ಶುಕ್ರವಾರ, 28 ನವೆಂಬರ್ 2025
×
ADVERTISEMENT
ADVERTISEMENT

ನ್ಯಾಷನಲ್‌ ಸ್ಕೂಲ್‌ ಗೇಮ್ಸ್‌: ರಾಷ್ಟ್ರಮಟ್ಟಕ್ಕೆ ಕಲಬುರಗಿ ಜಿಲ್ಲೆಯ ಮೂವರು ಆಯ್ಕೆ

Published : 28 ನವೆಂಬರ್ 2025, 6:25 IST
Last Updated : 28 ನವೆಂಬರ್ 2025, 6:25 IST
ಫಾಲೋ ಮಾಡಿ
Comments
ಸಂಜಯ್‌ ಬಾಣಾದ
ಸಂಜಯ್‌ ಬಾಣಾದ
‘ಟರ್ಫ್‌ ಗ್ರೌಂಡ್‌ ನಿರ್ಮಿಸಿಕೊಡಿ’
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಖುಷಿಯಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬುದು ನಮ್ಮ ಕನಸು. ಅದಕ್ಕಾಗಿ ನಾವು ಪ್ರಯತ್ನಿಸುತ್ತೇವೆ ಎಂದು ಹಾಕಿಪಟುಗಳಾದ ಸಮರ್ಥ್‌ ಹರ್ಷವರ್ಧನ ಕಿಶೋರ ಹೇಳಿದರು. ನಿತ್ಯ ಬೆಳಿಗ್ಗೆ ಹಾಗೂ ಸಂಜೆ 4 ತಾಸುಗಳ ಕಠಿಣ ಅಭ್ಯಾಸ ನಡೆಸುತ್ತೇವೆ. ರಾಜ್ಯಮಟ್ಟದ ಟೂರ್ನಿಯಲ್ಲಿಯೂ ಆಗಿರುವ ತಪ್ಪುಗಳನ್ನು ನಮ್ಮ ತರಬೇತುದಾರರು ತಿಳಿಸಿದ್ದಾರೆ. ಅವುಗಳನ್ನು ತಿದ್ದಿಕೊಂಡು ರಾಷ್ಟ್ರಮಟ್ಟದ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ತೋರುತ್ತೇವೆ. ‘ನಮ್ಮ ಹಾಕಿ ಅಂಗಣ ಹಾಳಾಗಿದ್ದು ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈಗ ಹಾಕಿರುವ ಮ್ಯಾಟ್‌ ಬಹುತೇಕ ಕಡೆ ಕಿತ್ತು ಹೋಗಿದ್ದು ಪಕ್ಷದಲ್ಲಿ ಅಳವಡಿಸಿರುವ ಮರದ ಹಲಗೆಗಳಿಂದಾಗಿ ನಿರ್ಭಿಡೆಯಿಂದ ಆಡಲು ಆಗುವುದಿಲ್ಲ. ಹೀಗಾಗಿ ನಮಗೆ ಹೊಸ ಟರ್ಫ್‌ ಗ್ರೌಂಡ್‌ ನಿರ್ಮಿಸಿಕೊಡಬೇಕು’ ಎಂದು ಮನವಿ ಮಾಡಿದರು.
‘ಟರ್ಫ್‌ ಇದ್ದರೆ ಪ್ರತಿಭೆಗಳಿಗೆ ಅವಕಾಶ’
‘ರಾಜ್ಯ ಮಟ್ಟದಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಖುಷಿಯಾಗಿದೆ. ಅಲ್ಲಿ ಟರ್ಫ್ ಅಂಗಣದ ಮೇಲೆ‌ ಆಡಬೇಕು. ಆದರೆ ನಮ್ಮಲ್ಲಿ ಟರ್ಫ್‌ ಮೈದಾನದ ಸೌಲಭ್ಯವಿಲ್ಲ. ನಮ್ಮ ಜಿಲ್ಲೆಗೊಂದು ಟರ್ಫ್‌ ಸೌಲಭ್ಯವಿದ್ದರೆ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ’ ಎಂದು ಹಾಕಿ ತರಬೇತುದಾರ ಸಂಜಯ ಬಾಣಾದ ಹೇಳಿದರು. ‘ಭಾರತಕ್ಕೆ ಪದಕ ತರಲಿ’:  ‘ನಮ್ಮ ಮಗ ಹಾಕಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಮುಂಬರುವ ದಿನಗಳಲ್ಲಿ ಭಾರತ ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲಿ ಭಾರತಕ್ಕೆ ಪದಕ ತರಲಿ ಎಂಬ ಆಸೆಯಿದೆ’ ಎಂದು ಆಳಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಹೊರಗುತ್ತಿಗೆ ನೌಕರರಾಗಿರುವ ಹರ್ಷವರ್ಧನನ ತಂದೆ ಕಾಳಪ್ಪ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT