<p><strong>ಪಣಜಿ</strong>: ಉತ್ತರ ಗೋವಾದ ಅರ್ಪೋರದಲ್ಲಿರುವ ನೈಟ್ಕ್ಲಬ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟವರ ಸಂಬಂಧಿಕರು, ಪರಿಚಯದವರು ಸರ್ಕಾರಿ ಆಸ್ಪತ್ರೆಯ ಶವಾಗಾರದ ಎದುರು ಜಮಾಯಿಸಿದ್ದಾರೆ. ಶವಗಳ ಗುರುತಿಸುವಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆಸ್ಪತ್ರೆಯ ಆವರಣದಲ್ಲಿ ದುಃಖ ಮಡುಗಟ್ಟಿದೆ.</p><p>ದುರಂತದಲ್ಲಿ ಒಟ್ಟು 25 ಮಂದಿ ಮೃತಪಟ್ಟು, ಆರು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಹಲವರು ಕೆಲಸದ ಸಲುವಾಗಿ ಜಾರ್ಖಂಡ್, ಅಸ್ಸಾಂನಿಂದ ಬಂದವರಾಗಿದ್ದಾರೆ. ಅವರ ಸಂಬಂಧಿಕರು, ತಾವು ಶವಗಳನ್ನು ಸ್ವೀಕರಿಸುವುದಿಲ್ಲ. ಮಾಲೀಕರೇ ಊರಿಗೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.</p><p>ಪಣಜಿ ಸಮೀಪ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ಎದುರು ಜಾರ್ಖಂಡ್ ಕಾರ್ಮಿಕರ ತಂಡ ಬೆಳಗ್ಗೆಯಿಂದಲೂ ಬೀಡುಬಿಟ್ಟಿದ್ದು, ಮೃತರ ಮಾಹಿತಿಗಾಗಿ ಕಾಯುತ್ತಿದೆ.</p><p>ಮೃತರ ಗುರುತು ಪತ್ತೆಗೆ ಪೊಲೀಸರು ಗೋವಾ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ. ಶವಗಳನ್ನು ಶವಾಗರದಲ್ಲಿ ಇರಿಸಲಾಗಿದೆ.</p><p>ಪೊಲೀಸರ ಮಾಹಿತಿ ಪ್ರಕಾರ, ಮೃತಪಟ್ಟವರಲ್ಲಿ ನಾಲ್ಕು ಮಂದಿ ಪ್ರವಾಸಿಗರು. 14 ಜನರು ಕ್ಲಬ್ನ ಸಿಬ್ಬಂದಿ. ಉಳಿದವರ ಗುರುತು ಇನ್ನಷ್ಟೇ ಗೊತ್ತಾಗಬೇಕಿದೆ.</p>.PHOTOS | ಗೋವಾ: ಮಸಣವಾಯ್ತು ನೈಟ್ ಕ್ಲಬ್; 25 ಮಂದಿ ಸಾವು .ಗೋವಾ ನೈಟ್ ಕ್ಲಬ್ ದುರಂತದಲ್ಲಿ 25 ಸಾವು: ರಾಷ್ಟ್ರಪತಿ ಮುರ್ಮು, PM ಮೋದಿ ಸಂತಾಪ.<p><strong>'ಶವಗಳನ್ನು ಪಡೆಯುವುದಿಲ್ಲ'</strong><br>ಅರ್ಪೋರಾದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಜಾರ್ಖಂಡ್ನ ನಂದಲಾಲ್ ನಾಗ್ ಎಂಬವರು, ಅವರದ್ದೇ ಹಳ್ಳಿಯ ನಾಲ್ಕು ಮಂದಿ ಬೆಂಕಿಗೆ ಆಹುತಿಯಾಗಿರಬಹುದು ಎಂದು ಶಂಕಿಸಿದ್ದಾರೆ.</p><p>'ನನ್ನದೇ ಊರಿನ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬ ನನ್ನ ಸಹೋದರನ ಮಗ. ಅವರೆಲ್ಲರೂ, ನೈಟ್ಕ್ಲಬ್ನಲ್ಲಿ ಬಾಣಸಿಗರಾಗಿ ಮತ್ತು ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು' ಎಂದಿದ್ದಾರೆ.</p><p>ಸಂತ್ರಸ್ತರು ಐದು ವರ್ಷಗಳ ಹಿಂದೆ ಜಾರ್ಖಂಡ್ನಿಂದ ಗೋವಾಗೆ ಬಂದಿದ್ದರು. ಆಗಿನಿಂದಲೂ ಬೇರೆ ಬೇರೆ ಹೋಟೆಲ್ಗಳು ನೈಟ್ಕ್ಲಬ್ಗಳಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದೂ ಹೇಳಿದ್ದಾರೆ.</p><p>ಮುಂದುವರಿದು, 'ಶವಗಳನ್ನು ತೆಗೆದುಕೊಂಡು ಏನು ಮಾಡೋಣ?' ಎಂದು ನೋವಿನಿಂದಲೇ ಕೇಳಿರುವ ನಾಗ್, 'ಅವುಗಳನ್ನು ಊರಿಗೆ ತೆಗೆದುಕೊಂಡು ಹೋಗಲು ನೈಟ್ಕ್ಲಬ್ ಮಾಲೀಕರೇ ವ್ಯವಸ್ಥೆ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.</p><p>ಅಸ್ಸಾಂನಿಂದ ಬಂದಿರುವ ಮತ್ತೊಂದು ಗುಂಪೂ ಶವಾಗಾರದ ಎದುರು ಕುಳಿತಿದೆ. ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದೆ. ಆದಾಗ್ಯೂ, ಅಲ್ಲಿದ್ದವರಲ್ಲಿ ಒಬ್ಬರು, ಮೃತರಲ್ಲಿ ಕೆಲವರು ತಮ್ಮ ಸ್ನೇಹಿತರು ಎಂದು ಹೇಳಿದ್ದಾರೆ.</p><p>ಶವಗಳ ಪತ್ತೆ ಹಾಗೂ ಶವಪರೀಕ್ಷೆಗೆ ಒಂದು ದಿನ ಬೇಕಾಗಬಹುದು. ನಂತರವಷ್ಟೇ ಅವರ ಸಂಬಂಧಿಕರಿಗೆ ಹಸ್ತಾಂತರಿಸಲು ಸಾಧ್ಯ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p><p>ಪೊಲೀಸರು ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವಷ್ಟೇ, ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಜಿಎಂಸಿಎಚ್ ವಿಧಿವಿಜ್ಞಾನ ವಿಭಾಗದ ಮೂಲಗಳು ಮಾಹಿತಿ ನೀಡಿವೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ</strong>: ಉತ್ತರ ಗೋವಾದ ಅರ್ಪೋರದಲ್ಲಿರುವ ನೈಟ್ಕ್ಲಬ್ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟವರ ಸಂಬಂಧಿಕರು, ಪರಿಚಯದವರು ಸರ್ಕಾರಿ ಆಸ್ಪತ್ರೆಯ ಶವಾಗಾರದ ಎದುರು ಜಮಾಯಿಸಿದ್ದಾರೆ. ಶವಗಳ ಗುರುತಿಸುವಿಕೆ ಕಾರ್ಯ ಪ್ರಗತಿಯಲ್ಲಿದ್ದು, ಆಸ್ಪತ್ರೆಯ ಆವರಣದಲ್ಲಿ ದುಃಖ ಮಡುಗಟ್ಟಿದೆ.</p><p>ದುರಂತದಲ್ಲಿ ಒಟ್ಟು 25 ಮಂದಿ ಮೃತಪಟ್ಟು, ಆರು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಹಲವರು ಕೆಲಸದ ಸಲುವಾಗಿ ಜಾರ್ಖಂಡ್, ಅಸ್ಸಾಂನಿಂದ ಬಂದವರಾಗಿದ್ದಾರೆ. ಅವರ ಸಂಬಂಧಿಕರು, ತಾವು ಶವಗಳನ್ನು ಸ್ವೀಕರಿಸುವುದಿಲ್ಲ. ಮಾಲೀಕರೇ ಊರಿಗೆ ಕಳುಹಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.</p><p>ಪಣಜಿ ಸಮೀಪ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್) ಎದುರು ಜಾರ್ಖಂಡ್ ಕಾರ್ಮಿಕರ ತಂಡ ಬೆಳಗ್ಗೆಯಿಂದಲೂ ಬೀಡುಬಿಟ್ಟಿದ್ದು, ಮೃತರ ಮಾಹಿತಿಗಾಗಿ ಕಾಯುತ್ತಿದೆ.</p><p>ಮೃತರ ಗುರುತು ಪತ್ತೆಗೆ ಪೊಲೀಸರು ಗೋವಾ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ. ಶವಗಳನ್ನು ಶವಾಗರದಲ್ಲಿ ಇರಿಸಲಾಗಿದೆ.</p><p>ಪೊಲೀಸರ ಮಾಹಿತಿ ಪ್ರಕಾರ, ಮೃತಪಟ್ಟವರಲ್ಲಿ ನಾಲ್ಕು ಮಂದಿ ಪ್ರವಾಸಿಗರು. 14 ಜನರು ಕ್ಲಬ್ನ ಸಿಬ್ಬಂದಿ. ಉಳಿದವರ ಗುರುತು ಇನ್ನಷ್ಟೇ ಗೊತ್ತಾಗಬೇಕಿದೆ.</p>.PHOTOS | ಗೋವಾ: ಮಸಣವಾಯ್ತು ನೈಟ್ ಕ್ಲಬ್; 25 ಮಂದಿ ಸಾವು .ಗೋವಾ ನೈಟ್ ಕ್ಲಬ್ ದುರಂತದಲ್ಲಿ 25 ಸಾವು: ರಾಷ್ಟ್ರಪತಿ ಮುರ್ಮು, PM ಮೋದಿ ಸಂತಾಪ.<p><strong>'ಶವಗಳನ್ನು ಪಡೆಯುವುದಿಲ್ಲ'</strong><br>ಅರ್ಪೋರಾದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಜಾರ್ಖಂಡ್ನ ನಂದಲಾಲ್ ನಾಗ್ ಎಂಬವರು, ಅವರದ್ದೇ ಹಳ್ಳಿಯ ನಾಲ್ಕು ಮಂದಿ ಬೆಂಕಿಗೆ ಆಹುತಿಯಾಗಿರಬಹುದು ಎಂದು ಶಂಕಿಸಿದ್ದಾರೆ.</p><p>'ನನ್ನದೇ ಊರಿನ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ ಒಬ್ಬ ನನ್ನ ಸಹೋದರನ ಮಗ. ಅವರೆಲ್ಲರೂ, ನೈಟ್ಕ್ಲಬ್ನಲ್ಲಿ ಬಾಣಸಿಗರಾಗಿ ಮತ್ತು ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು' ಎಂದಿದ್ದಾರೆ.</p><p>ಸಂತ್ರಸ್ತರು ಐದು ವರ್ಷಗಳ ಹಿಂದೆ ಜಾರ್ಖಂಡ್ನಿಂದ ಗೋವಾಗೆ ಬಂದಿದ್ದರು. ಆಗಿನಿಂದಲೂ ಬೇರೆ ಬೇರೆ ಹೋಟೆಲ್ಗಳು ನೈಟ್ಕ್ಲಬ್ಗಳಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದೂ ಹೇಳಿದ್ದಾರೆ.</p><p>ಮುಂದುವರಿದು, 'ಶವಗಳನ್ನು ತೆಗೆದುಕೊಂಡು ಏನು ಮಾಡೋಣ?' ಎಂದು ನೋವಿನಿಂದಲೇ ಕೇಳಿರುವ ನಾಗ್, 'ಅವುಗಳನ್ನು ಊರಿಗೆ ತೆಗೆದುಕೊಂಡು ಹೋಗಲು ನೈಟ್ಕ್ಲಬ್ ಮಾಲೀಕರೇ ವ್ಯವಸ್ಥೆ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.</p><p>ಅಸ್ಸಾಂನಿಂದ ಬಂದಿರುವ ಮತ್ತೊಂದು ಗುಂಪೂ ಶವಾಗಾರದ ಎದುರು ಕುಳಿತಿದೆ. ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದೆ. ಆದಾಗ್ಯೂ, ಅಲ್ಲಿದ್ದವರಲ್ಲಿ ಒಬ್ಬರು, ಮೃತರಲ್ಲಿ ಕೆಲವರು ತಮ್ಮ ಸ್ನೇಹಿತರು ಎಂದು ಹೇಳಿದ್ದಾರೆ.</p><p>ಶವಗಳ ಪತ್ತೆ ಹಾಗೂ ಶವಪರೀಕ್ಷೆಗೆ ಒಂದು ದಿನ ಬೇಕಾಗಬಹುದು. ನಂತರವಷ್ಟೇ ಅವರ ಸಂಬಂಧಿಕರಿಗೆ ಹಸ್ತಾಂತರಿಸಲು ಸಾಧ್ಯ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.</p><p>ಪೊಲೀಸರು ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರವಷ್ಟೇ, ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಜಿಎಂಸಿಎಚ್ ವಿಧಿವಿಜ್ಞಾನ ವಿಭಾಗದ ಮೂಲಗಳು ಮಾಹಿತಿ ನೀಡಿವೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>