ಅರ್ಜಿದಾರರು ಪೊಲೀಸ್ ಅಥವಾ ತನ್ನದೇ ವ್ಯವಸ್ಥೆಯ ಮೂಲಕ ನ್ಯಾಯಾಲಯವೇ ಯಾದವ್ಗೆ ಸಮನ್ಸ್ ತಲುಪಿಸಲಿ ಎನ್ನುವ ನಿರೀಕ್ಷೆಯಲ್ಲಿದ್ದಂತಿದೆ. ಮೆಹ್ತಾ ಅವರ ವಕೀಲರು ಸಮನ್ಸ್ ಅನ್ನು ಕೋರ್ಟ್ ಗುಮಾಸ್ತರಿಂದ ಸಂಗ್ರಹಿಸಲಿ. ದೂರುದಾರರಾಗಿರುವ ಕಾರಣ ಸಮನ್ಸ್ ಅನ್ನು ಯಾದವ್ಗೆ ತಲುಪಿಸುವುದು ಮೆಹ್ತಾ ಅವರ ಕೆಲಸ. ಇದಕ್ಕೆ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದ ನ್ಯಾಯಾಧೀಶರು, ಎರಡನೇ ಬಾರಿ ಸಮನ್ಸ್ ಜಾರಿಗೊಳಿಸಿ, ಗೊಂದಲಗಳಿಗೆ ತೆರೆ ಎಳೆದರು.