<p><strong>ನವದೆಹಲಿ</strong>: ಚೀನಾಗೆ ಹೊಂದಿಕೊಂಡಿರುವ ಗಡಿ ವಿಚಾರವಾಗಿ ಭಾರತದ ನಿಲುವು ದೃಢವಾಗಿದೆ. ಉಭಯ ದೇಶಗಳ ನಡುವಿನ ಮಾತುಕತೆ ಮೂರು ಪ್ರಮುಖ ತತ್ವಗಳಡಿಯೇ ನಡೆಯಬೇಕು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಗಳವಾರ ಹೇಳಿದ್ದಾರೆ.</p>.<p>ಲೋಕಸಭೆಯಲ್ಲಿ ಈ ಕುರಿತ ಚರ್ಚೆ ವೇಳೆ, ಅವರು ಈ ಹೇಳಿಕೆ ನೀಡಿದ್ದಾರೆ.</p>.<p>‘ವಾಸ್ತವ ನಿಯಂತ್ರಣ ರೇಖೆಯನ್ನು(ಎಲ್ಎಸಿ) ಎರಡೂ ದೇಶಗಳು ಗೌರವಿಸಬೇಕು ಹಾಗೂ ಅದರ ಮೇಲೆ ನಿಗಾ ಇಡಬೇಕು ಎಂಬುದು ಮೊದಲ ತತ್ವ. ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಅಥವಾ ಭಾರತವಾಗಲಿ ಏಕಪಕ್ಷೀಯವಾಗಿ ಯತ್ನಿಸಬಾರದು ಎಂಬುದು ಎರಡನೇ ತತ್ವ ಹಾಗೂ ಉಭಯ ದೇಶಗಳು ಈ ಹಿಂದೆ ಅಗಿರುವ ಒಪ್ಪಂದಗಳನ್ನು ಪಾಲನೆ ಮಾಡಬೇಕು ಎಂಬುದು ಮೂರನೇ ತತ್ವವಾಗಿದೆ’ ಎಂದು ಜೈಶಂಕರ್ ಸದನಕ್ಕೆ ತಿಳಿಸಿದ್ದಾರೆ.</p>.<p>‘ಗಡಿ ವಿಚಾರದಲ್ಲಿ ಬಾಕಿ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಚೀನಾ ಜೊತೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ. ಚೀನಾ ಜೊತೆಗಿನ ಸಂಬಂಧವು ಆ ದೇಶ ಎಷ್ಟರ ಮಟ್ಟಿಗೆ ಎಲ್ಎಸಿ ಪಾವಿತ್ರ್ಯ ಗೌರವಿಸುತ್ತದೆ ಎಂಬುದರ ಮೇಲೆ ಅವಲಂಬಿಸಿದೆ’ ಎಂದು ಜೈಶಂಕರ್ ಹೇಳಿದರು.</p>.<p>‘ಪೂರ್ವ ಲಡಾಖ್ ಗಡಿಯಲ್ಲಿನ ಡೆಪ್ಸಾಂಗ್ ಮತ್ತು ಡೆಮ್ಚೊಕ್ಗಳಿಂದ ಉಭಯ ದೇಶಗಳು ಸೈನಿಕರನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆ ಹಂತಹಂತವಾಗಿ ನಡೆದಿದ್ದರೂ, ಪೂರ್ಣ ಪ್ರಮಾಣದಲ್ಲಿ ಮುಗಿದಿದೆ. ಈಗ, ಕಾರ್ಯಸೂಚಿಯ ಭಾಗವಾಗಿರುವ ಉಳಿದ ವಿಚಾರಗಳ ಕುರಿತು ಮಾತುಕತೆ ಆರಂಭವನ್ನು ಭಾರತ ಎದುರು ನೋಡುತ್ತಿದೆ’ ಎಂದು ಹೇಳಿದ್ದಾರೆ.</p>.<p>ಡೆಪ್ಸಾಂಗ್ ಮತ್ತು ಡೆಮ್ಚೊಕ್ನಲ್ಲಿ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ವಿಚಾರದಲ್ಲಿ ಚೀನಾದೊಂದಿಗೆ ಅಕ್ಟೋಬರ್ 21ರಂದು ಮಾಡಿಕೊಂಡಿರುವ ಒಪ್ಪಂದ ಬಗ್ಗೆಯೂ ಜೈಶಂಕರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.</p>.<p><strong>ಜೈಶಂಕರ್ ಹೇಳಿದ್ದು</strong></p><ul><li><p> ಎಲ್ಎಸಿ ಉದ್ದಕ್ಕೂ ಸಂಘರ್ಷವನ್ನು ಕಡಿಮೆ ಮಾಡುವುದು ನಮ್ಮ ಮುಂದಿನ ಆದ್ಯತೆ. ಇದು ಗಡಿಯಲ್ಲಿ ಸೇನೆಯ ಹೆಚ್ಚುವರಿ ತುಕಡಿಗಳನ್ನು ನಿಯೋಜನೆಗೆ ಕಡಿವಾಣ ಹಾಕಲಿದೆ </p></li><li><p>ಗಡಿ ವಿಚಾರವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಉದ್ಭವಿಸಿದ್ದ ಉದ್ವಿಗ್ನತೆಯಿಂದ ಎರಡೂ ದೇಶಗಳು ಪಾಠ ಕಲಿತಿವೆ. ಇದು ಗಡಿ ನಿರ್ವಹಣೆಯಲ್ಲಿ ಮತ್ತಷ್ಟು ಎಚ್ಚರಿಕೆ ಅಗತ್ಯ ಎಂಬುದನ್ನು ಸಾರಿವೆ </p></li><li><p>ಚೀನಾದೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಭಾರತ ಒತ್ತು ನೀಡುತ್ತದೆ. ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದ ನೆಲಸುವುದು ಈ ಉದ್ದೇಶ ಈಡೇರಿಕೆಗೆ ಪೂರಕವಾಗಲಿದೆ </p></li><li><p>ದೇಶದ ಸುರಕ್ಷತೆ ಹಾಗೂ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಚೀನಾದೊಂದಿಗೆ ಭಾರತ ಮಾತುಕತೆ ನಡೆಸುವುದಕ್ಕೆ ಗಡಿಯಿಂದ ಸೇನೆ ಹಿಂದಕ್ಕೆ ಕರೆಸಿಕೊಂಡಿರುವ ನಡೆ ನೆರವಾಗಲಿದೆ</p></li><li><p>ಸಿಬ್ಬಂದಿ ಹಾಗೂ ಶಸ್ತ್ರಾಸ್ತ್ರಗಳ ಸಾಗಣೆ ವಿಷಯದಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದವು ಕೋವಿಡ್–19 ಪಿಡುಗು ಕೂಡ ಇತ್ತು. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಗಡಿ ರಕ್ಷಣೆ ಮಾಡಿದ ನಮ್ಮ ಸಶಸ್ತ್ರ ಪಡೆಗಳಿಗೆ ಶ್ರೇಯ ಸಲ್ಲಬೇಕು </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಚೀನಾಗೆ ಹೊಂದಿಕೊಂಡಿರುವ ಗಡಿ ವಿಚಾರವಾಗಿ ಭಾರತದ ನಿಲುವು ದೃಢವಾಗಿದೆ. ಉಭಯ ದೇಶಗಳ ನಡುವಿನ ಮಾತುಕತೆ ಮೂರು ಪ್ರಮುಖ ತತ್ವಗಳಡಿಯೇ ನಡೆಯಬೇಕು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಂಗಳವಾರ ಹೇಳಿದ್ದಾರೆ.</p>.<p>ಲೋಕಸಭೆಯಲ್ಲಿ ಈ ಕುರಿತ ಚರ್ಚೆ ವೇಳೆ, ಅವರು ಈ ಹೇಳಿಕೆ ನೀಡಿದ್ದಾರೆ.</p>.<p>‘ವಾಸ್ತವ ನಿಯಂತ್ರಣ ರೇಖೆಯನ್ನು(ಎಲ್ಎಸಿ) ಎರಡೂ ದೇಶಗಳು ಗೌರವಿಸಬೇಕು ಹಾಗೂ ಅದರ ಮೇಲೆ ನಿಗಾ ಇಡಬೇಕು ಎಂಬುದು ಮೊದಲ ತತ್ವ. ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಅಥವಾ ಭಾರತವಾಗಲಿ ಏಕಪಕ್ಷೀಯವಾಗಿ ಯತ್ನಿಸಬಾರದು ಎಂಬುದು ಎರಡನೇ ತತ್ವ ಹಾಗೂ ಉಭಯ ದೇಶಗಳು ಈ ಹಿಂದೆ ಅಗಿರುವ ಒಪ್ಪಂದಗಳನ್ನು ಪಾಲನೆ ಮಾಡಬೇಕು ಎಂಬುದು ಮೂರನೇ ತತ್ವವಾಗಿದೆ’ ಎಂದು ಜೈಶಂಕರ್ ಸದನಕ್ಕೆ ತಿಳಿಸಿದ್ದಾರೆ.</p>.<p>‘ಗಡಿ ವಿಚಾರದಲ್ಲಿ ಬಾಕಿ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಚೀನಾ ಜೊತೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ. ಚೀನಾ ಜೊತೆಗಿನ ಸಂಬಂಧವು ಆ ದೇಶ ಎಷ್ಟರ ಮಟ್ಟಿಗೆ ಎಲ್ಎಸಿ ಪಾವಿತ್ರ್ಯ ಗೌರವಿಸುತ್ತದೆ ಎಂಬುದರ ಮೇಲೆ ಅವಲಂಬಿಸಿದೆ’ ಎಂದು ಜೈಶಂಕರ್ ಹೇಳಿದರು.</p>.<p>‘ಪೂರ್ವ ಲಡಾಖ್ ಗಡಿಯಲ್ಲಿನ ಡೆಪ್ಸಾಂಗ್ ಮತ್ತು ಡೆಮ್ಚೊಕ್ಗಳಿಂದ ಉಭಯ ದೇಶಗಳು ಸೈನಿಕರನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆ ಹಂತಹಂತವಾಗಿ ನಡೆದಿದ್ದರೂ, ಪೂರ್ಣ ಪ್ರಮಾಣದಲ್ಲಿ ಮುಗಿದಿದೆ. ಈಗ, ಕಾರ್ಯಸೂಚಿಯ ಭಾಗವಾಗಿರುವ ಉಳಿದ ವಿಚಾರಗಳ ಕುರಿತು ಮಾತುಕತೆ ಆರಂಭವನ್ನು ಭಾರತ ಎದುರು ನೋಡುತ್ತಿದೆ’ ಎಂದು ಹೇಳಿದ್ದಾರೆ.</p>.<p>ಡೆಪ್ಸಾಂಗ್ ಮತ್ತು ಡೆಮ್ಚೊಕ್ನಲ್ಲಿ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ವಿಚಾರದಲ್ಲಿ ಚೀನಾದೊಂದಿಗೆ ಅಕ್ಟೋಬರ್ 21ರಂದು ಮಾಡಿಕೊಂಡಿರುವ ಒಪ್ಪಂದ ಬಗ್ಗೆಯೂ ಜೈಶಂಕರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.</p>.<p><strong>ಜೈಶಂಕರ್ ಹೇಳಿದ್ದು</strong></p><ul><li><p> ಎಲ್ಎಸಿ ಉದ್ದಕ್ಕೂ ಸಂಘರ್ಷವನ್ನು ಕಡಿಮೆ ಮಾಡುವುದು ನಮ್ಮ ಮುಂದಿನ ಆದ್ಯತೆ. ಇದು ಗಡಿಯಲ್ಲಿ ಸೇನೆಯ ಹೆಚ್ಚುವರಿ ತುಕಡಿಗಳನ್ನು ನಿಯೋಜನೆಗೆ ಕಡಿವಾಣ ಹಾಕಲಿದೆ </p></li><li><p>ಗಡಿ ವಿಚಾರವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಉದ್ಭವಿಸಿದ್ದ ಉದ್ವಿಗ್ನತೆಯಿಂದ ಎರಡೂ ದೇಶಗಳು ಪಾಠ ಕಲಿತಿವೆ. ಇದು ಗಡಿ ನಿರ್ವಹಣೆಯಲ್ಲಿ ಮತ್ತಷ್ಟು ಎಚ್ಚರಿಕೆ ಅಗತ್ಯ ಎಂಬುದನ್ನು ಸಾರಿವೆ </p></li><li><p>ಚೀನಾದೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಭಾರತ ಒತ್ತು ನೀಡುತ್ತದೆ. ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದ ನೆಲಸುವುದು ಈ ಉದ್ದೇಶ ಈಡೇರಿಕೆಗೆ ಪೂರಕವಾಗಲಿದೆ </p></li><li><p>ದೇಶದ ಸುರಕ್ಷತೆ ಹಾಗೂ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಚೀನಾದೊಂದಿಗೆ ಭಾರತ ಮಾತುಕತೆ ನಡೆಸುವುದಕ್ಕೆ ಗಡಿಯಿಂದ ಸೇನೆ ಹಿಂದಕ್ಕೆ ಕರೆಸಿಕೊಂಡಿರುವ ನಡೆ ನೆರವಾಗಲಿದೆ</p></li><li><p>ಸಿಬ್ಬಂದಿ ಹಾಗೂ ಶಸ್ತ್ರಾಸ್ತ್ರಗಳ ಸಾಗಣೆ ವಿಷಯದಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದವು ಕೋವಿಡ್–19 ಪಿಡುಗು ಕೂಡ ಇತ್ತು. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಗಡಿ ರಕ್ಷಣೆ ಮಾಡಿದ ನಮ್ಮ ಸಶಸ್ತ್ರ ಪಡೆಗಳಿಗೆ ಶ್ರೇಯ ಸಲ್ಲಬೇಕು </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>