<p><strong>ಬಿಹಾರ</strong>: ‘ಮತ ಕಳವು ಆರೋಪದ ಬಗ್ಗೆ ಲಿಖಿತ ಪ್ರಮಾಣ ಸಲ್ಲಿಸುವಂತೆ ಚುನಾವಣಾ ಆಯೋಗವು ನನ್ನನ್ನು ಕೇಳಿದೆ. ನನ್ನ ರೀತಿಯೇ ಆರೋಪ ಮಾಡಿದ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಬಳಿ ಪ್ರಮಾಣಪತ್ರ ಸಲ್ಲಿಸುವಂತೆ ಅದು ಹೇಳಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.</p><p>ಮತದಾರರ ಪಟ್ಟಿಯ ಅಕ್ರಮಗಳ ಕುರಿತ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ರಾಹುಲ್ ಗಾಂಧಿ ಅವರಿಗೆ ಭಾನುವಾರ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಈ ಬಗ್ಗೆ ಅದೇ ದಿನ ಬಿಹಾರದ ಸಾಸಾರಾಮ್ನಲ್ಲಿ ನಡೆದ ‘ಮತದಾರನ ಅಧಿಕಾರ ಯಾತ್ರೆ’ ವೇಳೆ ರಾಹುಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ.</p><p>‘ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಎಂದರೆ ಬಿಹಾರದ ಜನರ ಮತಗಳನ್ನು ಕದಿಯುವುದಾಗಿದೆ. ಮೊದಲು ಇದನ್ನು ರಹಸ್ಯವಾಗಿ ಮಾಡುತ್ತಿದ್ದರು. ಈಗ ಬಹಿರಂಗವಾಗಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.</p><p>‘ನೀವು(ಚುನಾವಣಾ ಆಯೋಗ) ಸಿಸಿಟಿವಿಗೆ ಸಂಬಂಧಿಸಿದಂತೆ ಒಂದು ಕಾನೂನನ್ನು ತಂದಿದ್ದೀರಿ. ಆ ಕಾನೂನನ್ನು ಏಕೆ ಬದಲಾಯಿಸಿದ್ದೀರಿ? ಸರ್ಕಾರ ಅದನ್ನು ಏಕೆ ಬದಲಾಯಿಸಿತು?’ ಎಂದು ಕೇಳಿದ್ದಾರೆ.</p>.<p>ಮುಂದುವರಿದು, ‘ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ ಎಂದು ನಿಮಗೆ(ಇ.ಸಿ) ತಿಳಿದಿದೆಯೇ? ಈ ಕಾನೂನನ್ನು ಯಾವಾಗ ಮಾಡಲಾಗಿದೆ ಗೊತ್ತೆ? ಈ ಕಾನೂನನ್ನು 2023ರಲ್ಲಿ ಮಾಡಲಾಗಿದೆ. 2023ರಲ್ಲಿಯೇ ಏಕೆ ಮಾಡಲಾಗಿದೆ? ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಚುನಾವಣಾ ಆಯೋಗದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಬಯಸುತ್ತಾರೆ. ಮತ ಕದಿಯುವಲ್ಲಿ ನೀವು(ಇ.ಸಿ) ಅವರಿಗೆ(ಬಿಜೆಪಿಗೆ) ಸಹಾಯ ಮಾಡುತ್ತಿದ್ದೀರಿ’ ಎಂದು ಆರೋಪಿಸಿದ್ದಾರೆ.</p><p>‘2023ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸಿಸಿಟಿವಿ ಸಂಬಂಧಿತ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಿದೆ’ ಎಂದೂ ಅವರು ಆರೋಪಿಸಿದ್ದಾರೆ.</p><p>ವಯನಾಡ್, ಅಮೇಠಿ ಮತ್ತು ರಾಯಬರೇಲಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಹಾರ</strong>: ‘ಮತ ಕಳವು ಆರೋಪದ ಬಗ್ಗೆ ಲಿಖಿತ ಪ್ರಮಾಣ ಸಲ್ಲಿಸುವಂತೆ ಚುನಾವಣಾ ಆಯೋಗವು ನನ್ನನ್ನು ಕೇಳಿದೆ. ನನ್ನ ರೀತಿಯೇ ಆರೋಪ ಮಾಡಿದ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಬಳಿ ಪ್ರಮಾಣಪತ್ರ ಸಲ್ಲಿಸುವಂತೆ ಅದು ಹೇಳಿಲ್ಲ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.</p><p>ಮತದಾರರ ಪಟ್ಟಿಯ ಅಕ್ರಮಗಳ ಕುರಿತ ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳ ಒಳಗಾಗಿ ಪ್ರಮಾಣ ಪತ್ರ ಸಲ್ಲಿಸುವಂತೆ ರಾಹುಲ್ ಗಾಂಧಿ ಅವರಿಗೆ ಭಾನುವಾರ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಈ ಬಗ್ಗೆ ಅದೇ ದಿನ ಬಿಹಾರದ ಸಾಸಾರಾಮ್ನಲ್ಲಿ ನಡೆದ ‘ಮತದಾರನ ಅಧಿಕಾರ ಯಾತ್ರೆ’ ವೇಳೆ ರಾಹುಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ.</p><p>‘ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಎಂದರೆ ಬಿಹಾರದ ಜನರ ಮತಗಳನ್ನು ಕದಿಯುವುದಾಗಿದೆ. ಮೊದಲು ಇದನ್ನು ರಹಸ್ಯವಾಗಿ ಮಾಡುತ್ತಿದ್ದರು. ಈಗ ಬಹಿರಂಗವಾಗಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.</p><p>‘ನೀವು(ಚುನಾವಣಾ ಆಯೋಗ) ಸಿಸಿಟಿವಿಗೆ ಸಂಬಂಧಿಸಿದಂತೆ ಒಂದು ಕಾನೂನನ್ನು ತಂದಿದ್ದೀರಿ. ಆ ಕಾನೂನನ್ನು ಏಕೆ ಬದಲಾಯಿಸಿದ್ದೀರಿ? ಸರ್ಕಾರ ಅದನ್ನು ಏಕೆ ಬದಲಾಯಿಸಿತು?’ ಎಂದು ಕೇಳಿದ್ದಾರೆ.</p>.<p>ಮುಂದುವರಿದು, ‘ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ ಎಂದು ನಿಮಗೆ(ಇ.ಸಿ) ತಿಳಿದಿದೆಯೇ? ಈ ಕಾನೂನನ್ನು ಯಾವಾಗ ಮಾಡಲಾಗಿದೆ ಗೊತ್ತೆ? ಈ ಕಾನೂನನ್ನು 2023ರಲ್ಲಿ ಮಾಡಲಾಗಿದೆ. 2023ರಲ್ಲಿಯೇ ಏಕೆ ಮಾಡಲಾಗಿದೆ? ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಚುನಾವಣಾ ಆಯೋಗದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಬಯಸುತ್ತಾರೆ. ಮತ ಕದಿಯುವಲ್ಲಿ ನೀವು(ಇ.ಸಿ) ಅವರಿಗೆ(ಬಿಜೆಪಿಗೆ) ಸಹಾಯ ಮಾಡುತ್ತಿದ್ದೀರಿ’ ಎಂದು ಆರೋಪಿಸಿದ್ದಾರೆ.</p><p>‘2023ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸಿಸಿಟಿವಿ ಸಂಬಂಧಿತ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಿದೆ’ ಎಂದೂ ಅವರು ಆರೋಪಿಸಿದ್ದಾರೆ.</p><p>ವಯನಾಡ್, ಅಮೇಠಿ ಮತ್ತು ರಾಯಬರೇಲಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಅನುರಾಗ್ ಠಾಕೂರ್ ಆರೋಪಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>