<p><strong>ಪುಣೆ</strong>: ಪಾಕಿಸ್ತಾನ ಜತೆಗಿನ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕಾಗಿತ್ತು ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಅಸಾವರಿ ಜಗದಾಲೆ ಅವರು ಕರೆ ನೀಡಿದ್ದಾರೆ.</p>.<p>ಭಯೋತ್ಪಾದಕರು ಅವರ ತಂದೆ ಮತ್ತು ಕುಟುಂಬದ ಸ್ನೇಹಿತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಸಂದರ್ಭದಲ್ಲಿ ಅಸಾವರಿ ಅವರು ಬೈಸರನ್ ಕಣಿವೆಯಲ್ಲಿ ನೆಲಸಿದ್ದರು.</p>.<p>‘ಕೆಲವು ತಿಂಗಳುಗಳ ಹಿಂದೆ ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಹತ್ಯೆಗೀಡಾಗಿದ್ದಾರೆ. ಇಷ್ಟೆಲ್ಲಾ ನಡೆದರೂ ಬಿಸಿಸಿಐ ಈ ಪಂದ್ಯಾವಳಿ ನಡೆಸಿದರೆ, ನಿಜಕ್ಕೂ ತಪ್ಪಾದ ನಡೆಯಾಗಿದೆ’ ಎಂದು ಹೇಳಿದ್ದಾರೆ.</p>.<p>‘ಪಹಲ್ಗಾಮ್ ಭಯೋತ್ಪಾದಕ ದಾಳಿ, ಸೈನಿಕರ ಸಮರ್ಪಣೆ, ವರ್ಷಗಳಿಂದ ನಡೆಸುತ್ತಿರುವ ಅಸಂಖ್ಯಾತ ದಾಳಿಗಳನ್ನು ಮರೆತು ಈ ಪಂದ್ಯ ಆಡಲು ಸಿದ್ಧವಾದವರಿಗೆ, ಆಯೋಜಿಸಿದವರಿಗೆ ಮತ್ತು ಇದನ್ನು ಪ್ರೋತ್ಸಾಹಿಸಿದವರಿಗೆ ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ</strong>: ಪಾಕಿಸ್ತಾನ ಜತೆಗಿನ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕಾಗಿತ್ತು ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ ಅಸಾವರಿ ಜಗದಾಲೆ ಅವರು ಕರೆ ನೀಡಿದ್ದಾರೆ.</p>.<p>ಭಯೋತ್ಪಾದಕರು ಅವರ ತಂದೆ ಮತ್ತು ಕುಟುಂಬದ ಸ್ನೇಹಿತರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದ ಸಂದರ್ಭದಲ್ಲಿ ಅಸಾವರಿ ಅವರು ಬೈಸರನ್ ಕಣಿವೆಯಲ್ಲಿ ನೆಲಸಿದ್ದರು.</p>.<p>‘ಕೆಲವು ತಿಂಗಳುಗಳ ಹಿಂದೆ ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರು ಹತ್ಯೆಗೀಡಾಗಿದ್ದಾರೆ. ಇಷ್ಟೆಲ್ಲಾ ನಡೆದರೂ ಬಿಸಿಸಿಐ ಈ ಪಂದ್ಯಾವಳಿ ನಡೆಸಿದರೆ, ನಿಜಕ್ಕೂ ತಪ್ಪಾದ ನಡೆಯಾಗಿದೆ’ ಎಂದು ಹೇಳಿದ್ದಾರೆ.</p>.<p>‘ಪಹಲ್ಗಾಮ್ ಭಯೋತ್ಪಾದಕ ದಾಳಿ, ಸೈನಿಕರ ಸಮರ್ಪಣೆ, ವರ್ಷಗಳಿಂದ ನಡೆಸುತ್ತಿರುವ ಅಸಂಖ್ಯಾತ ದಾಳಿಗಳನ್ನು ಮರೆತು ಈ ಪಂದ್ಯ ಆಡಲು ಸಿದ್ಧವಾದವರಿಗೆ, ಆಯೋಜಿಸಿದವರಿಗೆ ಮತ್ತು ಇದನ್ನು ಪ್ರೋತ್ಸಾಹಿಸಿದವರಿಗೆ ನಾಚಿಕೆಯಾಗಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>