<p><strong>ಕುರುಕ್ಷೇತ್ರ</strong>: ‘ಸತ್ಯ, ನ್ಯಾಯ ಹಾಗೂ ನಂಬಿಕೆಯ ರಕ್ಷಣೆಯೇ ತನ್ನ ಧರ್ಮ ಎಂಬುದಾಗಿ ಗುರು ತೇಗ್ ಬಹದ್ದೂರ್ ಪರಿಗಣಿಸಿದ್ದರು. ಈ ಉದ್ದೇಶಕ್ಕಾಗಿಯೇ ಅವರು ತಮ್ಮ ಪ್ರಾಣತ್ಯಾಗ ಮಾಡಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.</p>.<p>ಸಿಖ್ ಧರ್ಮದ 9ನೇ ಗುರು ಆಗಿರುವ ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ನೇತೃತ್ವದ ಸರ್ಕಾರ ಕೂಡ ಈ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿದೆ’ ಎಂದರು.</p>.<p>ಇದೇ ವೇಳೆ ಅವರು, ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಹೊರತಂದಿರುವ ವಿಶೇಷ ನಾಣ್ಯ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.</p>.<p>‘ಇಂದು ಬೆಳಿಗ್ಗೆ ಶ್ರೀರಾಮ ಪ್ರಭುವಿನ ನಗರವಾದ ಅಯೋಧ್ಯೆಯಲ್ಲಿ ಇದ್ದೆ. ಈಗ, ಶ್ರೀಕೃಷ್ಣನ ಊರಿನಲ್ಲಿ ಇದ್ದೇನೆ’ ಎಂದೂ ಹೇಳಿದರು.</p>.<p>‘ರಾಮ ಮಂದಿರ ಕುರಿತ ಸುಪ್ರೀಂ ಕೋರ್ಟ್ ತೀರ್ಪು 2019ರ ನವೆಂಬರ್ 9ರಂದು ಪ್ರಕಟವಾಯಿತು. ಆ ದಿನ ನಾನು ಪಂಜಾಬ್ನಲ್ಲಿರುವ ದೇರಾ ಬಾಬಾ ನಾನಕ್ಗೆ ಹೋಗಿದ್ದೆ. ಕರ್ತಾರಪುರ ಕಾರಿಡಾರ್ ಉದ್ಘಾಟನೆ ನೆರವೇರಿಸಿದ್ದೆ’ ಎಂದು ಸ್ಮರಿಸಿದರು.</p>.<p>‘ರಾಮ ಮಂದಿರ ನಿರ್ಮಾಣಕ್ಕೆ ದಾರಿ ತೋರುವಂತೆ ಹಾಗೂ ಲಕ್ಷಾಂತರ ಜನ ರಾಮನ ಭಕ್ತರ ಆಶೋತ್ತರ ಈಡೇರಬೇಕು ಎಂಬುದಾಗಿ ನಾನು ಪ್ರಾರ್ಥಿಸುತ್ತಿದ್ದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದರ ಪರವಾಗಿ ತೀರ್ಪು ಪ್ರಕಟವಾಗುವ ಮೂಲಕ ನಮ್ಮ ಪ್ರಾರ್ಥನೆಗೆ ಪ್ರತಿಫಲ ಸಿಕ್ಕಿತ್ತು’ ಎಂದೂ ಹೇಳಿದರು.</p>.<p>ಅನಾವರಣ: ಶ್ರೀಕೃಷ್ಣನ ಶಂಖಕ್ಕೆ ಸಮರ್ಪಣೆ ಉದ್ದೇಶದಿಂದ ನಿರ್ಮಿಸಲಾಗಿರುವ ‘ಪಾಂಚಜನ್ಯ’ ಸ್ಮಾರಕವನ್ನು ಕೂಡ ಮೋದಿ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುರುಕ್ಷೇತ್ರ</strong>: ‘ಸತ್ಯ, ನ್ಯಾಯ ಹಾಗೂ ನಂಬಿಕೆಯ ರಕ್ಷಣೆಯೇ ತನ್ನ ಧರ್ಮ ಎಂಬುದಾಗಿ ಗುರು ತೇಗ್ ಬಹದ್ದೂರ್ ಪರಿಗಣಿಸಿದ್ದರು. ಈ ಉದ್ದೇಶಕ್ಕಾಗಿಯೇ ಅವರು ತಮ್ಮ ಪ್ರಾಣತ್ಯಾಗ ಮಾಡಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.</p>.<p>ಸಿಖ್ ಧರ್ಮದ 9ನೇ ಗುರು ಆಗಿರುವ ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ನೇತೃತ್ವದ ಸರ್ಕಾರ ಕೂಡ ಈ ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲಿದೆ’ ಎಂದರು.</p>.<p>ಇದೇ ವೇಳೆ ಅವರು, ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದ ಅಂಗವಾಗಿ ಹೊರತಂದಿರುವ ವಿಶೇಷ ನಾಣ್ಯ ಹಾಗೂ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.</p>.<p>‘ಇಂದು ಬೆಳಿಗ್ಗೆ ಶ್ರೀರಾಮ ಪ್ರಭುವಿನ ನಗರವಾದ ಅಯೋಧ್ಯೆಯಲ್ಲಿ ಇದ್ದೆ. ಈಗ, ಶ್ರೀಕೃಷ್ಣನ ಊರಿನಲ್ಲಿ ಇದ್ದೇನೆ’ ಎಂದೂ ಹೇಳಿದರು.</p>.<p>‘ರಾಮ ಮಂದಿರ ಕುರಿತ ಸುಪ್ರೀಂ ಕೋರ್ಟ್ ತೀರ್ಪು 2019ರ ನವೆಂಬರ್ 9ರಂದು ಪ್ರಕಟವಾಯಿತು. ಆ ದಿನ ನಾನು ಪಂಜಾಬ್ನಲ್ಲಿರುವ ದೇರಾ ಬಾಬಾ ನಾನಕ್ಗೆ ಹೋಗಿದ್ದೆ. ಕರ್ತಾರಪುರ ಕಾರಿಡಾರ್ ಉದ್ಘಾಟನೆ ನೆರವೇರಿಸಿದ್ದೆ’ ಎಂದು ಸ್ಮರಿಸಿದರು.</p>.<p>‘ರಾಮ ಮಂದಿರ ನಿರ್ಮಾಣಕ್ಕೆ ದಾರಿ ತೋರುವಂತೆ ಹಾಗೂ ಲಕ್ಷಾಂತರ ಜನ ರಾಮನ ಭಕ್ತರ ಆಶೋತ್ತರ ಈಡೇರಬೇಕು ಎಂಬುದಾಗಿ ನಾನು ಪ್ರಾರ್ಥಿಸುತ್ತಿದ್ದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದರ ಪರವಾಗಿ ತೀರ್ಪು ಪ್ರಕಟವಾಗುವ ಮೂಲಕ ನಮ್ಮ ಪ್ರಾರ್ಥನೆಗೆ ಪ್ರತಿಫಲ ಸಿಕ್ಕಿತ್ತು’ ಎಂದೂ ಹೇಳಿದರು.</p>.<p>ಅನಾವರಣ: ಶ್ರೀಕೃಷ್ಣನ ಶಂಖಕ್ಕೆ ಸಮರ್ಪಣೆ ಉದ್ದೇಶದಿಂದ ನಿರ್ಮಿಸಲಾಗಿರುವ ‘ಪಾಂಚಜನ್ಯ’ ಸ್ಮಾರಕವನ್ನು ಕೂಡ ಮೋದಿ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>