀದಾರರ ವಾರ್ಷಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಬಾಲಕಿಯರ ರಕ್ಷಣೆಗೆ ಸಾಂವಿಧಾನಿಕ ಮತ್ತು ಕಾನೂನಿನ ಖಾತರಿ ಇದ್ದರೂ, ದೇಶದಾದ್ಯಂತ ಅವರಿಗೆ ಮೂಲಭೂತ ಹಕ್ಕುಗಳು ಹಾಗೂ ಸೌಕರ್ಯಗಳನ್ನು ನಿರಾಕರಿಸಲಾಗುತ್ತಿದೆ’ ಎಂದರು.</p>.<p>‘ಹೆಣ್ಣುಮಗು ಸುಲಭವಾಗಿ ದಾಳಿಗೆ ಒಳಗಾಗುವ ಕಾರಣ, ಅವರು ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಅಪಾಯ ಹೆಚ್ಚು. ಗುಪ್ತಾಂಗ ವಿರೂಪಗೊಳಿಸುವಿಕೆ, ಅಪೌಷ್ಟಿಕತೆ, ಭ್ರೂಣದ ಲಿಂಗ ಪತ್ತೆ ಬಳಿಕ ಗರ್ಭಪಾತ ಮಾಡಿಸುವುದು, ಮಾನವ ಕಳ್ಳಸಾಗಣೆ, ಬಾಲ್ಯವಿವಾಹದಂತಹ ಅಪಾಯಗಳನ್ನು ಕೂಡ ಅವರು ಎದುರಿಸುತ್ತಾರೆ’ ಎಂದು ಸಿಜೆಐ ವಿಶ್ಲೇಷಿಸಿದರು.</p>.<p>ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣಾದೇವಿ, ಯುನಿಸೆಫ್–ಇಂಡಿಯಾ ಪ್ರತಿನಿಧಿ ಸಿಂಥಿಯಾ ಮ್ಯಾಕ್ಕ್ಯಾಫ್ರಿ, ನ್ಯಾಯಮೂರ್ತಿ ಹಾಗೂ ಜೆಜೆಸಿ ಅಧ್ಯಕ್ಷೆ ಬಿ.ವಿ.ನಾಗರತ್ನ, ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಉಪಸ್ಥಿತರಿದ್ದರು.</p>.<div><blockquote>ಬಾಲಕಿಯರು ಕೇವಲ ದೈಹಿಕ ಬೆದರಿಕೆಗಳನ್ನು ಎದುರಿಸುತ್ತಿಲ್ಲ. ನಿಯಂತ್ರಣವೇ ಇಲ್ಲದಿರುವ ಡಿಜಿಟಲ್ ವೇದಿಕೆಗಳಿಂದಲೂ ಅವರು ಅಪಾಯ ಎದುರಿಸುತ್ತಿದ್ದಾರೆ </blockquote><span class="attribution">ಬಿ.ಆರ್.ಗವಾಯಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>