<p><strong>ಕೊಚ್ಚಿ:</strong> ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ಮಲಯಾಳ ಚಿತ್ರರಂಗದ ನಟ ದಿಲೀಪ್ಗೆ ವಿಐಪಿ ದರ್ಶನ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್, ಪೊಲೀಸ್ ಇಲಾಖೆ ಹಾಗೂ ತಿರುವಾಂಕೂರ್ ದೇವಸ್ವಂ ಮಂಡಳಿಯನ್ನು (ಟಿಡಿಬಿ)ಗೆ ತರಾಟೆಗೆ ತೆಗೆದುಕೊಂಡಿದೆ.</p><p>ಡಿ. 5ರಂದು ದಿಲೀಪ್ಗೆ ವಿಐಪಿ ದರ್ಶನ ನೀಡಲು ಕಾರಣವೇನು ಹಾಗು ಇದಕ್ಕೆ ಸಂಬಂಧಿಸಿದಂತೆ ಆ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾ. ಅನಿಲ್ ಕೆ. ನರೇಂದ್ರನ್ ಹಾಗೂ ನ್ಯಾ. ಮುರಳಿ ಎಸ್. ಕೃಷ್ಣ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಂಡಳಿ ಹಾಗೂ ಪೊಲೀಸರಿಗೆ ನಿರ್ದೇಶಿಸಿತು.</p><p>‘ದೇವಾಲಯದ ಗರ್ಭಗುಡಿ ಎದುರು ಸೊಪಾನಂ ಬಳಿ ಮುಂದಿನ ಸಾಲಿನಲ್ಲಿ ದಿಲೀಪ್ ನಿಂತಿದ್ದಾರೆ. ಹರಿವರಾಸನಂ ಪೂರ್ಣಗೊಂಡು ಬಾಗಿಲು ಹಾಕುವವರೆಗೂ ನಿಲ್ಲಲು ನಟನಿಗೆ ಅವಕಾಶ ನೀಡಿದ್ದು ಹೇಗೆ? ಈ ವಿಶೇಷ ಸವಲತ್ತು ಪಡೆಯಲು ಅವರಿಗಿರುವ ಅರ್ಹತೆಗಳೇನು? ದೇವಾಲಯದಲ್ಲಿ ಏನು ನಡೆಯುತ್ತಿದೆ? ವಯಸ್ಸಾದವರು, ಮಕ್ಕಳನ್ನು ಒಳಗೊಂಡು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವಾಗ ಒಬ್ಬ ನಟನಿಗೆ ನೀಡಿದ ಈ ವಿಶೇಷ ಆತಿಥ್ಯ ಸಾಮಾನ್ಯ ಭಕ್ತರ ಹಕ್ಕುಗಳನ್ನು ಕಸಿದುಕೊಂಡಂತಾಗಲಿಲ್ಲವೇ’ ಎಂದು ಪೀಠ ಪ್ರಶ್ನಿಸಿತು.</p><p>‘ಸರತಿಸಾಲಿನಲ್ಲಿ ಗಂಟೆಗಟ್ಟಲೆ ನಿಂತರವಲ್ಲಿ ಕೆಲವರು ದರ್ಶನವಾಗದೇ ಮರಳಿದ್ದಾರೆ. ಇನ್ನೂ ಕೆಲವರು ಅನಿವಾರ್ಯವಾಗಿ ನಿಂತಿದ್ದರು. ಅವರೆಲ್ಲರೂ ಯಾರಿಗೆ ದೂರು ನೀಡಬೇಕು? ಅಷ್ಟು ದೀರ್ಘಕಾಲ ಸೋಪಾನಂ ಬಳಿ ನಿಲ್ಲಲು ವಿಶೇಷ ಸವಲತ್ತಿನೊಂದಿಗೆ ಅವಕಾಶ ನೀಡಿದ್ದು ಹೇಗೆ’ ಎಂದು ಪೀಠ ಖಾರವಾಗಿ ಪ್ರಶ್ನಿಸಿತು.</p><p>‘ಸುಪ್ರೀಂ ಕೋರ್ಟ್ ಒಳಗೊಂಡಂತೆ ಸಾಂವಿಧಾನಿಕ ಸ್ಥಾನದಲ್ಲಿರುವವರು ವಿಶೇಷ ಸವಲತ್ತು ಅರ್ಹರು ಎಂದು ನ್ಯಾಯಾಲಯದ ಆದೇಶವೇ ಇದೆ. ಹಾಗಿದ್ದರೆ ಡಿ. 5ರಂದು ನಡೆದ ಘಟನೆ ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಈ ಪ್ರಕರಣದಲ್ಲಿ ನಟನನ್ನೂ ಪ್ರತಿವಾದಿಯಾಗಿ ಸೇರಿಸಲಾಗುವುದು’ ಎಂದು ಪೀಠ ಹೇಳಿತು.</p><p>ಸುದ್ದಿಯೊಂದನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್, ವಾರ್ಷಿಕ ಮಂಡಳ ಮಕರವಿಳಕ್ಕು ದರ್ಶನ ಸಂದರ್ಭ ಇದಾಗಿರುವುದರಿಂದ, ಕೇರಳ ಹಾಗೂ ಪಕ್ಕದ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತಸಾಗರವೇ ದೇಗುಲದತ್ತ ಹರಿದುಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ:</strong> ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ಮಲಯಾಳ ಚಿತ್ರರಂಗದ ನಟ ದಿಲೀಪ್ಗೆ ವಿಐಪಿ ದರ್ಶನ ನೀಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಹೈಕೋರ್ಟ್, ಪೊಲೀಸ್ ಇಲಾಖೆ ಹಾಗೂ ತಿರುವಾಂಕೂರ್ ದೇವಸ್ವಂ ಮಂಡಳಿಯನ್ನು (ಟಿಡಿಬಿ)ಗೆ ತರಾಟೆಗೆ ತೆಗೆದುಕೊಂಡಿದೆ.</p><p>ಡಿ. 5ರಂದು ದಿಲೀಪ್ಗೆ ವಿಐಪಿ ದರ್ಶನ ನೀಡಲು ಕಾರಣವೇನು ಹಾಗು ಇದಕ್ಕೆ ಸಂಬಂಧಿಸಿದಂತೆ ಆ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾ. ಅನಿಲ್ ಕೆ. ನರೇಂದ್ರನ್ ಹಾಗೂ ನ್ಯಾ. ಮುರಳಿ ಎಸ್. ಕೃಷ್ಣ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಂಡಳಿ ಹಾಗೂ ಪೊಲೀಸರಿಗೆ ನಿರ್ದೇಶಿಸಿತು.</p><p>‘ದೇವಾಲಯದ ಗರ್ಭಗುಡಿ ಎದುರು ಸೊಪಾನಂ ಬಳಿ ಮುಂದಿನ ಸಾಲಿನಲ್ಲಿ ದಿಲೀಪ್ ನಿಂತಿದ್ದಾರೆ. ಹರಿವರಾಸನಂ ಪೂರ್ಣಗೊಂಡು ಬಾಗಿಲು ಹಾಕುವವರೆಗೂ ನಿಲ್ಲಲು ನಟನಿಗೆ ಅವಕಾಶ ನೀಡಿದ್ದು ಹೇಗೆ? ಈ ವಿಶೇಷ ಸವಲತ್ತು ಪಡೆಯಲು ಅವರಿಗಿರುವ ಅರ್ಹತೆಗಳೇನು? ದೇವಾಲಯದಲ್ಲಿ ಏನು ನಡೆಯುತ್ತಿದೆ? ವಯಸ್ಸಾದವರು, ಮಕ್ಕಳನ್ನು ಒಳಗೊಂಡು ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವಾಗ ಒಬ್ಬ ನಟನಿಗೆ ನೀಡಿದ ಈ ವಿಶೇಷ ಆತಿಥ್ಯ ಸಾಮಾನ್ಯ ಭಕ್ತರ ಹಕ್ಕುಗಳನ್ನು ಕಸಿದುಕೊಂಡಂತಾಗಲಿಲ್ಲವೇ’ ಎಂದು ಪೀಠ ಪ್ರಶ್ನಿಸಿತು.</p><p>‘ಸರತಿಸಾಲಿನಲ್ಲಿ ಗಂಟೆಗಟ್ಟಲೆ ನಿಂತರವಲ್ಲಿ ಕೆಲವರು ದರ್ಶನವಾಗದೇ ಮರಳಿದ್ದಾರೆ. ಇನ್ನೂ ಕೆಲವರು ಅನಿವಾರ್ಯವಾಗಿ ನಿಂತಿದ್ದರು. ಅವರೆಲ್ಲರೂ ಯಾರಿಗೆ ದೂರು ನೀಡಬೇಕು? ಅಷ್ಟು ದೀರ್ಘಕಾಲ ಸೋಪಾನಂ ಬಳಿ ನಿಲ್ಲಲು ವಿಶೇಷ ಸವಲತ್ತಿನೊಂದಿಗೆ ಅವಕಾಶ ನೀಡಿದ್ದು ಹೇಗೆ’ ಎಂದು ಪೀಠ ಖಾರವಾಗಿ ಪ್ರಶ್ನಿಸಿತು.</p><p>‘ಸುಪ್ರೀಂ ಕೋರ್ಟ್ ಒಳಗೊಂಡಂತೆ ಸಾಂವಿಧಾನಿಕ ಸ್ಥಾನದಲ್ಲಿರುವವರು ವಿಶೇಷ ಸವಲತ್ತು ಅರ್ಹರು ಎಂದು ನ್ಯಾಯಾಲಯದ ಆದೇಶವೇ ಇದೆ. ಹಾಗಿದ್ದರೆ ಡಿ. 5ರಂದು ನಡೆದ ಘಟನೆ ಸ್ಪಷ್ಟವಾಗಿ ಕಾನೂನು ಉಲ್ಲಂಘನೆಯಾಗಿದೆ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಈ ಪ್ರಕರಣದಲ್ಲಿ ನಟನನ್ನೂ ಪ್ರತಿವಾದಿಯಾಗಿ ಸೇರಿಸಲಾಗುವುದು’ ಎಂದು ಪೀಠ ಹೇಳಿತು.</p><p>ಸುದ್ದಿಯೊಂದನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್, ವಾರ್ಷಿಕ ಮಂಡಳ ಮಕರವಿಳಕ್ಕು ದರ್ಶನ ಸಂದರ್ಭ ಇದಾಗಿರುವುದರಿಂದ, ಕೇರಳ ಹಾಗೂ ಪಕ್ಕದ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತಸಾಗರವೇ ದೇಗುಲದತ್ತ ಹರಿದುಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>