<p><strong>ಗುವಾಹಟಿ</strong>: ಮೈತೇಯಿ ಸಮುದಾಯದ ಜೊತೆಗಿನ ಸಂಘರ್ಷಕ್ಕೆ ಕೊನೆ ಹಾಡುವ ಉದ್ದೇಶದಿಂದ ಇದೇ 17ರಂದು ಕುಕಿ ಸಮುದಾಯ ಸದಸ್ಯರನ್ನು ಒಳಗೊಂಡ ನಿಯೋಗವೊಂದು ಗೃಹ ಸಚಿವಾಲಯ ಅಧಿಕಾರಿಗಳನ್ನು ಭೇಟಿ ಮಾಡಿ, ಚರ್ಚಿಸಲಿದೆ.</p>.<p>ಇದು, ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿನ ಪ್ರಮುಖ ಬೆಳವಣಿಗೆ ಎಂದು ಬಣ್ಣಿಸಲಾಗುತ್ತಿದೆ.</p>.<p>ಕೌನ್ಸಿಲ್ ಸದಸ್ಯರು ಚುರಚಾಂದಪುರದಲ್ಲಿ ನೂತನ ರಾಜ್ಯಪಾಲ ಅಜಯಕುಮಾರ್ ಭಲ್ಲಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.</p>.<p>ಕುಕಿ ಜೊ ಸಮುದಾಯಗಳನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆಗಳ ವೇದಿಕೆಯಾದ ‘ಕುಕಿ ಜೊ ಕೌನ್ಸಿಲ್’ನ ನಿಯೋಗವು ನವದೆಹಲಿಯಲ್ಲಿ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ನಿಯೋಗದಲ್ಲಿ 8 ಸದಸ್ಯರಿರುವರು ಎಂದು ಕೌನ್ಸಿಲ್ ವಕ್ತಾರ ಗಿಂಜಾ ವುವಾಲ್ಜೊಂಗ್ ‘ಪ್ರಜಾವಾಣಿ’ಗೆ ಭಾನುವಾರ ತಿಳಿಸಿದ್ದಾರೆ.</p>.<p>‘ಕುಕಿ ಸಮುದಾಯಗಳಿರುವ ಪ್ರದೇಶಗಳನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶ ರಚಿಸಬೇಕು ಹಾಗೂ ‘ಪ್ರತ್ಯೇಕ ಆಡಳಿತ’ ವ್ಯವಸ್ಥೆ ರೂಪಿಸಬೇಕು’ ಎಂಬ ಪ್ರಮುಖ ಬೇಡಿಕೆಯನ್ನು ಅಂದಿನ ಸಭೆಯಲ್ಲಿ ಮಂಡಿಸಲಾಗುವುದು’ ಎಂದು ತಿಳಿಸಿದ್ದಾರೆ.</p>.<p>‘ಕುಕಿ ನ್ಯಾಷನಲ್ ಆರ್ಗನೈಜೇಷನ್(ಕೆಎನ್ಒ) ಹಾಗೂ ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್)ನ ಬೇಡಿಕೆಗಳನ್ನು ಕೌನ್ಸಿಲ್ ಬೆಂಬಲಿಸುತ್ತದೆ. ಈ ಎರಡು ಸಂಘಟನೆಗಳೊಂದಿಗೆ ಶೀಘ್ರವೇ ಮಾತುಕತೆ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದೂ ತಿಳಿಸಿದ್ದಾರೆ.</p>.<p><strong>ಪ್ರಮುಖ ಅಂಶಗಳು</strong></p><p>* 2023ರ ಮೇನಲ್ಲಿ ಸಂಘರ್ಷ ಶುರುವಾದಾಗಿನಿಂದ 250ಕ್ಕೂ ಹೆಚ್ಚು ಜನರ ಹತ್ಯೆ 60 ಸಾವಿರಕ್ಕೂ ಹೆಚ್ಚು ಜನರು ಸೂರು ಕಳೆದುಕೊಂಡಿದ್ದಾರೆ * ‘ಪ್ರತ್ಯೇಕ ಆಡಳಿತ’ ವ್ಯವಸ್ಥೆಗೆ ಕುಕಿ ಜೊ ಸಮುದಾಯದ ಬೇಡಿಕೆ * ಮಣಿಪುರದಲ್ಲಿ ಎನ್ಆರ್ಸಿ ಜಾರಿಗೆ ಮೈತೇಯಿಗಳ ಬೇಡಿಕೆ * ವಿಧಾನಸಭೆ ಕಲಾಪಗಳಿಂದ ಅಂತರ ಕಾಯ್ದುಕೊಂಡಿರುವ ಕುಕಿ ಸಮುದಾಯದ 10 ಶಾಸಕರು * ಮಣಿಪುರದ ಸಮಸ್ಯೆ ‘ದೀರ್ಘಕಾಲಿನದು ಹಾಗೂ ಸೂಕ್ಷ್ಮ’ವಾಗಿರುವ ಕಾರಣ ಪರಿಹಾರಕ್ಕೆ ಸಮಯ ಬೇಕಾಗುತ್ತದೆ ಎಂದು ಕಳೆದ ವರ್ಷ ಡಿ.12ರಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿಕೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ</strong>: ಮೈತೇಯಿ ಸಮುದಾಯದ ಜೊತೆಗಿನ ಸಂಘರ್ಷಕ್ಕೆ ಕೊನೆ ಹಾಡುವ ಉದ್ದೇಶದಿಂದ ಇದೇ 17ರಂದು ಕುಕಿ ಸಮುದಾಯ ಸದಸ್ಯರನ್ನು ಒಳಗೊಂಡ ನಿಯೋಗವೊಂದು ಗೃಹ ಸಚಿವಾಲಯ ಅಧಿಕಾರಿಗಳನ್ನು ಭೇಟಿ ಮಾಡಿ, ಚರ್ಚಿಸಲಿದೆ.</p>.<p>ಇದು, ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿನ ಪ್ರಮುಖ ಬೆಳವಣಿಗೆ ಎಂದು ಬಣ್ಣಿಸಲಾಗುತ್ತಿದೆ.</p>.<p>ಕೌನ್ಸಿಲ್ ಸದಸ್ಯರು ಚುರಚಾಂದಪುರದಲ್ಲಿ ನೂತನ ರಾಜ್ಯಪಾಲ ಅಜಯಕುಮಾರ್ ಭಲ್ಲಾ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಗಮನಾರ್ಹ.</p>.<p>ಕುಕಿ ಜೊ ಸಮುದಾಯಗಳನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆಗಳ ವೇದಿಕೆಯಾದ ‘ಕುಕಿ ಜೊ ಕೌನ್ಸಿಲ್’ನ ನಿಯೋಗವು ನವದೆಹಲಿಯಲ್ಲಿ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ನಿಯೋಗದಲ್ಲಿ 8 ಸದಸ್ಯರಿರುವರು ಎಂದು ಕೌನ್ಸಿಲ್ ವಕ್ತಾರ ಗಿಂಜಾ ವುವಾಲ್ಜೊಂಗ್ ‘ಪ್ರಜಾವಾಣಿ’ಗೆ ಭಾನುವಾರ ತಿಳಿಸಿದ್ದಾರೆ.</p>.<p>‘ಕುಕಿ ಸಮುದಾಯಗಳಿರುವ ಪ್ರದೇಶಗಳನ್ನು ಒಳಗೊಂಡ ಕೇಂದ್ರಾಡಳಿತ ಪ್ರದೇಶ ರಚಿಸಬೇಕು ಹಾಗೂ ‘ಪ್ರತ್ಯೇಕ ಆಡಳಿತ’ ವ್ಯವಸ್ಥೆ ರೂಪಿಸಬೇಕು’ ಎಂಬ ಪ್ರಮುಖ ಬೇಡಿಕೆಯನ್ನು ಅಂದಿನ ಸಭೆಯಲ್ಲಿ ಮಂಡಿಸಲಾಗುವುದು’ ಎಂದು ತಿಳಿಸಿದ್ದಾರೆ.</p>.<p>‘ಕುಕಿ ನ್ಯಾಷನಲ್ ಆರ್ಗನೈಜೇಷನ್(ಕೆಎನ್ಒ) ಹಾಗೂ ಯುನೈಟೆಡ್ ಪೀಪಲ್ಸ್ ಫ್ರಂಟ್ (ಯುಪಿಎಫ್)ನ ಬೇಡಿಕೆಗಳನ್ನು ಕೌನ್ಸಿಲ್ ಬೆಂಬಲಿಸುತ್ತದೆ. ಈ ಎರಡು ಸಂಘಟನೆಗಳೊಂದಿಗೆ ಶೀಘ್ರವೇ ಮಾತುಕತೆ ಆರಂಭಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದೂ ತಿಳಿಸಿದ್ದಾರೆ.</p>.<p><strong>ಪ್ರಮುಖ ಅಂಶಗಳು</strong></p><p>* 2023ರ ಮೇನಲ್ಲಿ ಸಂಘರ್ಷ ಶುರುವಾದಾಗಿನಿಂದ 250ಕ್ಕೂ ಹೆಚ್ಚು ಜನರ ಹತ್ಯೆ 60 ಸಾವಿರಕ್ಕೂ ಹೆಚ್ಚು ಜನರು ಸೂರು ಕಳೆದುಕೊಂಡಿದ್ದಾರೆ * ‘ಪ್ರತ್ಯೇಕ ಆಡಳಿತ’ ವ್ಯವಸ್ಥೆಗೆ ಕುಕಿ ಜೊ ಸಮುದಾಯದ ಬೇಡಿಕೆ * ಮಣಿಪುರದಲ್ಲಿ ಎನ್ಆರ್ಸಿ ಜಾರಿಗೆ ಮೈತೇಯಿಗಳ ಬೇಡಿಕೆ * ವಿಧಾನಸಭೆ ಕಲಾಪಗಳಿಂದ ಅಂತರ ಕಾಯ್ದುಕೊಂಡಿರುವ ಕುಕಿ ಸಮುದಾಯದ 10 ಶಾಸಕರು * ಮಣಿಪುರದ ಸಮಸ್ಯೆ ‘ದೀರ್ಘಕಾಲಿನದು ಹಾಗೂ ಸೂಕ್ಷ್ಮ’ವಾಗಿರುವ ಕಾರಣ ಪರಿಹಾರಕ್ಕೆ ಸಮಯ ಬೇಕಾಗುತ್ತದೆ ಎಂದು ಕಳೆದ ವರ್ಷ ಡಿ.12ರಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿಕೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>