<p>ಸಂಭಲ್: ಭಾರಿ ಪೊಲೀಸ್ ಭದ್ರತೆ ನಡುವೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.</p><p>ಹೋಳಿ ಹಾಗೂ ಮುಸ್ಲಿಮರ ಶುಕ್ರವಾರ ಪ್ರಾರ್ಥನೆ ಒಂದೇ ದಿನ ಇದ್ದಿದ್ದರಿಂದ ವಿವಾದಿತ ಸಂಭಲ್ ಮಸೀದಿ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸರು ಸರ್ಪಗಾವಲನ್ನು ನಿರ್ಮಿಸಿದ್ದರು.</p><p>ಸಂಭಲ್ ನಗರದಲ್ಲಿ ಸಾಂಪ್ರದಾಯಿಕ ‘ಚೌಪಾಯಿ ಕಾ ಜುಲುಸ್’ ಕೂಡ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.</p><p>ಮೊಘಲ್ ಕಾಲದ ಶಾಹಿ ಜುಮಾ ಮಸೀದಿಯ ಸಮೀಕ್ಷೆ ನಡೆಸಲು ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಕಳೆದ ವರ್ಷ ನವೆಂಬರ್ 24ರಂದು ಸಂಭಲ್ನಲ್ಲಿ ನಡೆದ ಹಿಂಸಾಚಾರದಲ್ಲಿ 4 ಮಂದಿ ಸಾವಿಗೀಡಾಗಿದ್ದರು. ಪೊಲೀಸ್ ಸಿಬ್ಬಂದಿ ಸೇರಿ ಹಲವರು ಗಾಯಗೊಂಡಿದ್ದರು. </p><p>ಶುಕ್ರವಾರದ ನಮಾಜ್ ಮಧ್ಯಾಹ್ನ 2.30ಕ್ಕೆ ನಡೆಯಿತು. ಹಬ್ಬ ಹಾಗೂ ಶುಕ್ರವಾರದ ಪ್ರಾರ್ಥನೆಯನ್ನು ಸಾಮರಸ್ಯ ಮನೋಭಾವದಿಂದ ಆಚರಿಸಬೇಕು ಎಂದು ಮಸೀದಿಯ ಅಧ್ಯಕ್ಷ ಜಫರ್ ಅಲಿ ಈ ಹಿಂದೆ ಎರಡೂ ಸಮುದಾಯದವರೊಂದಿಗೆ ಭಿನ್ನವಿಸಿಕೊಂಡಿದ್ದರು.</p><p>ಗುರುವಾರ ಸಂಜೆ ಜಿಲ್ಲೆಯಲ್ಲಿ ಸುಮಾರು 1,212 ಹೋಳಿ ದಹನ ಶಾಂತಿಯುತವಾಗಿ ನಡೆದಿದೆ. ಜನರು ಸಾಂಪ್ರದಾಯಿಕವಾಗಿ ಹೋಳಿ ಆಚರಿಸಿದ್ದಾರೆ. 60ಕ್ಕೂ ಹೆಚ್ಚು ಮೆರವಣಿಗೆಗಳು ಬಿಗಿ ಭದ್ರತೆಯೊಂದಿಗೆ ನಡೆದಿದೆ’ ಎಂದು ಸಂಭಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಹೇಳಿದ್ದಾರೆ.</p><p>ಎಲ್ಲವೂ ಸಾಂಗವಾಗಿ ನೆರವೇರಲು ಮೂರು ಸುತ್ತಿನ ಭದ್ರತೆ ನಿರ್ಮಿಸಲಾಗಿತ್ತು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಭಲ್: ಭಾರಿ ಪೊಲೀಸ್ ಭದ್ರತೆ ನಡುವೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.</p><p>ಹೋಳಿ ಹಾಗೂ ಮುಸ್ಲಿಮರ ಶುಕ್ರವಾರ ಪ್ರಾರ್ಥನೆ ಒಂದೇ ದಿನ ಇದ್ದಿದ್ದರಿಂದ ವಿವಾದಿತ ಸಂಭಲ್ ಮಸೀದಿ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸರು ಸರ್ಪಗಾವಲನ್ನು ನಿರ್ಮಿಸಿದ್ದರು.</p><p>ಸಂಭಲ್ ನಗರದಲ್ಲಿ ಸಾಂಪ್ರದಾಯಿಕ ‘ಚೌಪಾಯಿ ಕಾ ಜುಲುಸ್’ ಕೂಡ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.</p><p>ಮೊಘಲ್ ಕಾಲದ ಶಾಹಿ ಜುಮಾ ಮಸೀದಿಯ ಸಮೀಕ್ಷೆ ನಡೆಸಲು ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಕಳೆದ ವರ್ಷ ನವೆಂಬರ್ 24ರಂದು ಸಂಭಲ್ನಲ್ಲಿ ನಡೆದ ಹಿಂಸಾಚಾರದಲ್ಲಿ 4 ಮಂದಿ ಸಾವಿಗೀಡಾಗಿದ್ದರು. ಪೊಲೀಸ್ ಸಿಬ್ಬಂದಿ ಸೇರಿ ಹಲವರು ಗಾಯಗೊಂಡಿದ್ದರು. </p><p>ಶುಕ್ರವಾರದ ನಮಾಜ್ ಮಧ್ಯಾಹ್ನ 2.30ಕ್ಕೆ ನಡೆಯಿತು. ಹಬ್ಬ ಹಾಗೂ ಶುಕ್ರವಾರದ ಪ್ರಾರ್ಥನೆಯನ್ನು ಸಾಮರಸ್ಯ ಮನೋಭಾವದಿಂದ ಆಚರಿಸಬೇಕು ಎಂದು ಮಸೀದಿಯ ಅಧ್ಯಕ್ಷ ಜಫರ್ ಅಲಿ ಈ ಹಿಂದೆ ಎರಡೂ ಸಮುದಾಯದವರೊಂದಿಗೆ ಭಿನ್ನವಿಸಿಕೊಂಡಿದ್ದರು.</p><p>ಗುರುವಾರ ಸಂಜೆ ಜಿಲ್ಲೆಯಲ್ಲಿ ಸುಮಾರು 1,212 ಹೋಳಿ ದಹನ ಶಾಂತಿಯುತವಾಗಿ ನಡೆದಿದೆ. ಜನರು ಸಾಂಪ್ರದಾಯಿಕವಾಗಿ ಹೋಳಿ ಆಚರಿಸಿದ್ದಾರೆ. 60ಕ್ಕೂ ಹೆಚ್ಚು ಮೆರವಣಿಗೆಗಳು ಬಿಗಿ ಭದ್ರತೆಯೊಂದಿಗೆ ನಡೆದಿದೆ’ ಎಂದು ಸಂಭಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಹೇಳಿದ್ದಾರೆ.</p><p>ಎಲ್ಲವೂ ಸಾಂಗವಾಗಿ ನೆರವೇರಲು ಮೂರು ಸುತ್ತಿನ ಭದ್ರತೆ ನಿರ್ಮಿಸಲಾಗಿತ್ತು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>