ಗುರುವಾರ, 4 ಡಿಸೆಂಬರ್ 2025
×
ADVERTISEMENT
ADVERTISEMENT

‘ಇಂಡಿಗೊ’ ಸಂಸ್ಥೆಯ 1232 ವಿಮಾನ ಹಾರಾಟ ಸ್ಥಗಿತ: ದೆಹಲಿ ಸೇರಿ ಹಲವೆಡೆ ಜನರ ಪರದಾಟ

ದೇಶೀಯ, ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನಗಳ ಹಾರಾಟ ಸ್ಥಗಿತ: ದೆಹಲಿ, ಮುಂಬೈ ಸೇರಿ ಹಲವೆಡೆ ವ್ಯತ್ಯಯ
Published : 4 ಡಿಸೆಂಬರ್ 2025, 18:00 IST
Last Updated : 4 ಡಿಸೆಂಬರ್ 2025, 18:00 IST
ಫಾಲೋ ಮಾಡಿ
Comments
ಪೀಟರ್‌ ಎಲ್ಬರ್ಸ್‌ ಇಂಡಿಗೊ ಸಿಇಒ
ಪೀಟರ್‌ ಎಲ್ಬರ್ಸ್‌ ಇಂಡಿಗೊ ಸಿಇಒ
ಕಾರ್ಯಾಚರಣೆಯನ್ನು ಸಹಜಸ್ಥಿತಿಗೆ ತರುವುದು ಸಮಯ ಪರಿಪಾಲನೆಯನ್ನು ಮತ್ತೆ ಹಳಿಗೆ ತರುವುದು ತಕ್ಷಣದ ಗುರಿಯಾಗಿದೆ
ಪೀಟರ್‌ ಎಲ್ಬರ್ಸ್‌ ಇಂಡಿಗೊ ಸಿಇಒ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರ ಆಕ್ರೋಶ
ಇಂಡಿಗೊ ಈಗ ಭೀಕರ ಸ್ಥಿತಿಯಲ್ಲಿದೆ. ಒಂದಾದ ನಂತರ ಒಂದರಂತೆ ವಿಮಾನಗಳ ಹಾರಾಟ ರದ್ದುಗೊಂಡಿದೆ. ಪ್ರಯಾಣಿಕರು ಸಂಸ್ಥೆಯ ಸಿಬ್ಬಂದಿ ಜೊತೆ ಜಗಳಕ್ಕೆ ಇಳಿದಿದ್ದಾರೆ. ಹಾರಾಟದ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಇಂದು ಪ್ರಯಾಣಿಸುವ ಉದ್ದೇಶವಿದ್ದರೆ, ನಿಲ್ದಾಣಕ್ಕೆ ಬರಬೇಡಿ
ಅರುಣ್‌ ಪ್ರಭುದೇಸಾಯಿ,ಅರ್ಮ್ಕೊಸ್‌ ಮಿಡಿಯಾ ಸಂಸ್ಥಾ‍ಪಕ
ಅರುಣ್‌ ಪ್ರಭುದೇಸಾಯಿ

ಅರುಣ್‌ ಪ್ರಭುದೇಸಾಯಿ

ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿ, ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ಪ್ರಯಾಣದರ, ಕಳಪೆ ಮೂಲಸೌಕರ್ಯ, ವಿಮಾನ ರದ್ದತಿಗಳು ಪುನರಾವರ್ತನೆಯಾಗುತ್ತಿವೆ. ವಿಮಾನಯಾನ ಸಚಿವರು ಈ ಕುರಿತು ಸ್ವಯಂಪ್ರೇರಿತರಾಗಿ ಹೇಳಿಕೆ ನೀಡಬಹುದು ಎಂದು ನಿರೀಕ್ಷಿಸುತ್ತೇನೆ
ಪ್ರಿಯಾಂಕ ಚತುರ್ವೇದಿ,ಶಿವಸೇನಾ (ಯುಬಿಟಿ) ರಾಜ್ಯಸಭಾ ಸಂಸದೆ
ಪ್ರಿಯಾಂಕ ಚತುರ್ವೇದಿ

ಪ್ರಿಯಾಂಕ ಚತುರ್ವೇದಿ

ಶೇಕಡ 60ರಷ್ಟು ಮಾರುಕಟ್ಟೆಯ ಪಾಲು ಜವಾಬ್ದಾರಿಯಿಂದ ಬರುತ್ತದೆ ಹೊರತು ನೆಪದಿಂದ ಅಲ್ಲ. ಇಂಡಿಗೊ ಸಂಸ್ಥೆಯು ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದೆ. ಈ ಕುರಿತು ಡಿಜಿಸಿಎ ಕಠಿಣವಾದ ಕ್ರಮ ಕೈಗೊಳ್ಳಬೇಕು
ಸತ್ಯಜಿತ್‌ ತಂಬೆ ಪಾಟೀಲ್, ಪಕ್ಷೇತರ ಶಾಸಕ ಮಹಾರಾಷ್ಟ್ರ
ಸತ್ಯಜಿತ್‌ ತಂಬೆ ಪಾಟೀಲ್

ಸತ್ಯಜಿತ್‌ ತಂಬೆ ಪಾಟೀಲ್

ಇಂಡಿಗೊ ವಿಮಾನವು ಪುಣೆಯ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಸೃಷ್ಟಿಸಿದೆ. ಪ್ರಯಾಣಿಕರಿಗೆ ಯಾವುದೇ ಮಾಹಿತಿ ಇಲ್ಲ. ಸಿಬ್ಬಂದಿ ಸ್ಪಂದಿಸುತ್ತಿಲ್ಲ ವಿಮಾನ ಹಾರಾಟದ ಬಗ್ಗೆ ಖಾತರಿಯಿಲ್ಲ
-ಡಾ. ಪ್ರಶಾಂತ್‌ ಪನ್ಸಾರೆ ಸಂಸ್ಥಾಪಕ ರುಬಿಸ್ಕೇಪ್‌.ಕಾಮ್‌
ಡಾ. ಪ್ರಶಾಂತ್‌ ಪನ್ಸಾರೆ

ಡಾ. ಪ್ರಶಾಂತ್‌ ಪನ್ಸಾರೆ

ಇಂಡಿಗೊ ಸಂಸ್ಥೆಯು ಪುಣೆ ವಿಮಾನನಿಲ್ದಾಣವನ್ನು ರೈಲು ನಿಲ್ದಾಣವಾಗಿ ಪರಿವರ್ತಿಸಿದೆ
-ರಿಶಿಕೇಷ್‌ ತಕ್ಸಲೆ ಕಂಟೆಟ್‌ ತಂತ್ರಜ್ಞ
ರಿಶಿಕೇಷ್‌ ತಕ್ಸಲೆ

ರಿಶಿಕೇಷ್‌ ತಕ್ಸಲೆ

ಹೈದರಾಬಾದ್‌ ವಿಮಾನ 8 ಗಂಟೆ ವಿಳಂಬ
ಬೆಂಗಳೂರಿನಿಂದ ಹೈದರಾಬಾದ್‌ಗೆ ಬೆಳಿಗ್ಗೆ 11.55 ತೆರಳಬೇಕಿದ್ದ ವಿಮಾನ ರಾತ್ರಿ 8 ಗಂಟೆಗೆ ಹೊರಡಲಿದೆ ಎಂದು ಪ್ರಯಾಣಿಕರಿಗೆ ಸಿಬ್ಬಂದಿ ತಿಳಿಸಿದರು. ಬೆಳಿಗ್ಗೆ 11.55ಕ್ಕೆ ಹೊರಡುವ ವಿಮಾನ ಹತ್ತಲು ಬೆಳಗ್ಗೆ 8 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಭದ್ರತಾ ತಪಾಸಣೆ ಮುಗಿಸಿಕೊಂಡು ಬೋರ್ಡಿಂಗ್ ಗೇಟ್‌ನಲ್ಲೇ ಕಾಯುವ ಅನಿವಾರ್ಯ ಉಂಟಾಯಿತು. ಇಷ್ಟು ಸುದೀರ್ಘವಾಗಿ ಕಾಯುವ ಬದಲಿಗೆ ರಸ್ತೆ ಮಾರ್ಗವಾಗಿ ತೆರಳಿದ್ದರೆ ಇಷ್ಟೊತ್ತಿಗಾಗಲೇ ಹೈದರಾಬಾದ್‌ಗೆ ತಲುಪುತ್ತಿದ್ದೆವು ಎಂದು ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT