<p><strong>ಪುಣೆ:</strong> ಮೊಹಲ್ಲಾಗಳಲ್ಲಿ (ಮುಸ್ಲಿಮರು ವಾಸಿಸುವ ಪ್ರದೇಶ) ಭಗವದ್ಗೀತೆ ಬೋಧನೆಯನ್ನು ಪ್ರಚಾರ ಮಾಡಿದರೆ ‘ಹಿಂದೂ ರಾಷ್ಟ್ರ’ ಕಲ್ಪನೆಯು ಬಲಗೊಳ್ಳಲಿದೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿದ್ದಾರೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಭಗವದ್ಗೀತೆಯು ಎಂದಿಗೂ ಧಾರ್ಮಿಕ ದ್ವೇಷವನ್ನು ಹರಡುವುದಿಲ್ಲ. ಮತಾಂತರವನ್ನೂ ಬೆಂಬಲಿಸುವುದಿಲ್ಲ. ಹೀಗಾಗಿ ಮೊಹಲ್ಲಾಗಳಲ್ಲಿ ಭಗವದ್ಗೀತೆಯ ಬೋಧನೆಯನ್ನು ಪ್ರಚಾರ ಮಾಡಿದರೆ ಅವರ ಚಿಂತನೆಯೂ ಬದಲಾಗುತ್ತದೆ. ಇದು ನಮ್ಮ ಹಿಂದೂ ರಾಷ್ಟ್ರದ ಕಲ್ಪನೆಗೆ ಪುಷ್ಠಿ ನೀಡುತ್ತದೆ’ ಎಂದಿದ್ದಾರೆ. </p>.<p>‘ಭಗವದ್ಗೀತೆಯ ಬೋಧನೆಯು ಸಾಮರಸ್ಯ ಮೂಡಿಸುತ್ತದೆ ಹಾಗೂ ಚಿಂತನೆಯನ್ನು ಬದಲಾಯಿಸುತ್ತದೆ. ಅದರ ಸಂದೇಶವು ಎಲ್ಲಾ ಮೂಲೆಗಳನ್ನು ತಲುಪಬೇಕು’ ಎಂದರು. </p>.<p>ಒಂದನೇ ತರಗತಿಯಿಂದ ಶಾಲಾ ಪಠ್ಯಕ್ರಮದಲ್ಲಿ ಹಿಂದಿ ಭಾಷೆ ಬೋಧಿಸುವುದರ ವಿರುದ್ಧ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಉತ್ತರಿಸಿದ ಅವರು ‘ಯಾವುದೇ ಭಾಷೆಯ ಬೋಧನೆಯನ್ನು ಕಡ್ಡಾಯಗೊಳಿಸಿಲ್ಲ. ವಿದ್ಯಾರ್ಥಿಗಳು ಬಯಸಿದಲ್ಲಿ ಸಂಸ್ಕೃತವನ್ನೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ:</strong> ಮೊಹಲ್ಲಾಗಳಲ್ಲಿ (ಮುಸ್ಲಿಮರು ವಾಸಿಸುವ ಪ್ರದೇಶ) ಭಗವದ್ಗೀತೆ ಬೋಧನೆಯನ್ನು ಪ್ರಚಾರ ಮಾಡಿದರೆ ‘ಹಿಂದೂ ರಾಷ್ಟ್ರ’ ಕಲ್ಪನೆಯು ಬಲಗೊಳ್ಳಲಿದೆ ಎಂದು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿದ್ದಾರೆ.</p>.<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಭಗವದ್ಗೀತೆಯು ಎಂದಿಗೂ ಧಾರ್ಮಿಕ ದ್ವೇಷವನ್ನು ಹರಡುವುದಿಲ್ಲ. ಮತಾಂತರವನ್ನೂ ಬೆಂಬಲಿಸುವುದಿಲ್ಲ. ಹೀಗಾಗಿ ಮೊಹಲ್ಲಾಗಳಲ್ಲಿ ಭಗವದ್ಗೀತೆಯ ಬೋಧನೆಯನ್ನು ಪ್ರಚಾರ ಮಾಡಿದರೆ ಅವರ ಚಿಂತನೆಯೂ ಬದಲಾಗುತ್ತದೆ. ಇದು ನಮ್ಮ ಹಿಂದೂ ರಾಷ್ಟ್ರದ ಕಲ್ಪನೆಗೆ ಪುಷ್ಠಿ ನೀಡುತ್ತದೆ’ ಎಂದಿದ್ದಾರೆ. </p>.<p>‘ಭಗವದ್ಗೀತೆಯ ಬೋಧನೆಯು ಸಾಮರಸ್ಯ ಮೂಡಿಸುತ್ತದೆ ಹಾಗೂ ಚಿಂತನೆಯನ್ನು ಬದಲಾಯಿಸುತ್ತದೆ. ಅದರ ಸಂದೇಶವು ಎಲ್ಲಾ ಮೂಲೆಗಳನ್ನು ತಲುಪಬೇಕು’ ಎಂದರು. </p>.<p>ಒಂದನೇ ತರಗತಿಯಿಂದ ಶಾಲಾ ಪಠ್ಯಕ್ರಮದಲ್ಲಿ ಹಿಂದಿ ಭಾಷೆ ಬೋಧಿಸುವುದರ ವಿರುದ್ಧ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಉತ್ತರಿಸಿದ ಅವರು ‘ಯಾವುದೇ ಭಾಷೆಯ ಬೋಧನೆಯನ್ನು ಕಡ್ಡಾಯಗೊಳಿಸಿಲ್ಲ. ವಿದ್ಯಾರ್ಥಿಗಳು ಬಯಸಿದಲ್ಲಿ ಸಂಸ್ಕೃತವನ್ನೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>