ಆಸ್ಪತ್ರೆಯವರ ಸಂದೇಶ ನೋಡಿ ದಿಗಿಲುಗೊಂಡೆ, ದುಃಖವೂ ಆಯಿತು. ಆಸ್ಪತ್ರೆಯವರ ಬೇಜವಾಬ್ದಾರಿಯನ್ನುಇದು ತೋರಿಸುತ್ತದೆ. ಮೇ.16ರಂದು ನಾನೇ ನನ್ನ ಅಪ್ಪನ ಅಂತ್ಯ ಸಂಸ್ಕಾರ ಮಾಡಿದ್ದೆ. ಅದರ ಫೋಟೊ ಕೂಡಾ ಇದೆ ಎಂದು ಸಾಗರ್ ಹೇಳಿದ್ದಾರೆ.
ಆಸ್ಪತ್ರೆಯಿಂದ ನನ್ನ ಅಪ್ಪನ ಮೃತದೇಹವನ್ನು ಪಡೆಯಲು ನಾನು ಕಷ್ಟಪಟ್ಟಿದ್ದೆ. ಅವರ ದೇಹದಲ್ಲಿದ್ದ ಚಿನ್ನಾಭರಣ ಜೇಬಲ್ಲಿದ್ದ ₹10,000 ಕಳವು ಆಗಿದೆ ಎಂದ ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ದಾಖಲಿಸಲು ಹರಸಾಹಸ ಪಡಬೇಕಾಯಿತು.