<p><strong>ಕೋಲ್ಕತ್ತ:</strong>ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಬಿಜೆಪಿಯು ಪಶ್ಚಿಮ ಬಂಗಾಳದಾದ್ಯಂತ ನಡೆಸಲು ಉದ್ದೇಶಿಸಿರುವ ‘ರಥ ಯಾತ್ರೆ’ಗೆ ಚಾಲನೆ ನೀಡಲು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಕೋಲ್ಕತ್ತಾಗೆ ಆಗಮಿಸಿದ್ದಾರೆ.</p>.<p>ಶನಿವಾರ ನಿಗದಿಯಾಗಿದ್ದ ರೋಡ್ ಶೋ ಮತ್ತು ಸಾರ್ವಜನಿಕ ರ್ಯಾಲಿಗಳಿಗಾಗಿ ಅವರು ಕೋಲ್ಕತ್ತಾಗೆ ತಲುಪಿದ್ದರೂ, ‘ರಥ ಯಾತ್ರೆ’ ಅಭಿಯಾನಕ್ಕೆ ಸ್ಥಳೀಯ ಆಡಳಿತದಿಂದ ಅನುಮತಿ ದೊರೆಯುವ ಬಗ್ಗೆ ಗೊಂದಲಗಳಿವೆ.</p>.<p>ಏತನ್ಮದ್ಯೆ, ಅಭಿಯಾನದ ಸಲುವಾಗಿ ನಡ್ಡಾ ಭೇಟಿ ನೀಡಲಿರುವ ನದಿಯಾ ಜಿಲ್ಲೆಯಾದ್ಯಂತ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶನಿವಾರ ಮಧ್ಯಾಹ್ನದಿಂದ ಎರಡು ದಿನಗಳ ಕಾಲ ಬೈಕ್ರ್ಯಾಲಿ ನಡೆಸಲು ನಿರ್ಧರಿಸಿದೆ.ಇಂದು ಛಪ್ರಾದಲ್ಲಿ ಆರಂಭವಾಗಲಿರುವ ಟಿಎಂಸಿಯ ‘ಜನಸಮರ್ಥನ ಯಾತ್ರೆ’ ಅಭಿಯಾನವು ಎರಡು ದಿನಗಳ ಬಳಿಕ ಪಲಾಶಿಯಲ್ಲಿ ಮುಕ್ತಾಯವಾಗಲಿವೆ.</p>.<p>ಬಿಜೆಪಿಯ ರಥ ಯಾತ್ರೆಗೆ ಪೊಲೀಸರು ಅನುಮತಿ ನೀಡದಿದ್ದರೂ, ಟಿಎಂಸಿ ತನ್ನ ಬೈಕ್ ರ್ಯಾಲಿ ಮುಂದುವರಿಸಲು ನಿರ್ಧರಿಸಿದೆ. ಹೀಗಾಗಿ ಪೊಲೀಸರು ಅನುಮತಿ ನೀಡದಿರುವುದನ್ನು ಲೆಕ್ಕಿಸಿದೆ ತಾವು ಅಭಿಯಾನ ನಡೆಸುವುದಾಗಿ ಬಿಜೆಪಿ ಹೇಳಿತ್ತು.</p>.<p>ಶನಿವಾರ ಸಂಜೆ 4 ಗಂಟೆಗೆ ‘ಪರಿವರ್ತನಾ ಯಾತ್ರೆ’ಗೆ ಚಾಲನೆ ನೀಡಲು ನಡ್ಡಾ ಅವರು ನಬಾದ್ವೀಪ್ಗೆ ಭೇಟಿ ನೀಡಲಿದ್ದಾರೆ. ಬಳಿಕ ಕೃಷ್ಣನಗರದ ಧುಬುಲಿಯಾಗೆ ತೆರಳಿ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<p>ತಿಂಗಳುದ್ದಕ್ಕೂ ನಡೆಯುವ ರಥಯಾತ್ರೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಿಜೆಪಿಯ ಹಲವು ಹಿರಿಯ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.</p>.<p>ನದಿಯಾ ಜಿಲ್ಲಾಡಳಿತ ಶುಕ್ರವಾರ ಸಂಜೆಯವರೆಗೂ ಅನುಮತಿ ನಿರಾಕರಿಸಿದ್ದರಿಂದ ‘ರಥಯಾತ್ರೆ’ ಅಥವಾ ‘ಪರಿವರ್ತನಾ ಯಾತ್ರೆ’ ಆಯೋಜನೆ ಬಗ್ಗೆ ಗೊಂದಲಗಳಿದ್ದವು.</p>.<p>ಸದ್ಯ ಬಿಜೆಪಿ, ರಥಯಾತ್ರೆ ನಡೆಸಲು ತನಗೆ ಅನುಮತಿ ದೊರೆತಿದೆ ಎಂದು ಹೇಳಿಕೊಳ್ಳುತ್ತಿದೆಯಾದರೂ, ಜಿಲ್ಲಾ ಪೊಲೀಸರು ಅನುಮತಿ ನೀಡಿರುವುದು ಸಾರ್ವಜನಿಕ ಸಭೆಗೆ ಮಾತ್ರ. ರಥಯಾತ್ರೆಗಲ್ಲ ಎಂದು ತಿಳಿಸಿದ್ದಾರೆ.ಹೀಗಾಗಿ ಅನಿಶ್ಚಿತತೆ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong>ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಬಿಜೆಪಿಯು ಪಶ್ಚಿಮ ಬಂಗಾಳದಾದ್ಯಂತ ನಡೆಸಲು ಉದ್ದೇಶಿಸಿರುವ ‘ರಥ ಯಾತ್ರೆ’ಗೆ ಚಾಲನೆ ನೀಡಲು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಕೋಲ್ಕತ್ತಾಗೆ ಆಗಮಿಸಿದ್ದಾರೆ.</p>.<p>ಶನಿವಾರ ನಿಗದಿಯಾಗಿದ್ದ ರೋಡ್ ಶೋ ಮತ್ತು ಸಾರ್ವಜನಿಕ ರ್ಯಾಲಿಗಳಿಗಾಗಿ ಅವರು ಕೋಲ್ಕತ್ತಾಗೆ ತಲುಪಿದ್ದರೂ, ‘ರಥ ಯಾತ್ರೆ’ ಅಭಿಯಾನಕ್ಕೆ ಸ್ಥಳೀಯ ಆಡಳಿತದಿಂದ ಅನುಮತಿ ದೊರೆಯುವ ಬಗ್ಗೆ ಗೊಂದಲಗಳಿವೆ.</p>.<p>ಏತನ್ಮದ್ಯೆ, ಅಭಿಯಾನದ ಸಲುವಾಗಿ ನಡ್ಡಾ ಭೇಟಿ ನೀಡಲಿರುವ ನದಿಯಾ ಜಿಲ್ಲೆಯಾದ್ಯಂತ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶನಿವಾರ ಮಧ್ಯಾಹ್ನದಿಂದ ಎರಡು ದಿನಗಳ ಕಾಲ ಬೈಕ್ರ್ಯಾಲಿ ನಡೆಸಲು ನಿರ್ಧರಿಸಿದೆ.ಇಂದು ಛಪ್ರಾದಲ್ಲಿ ಆರಂಭವಾಗಲಿರುವ ಟಿಎಂಸಿಯ ‘ಜನಸಮರ್ಥನ ಯಾತ್ರೆ’ ಅಭಿಯಾನವು ಎರಡು ದಿನಗಳ ಬಳಿಕ ಪಲಾಶಿಯಲ್ಲಿ ಮುಕ್ತಾಯವಾಗಲಿವೆ.</p>.<p>ಬಿಜೆಪಿಯ ರಥ ಯಾತ್ರೆಗೆ ಪೊಲೀಸರು ಅನುಮತಿ ನೀಡದಿದ್ದರೂ, ಟಿಎಂಸಿ ತನ್ನ ಬೈಕ್ ರ್ಯಾಲಿ ಮುಂದುವರಿಸಲು ನಿರ್ಧರಿಸಿದೆ. ಹೀಗಾಗಿ ಪೊಲೀಸರು ಅನುಮತಿ ನೀಡದಿರುವುದನ್ನು ಲೆಕ್ಕಿಸಿದೆ ತಾವು ಅಭಿಯಾನ ನಡೆಸುವುದಾಗಿ ಬಿಜೆಪಿ ಹೇಳಿತ್ತು.</p>.<p>ಶನಿವಾರ ಸಂಜೆ 4 ಗಂಟೆಗೆ ‘ಪರಿವರ್ತನಾ ಯಾತ್ರೆ’ಗೆ ಚಾಲನೆ ನೀಡಲು ನಡ್ಡಾ ಅವರು ನಬಾದ್ವೀಪ್ಗೆ ಭೇಟಿ ನೀಡಲಿದ್ದಾರೆ. ಬಳಿಕ ಕೃಷ್ಣನಗರದ ಧುಬುಲಿಯಾಗೆ ತೆರಳಿ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<p>ತಿಂಗಳುದ್ದಕ್ಕೂ ನಡೆಯುವ ರಥಯಾತ್ರೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಿಜೆಪಿಯ ಹಲವು ಹಿರಿಯ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.</p>.<p>ನದಿಯಾ ಜಿಲ್ಲಾಡಳಿತ ಶುಕ್ರವಾರ ಸಂಜೆಯವರೆಗೂ ಅನುಮತಿ ನಿರಾಕರಿಸಿದ್ದರಿಂದ ‘ರಥಯಾತ್ರೆ’ ಅಥವಾ ‘ಪರಿವರ್ತನಾ ಯಾತ್ರೆ’ ಆಯೋಜನೆ ಬಗ್ಗೆ ಗೊಂದಲಗಳಿದ್ದವು.</p>.<p>ಸದ್ಯ ಬಿಜೆಪಿ, ರಥಯಾತ್ರೆ ನಡೆಸಲು ತನಗೆ ಅನುಮತಿ ದೊರೆತಿದೆ ಎಂದು ಹೇಳಿಕೊಳ್ಳುತ್ತಿದೆಯಾದರೂ, ಜಿಲ್ಲಾ ಪೊಲೀಸರು ಅನುಮತಿ ನೀಡಿರುವುದು ಸಾರ್ವಜನಿಕ ಸಭೆಗೆ ಮಾತ್ರ. ರಥಯಾತ್ರೆಗಲ್ಲ ಎಂದು ತಿಳಿಸಿದ್ದಾರೆ.ಹೀಗಾಗಿ ಅನಿಶ್ಚಿತತೆ ಮುಂದುವರಿದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>