<p><strong>ತಿರುವನಂತಪುರಂ:</strong> ರಾಮ ಜನ್ಮಭೂಮಿ - ಬಾಬರಿ ಮಸೀದಿ ಕುರಿತಂತೆ ಸುಪ್ರೀಂ ತೀರ್ಪು ಪ್ರಕಟಗೊಂಡು ಕೋಮು ಸಾಮರಸ್ಯ ಕಾಪಾಡಲುಇಡೀ ದೇಶದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದರೆ, ಇತ್ತ ಕೇರಳದ ಗ್ರಾಮವೊಂದು ಕೋಮು ಸಾಮರಸ್ಯದ ಸಂದೇಶ ರವಾನಿಸಿದೆ.</p>.<p>ಉತ್ತರ ಕೇರಳದ ಕೋಯಿಕೋಡ್ ಜಿಲ್ಲೆಯ ಗ್ರಾಮೀಣ ಪ್ರದೇಶದ ಪೆರಂಬು ಸಮೀಪದ ಪಲೇರಿಯಲ್ಲಿರುವ ಮಸೀದಿ ಹತ್ತಿರದಲ್ಲಿ ವಾಸಿಸುತ್ತಿದ್ದ ಹಿಂದು ಸಮುದಾಯದ ಯುವತಿಯ ವಿವಾಹ ಪರಿಗಣಿಸಿ ಈದ್ ಮಿಲಾದ್ ಆಚರಣೆಯನ್ನೇ ಭಾನುವಾರ ಮುಂದೂಡಿ ಮಾದರಿಯಾಗಿದೆ.</p>.<p>ದಿ. ನಾರಾಯಣನ್ ನಂಬಿಯಾರ್ ಮತ್ತು ಇಂದಿರಾ ಎಂಬುವರ ಪುತ್ರಿ ಪ್ರತ್ಯೂಷಾ ತನ್ನ ಪತಿ ವಿನು ಪ್ರಸಾದ್ ಅವರೊಂದಿಗೆ ಮಸೀದಿಗೆ ತೆರಳಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.</p>.<p>ಪೆಮಂಬ್ರದ ಇಡಿವೆಟ್ಟಿ ಜುಮಾ ಮಸೀದಿಯ ಅಧಿಕಾರಿಗಳು ನೆರೆಮನೆ ಯುವತಿಯ ಮದುವೆ ಇರುವುದನ್ನು ತಿಳಿದ ಕೂಡಲೇ, ಮಹಲ್ ಸಮಿತಿ ಅಧ್ಯಕ್ಷ ಮೊಯಿದು ಹಾಜಿಯನ್ನು ಭೇಟಿ ಮಾಡಿದ್ದಾರೆ ಮತ್ತು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನಾಚರಣೆಯನ್ನು ನವೆಂಬರ್ 10ರಿಂದ 17ಕ್ಕೆ ಮುಂದೂಡಲು ನಿರ್ಧರಿದ್ದಾರೆ.</p>.<p>ಮಹಲ್ ಸಮಿತಿಯ ಕಾರ್ಯದರ್ಶಿ ಎನ್.ಸಿ. ಅಬ್ದುರಹಮನ್ ಮಾತನಾಡಿ, ಈ ಪ್ರದೇಶದಲ್ಲಿರುವ ಕೋಮು ಸಾಮರಸ್ಯವನ್ನು ಕಾಪಾಡಲು ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಈದ್ ಮಿಲಾದ್ ಆಚರಣೆಯು ಮಸೀದಿಯಲ್ಲಿ ಮುಂಜಾನೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ನಡೆಯುತ್ತದೆ. ಈ ವೇಳೆ ಧ್ವನಿವರ್ಧಕಗಳ ಬಳಕೆ ಮತ್ತು ಆಹಾರವನ್ನು ಸಹ ನೀಡಲಾಗುತ್ತದೆ. ಇದರಿಂದಾಗಿ ಮದುವೆಗೆ ತೊಂದರೆ ಉಂಟಾಗುತ್ತಿತ್ತು. ಹಾಗಾಗಿ ಮುಂದಿನ ಭಾನುವಾರ ಆಚರಣೆಯನ್ನಿಟ್ಟುಕೊಳ್ಳಲು ನಾವು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ.</p>.<p>ಪ್ರತ್ಯೂಷಾ ಮದುವೆಯಲ್ಲಿ ಸಮಿತಿ ಸದಸ್ಯರು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರಂ:</strong> ರಾಮ ಜನ್ಮಭೂಮಿ - ಬಾಬರಿ ಮಸೀದಿ ಕುರಿತಂತೆ ಸುಪ್ರೀಂ ತೀರ್ಪು ಪ್ರಕಟಗೊಂಡು ಕೋಮು ಸಾಮರಸ್ಯ ಕಾಪಾಡಲುಇಡೀ ದೇಶದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದರೆ, ಇತ್ತ ಕೇರಳದ ಗ್ರಾಮವೊಂದು ಕೋಮು ಸಾಮರಸ್ಯದ ಸಂದೇಶ ರವಾನಿಸಿದೆ.</p>.<p>ಉತ್ತರ ಕೇರಳದ ಕೋಯಿಕೋಡ್ ಜಿಲ್ಲೆಯ ಗ್ರಾಮೀಣ ಪ್ರದೇಶದ ಪೆರಂಬು ಸಮೀಪದ ಪಲೇರಿಯಲ್ಲಿರುವ ಮಸೀದಿ ಹತ್ತಿರದಲ್ಲಿ ವಾಸಿಸುತ್ತಿದ್ದ ಹಿಂದು ಸಮುದಾಯದ ಯುವತಿಯ ವಿವಾಹ ಪರಿಗಣಿಸಿ ಈದ್ ಮಿಲಾದ್ ಆಚರಣೆಯನ್ನೇ ಭಾನುವಾರ ಮುಂದೂಡಿ ಮಾದರಿಯಾಗಿದೆ.</p>.<p>ದಿ. ನಾರಾಯಣನ್ ನಂಬಿಯಾರ್ ಮತ್ತು ಇಂದಿರಾ ಎಂಬುವರ ಪುತ್ರಿ ಪ್ರತ್ಯೂಷಾ ತನ್ನ ಪತಿ ವಿನು ಪ್ರಸಾದ್ ಅವರೊಂದಿಗೆ ಮಸೀದಿಗೆ ತೆರಳಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.</p>.<p>ಪೆಮಂಬ್ರದ ಇಡಿವೆಟ್ಟಿ ಜುಮಾ ಮಸೀದಿಯ ಅಧಿಕಾರಿಗಳು ನೆರೆಮನೆ ಯುವತಿಯ ಮದುವೆ ಇರುವುದನ್ನು ತಿಳಿದ ಕೂಡಲೇ, ಮಹಲ್ ಸಮಿತಿ ಅಧ್ಯಕ್ಷ ಮೊಯಿದು ಹಾಜಿಯನ್ನು ಭೇಟಿ ಮಾಡಿದ್ದಾರೆ ಮತ್ತು ಪ್ರವಾದಿ ಮೊಹಮ್ಮದ್ ಅವರ ಜನ್ಮದಿನಾಚರಣೆಯನ್ನು ನವೆಂಬರ್ 10ರಿಂದ 17ಕ್ಕೆ ಮುಂದೂಡಲು ನಿರ್ಧರಿದ್ದಾರೆ.</p>.<p>ಮಹಲ್ ಸಮಿತಿಯ ಕಾರ್ಯದರ್ಶಿ ಎನ್.ಸಿ. ಅಬ್ದುರಹಮನ್ ಮಾತನಾಡಿ, ಈ ಪ್ರದೇಶದಲ್ಲಿರುವ ಕೋಮು ಸಾಮರಸ್ಯವನ್ನು ಕಾಪಾಡಲು ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಈದ್ ಮಿಲಾದ್ ಆಚರಣೆಯು ಮಸೀದಿಯಲ್ಲಿ ಮುಂಜಾನೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ನಡೆಯುತ್ತದೆ. ಈ ವೇಳೆ ಧ್ವನಿವರ್ಧಕಗಳ ಬಳಕೆ ಮತ್ತು ಆಹಾರವನ್ನು ಸಹ ನೀಡಲಾಗುತ್ತದೆ. ಇದರಿಂದಾಗಿ ಮದುವೆಗೆ ತೊಂದರೆ ಉಂಟಾಗುತ್ತಿತ್ತು. ಹಾಗಾಗಿ ಮುಂದಿನ ಭಾನುವಾರ ಆಚರಣೆಯನ್ನಿಟ್ಟುಕೊಳ್ಳಲು ನಾವು ನಿರ್ಧರಿಸಿದೆವು ಎಂದು ತಿಳಿಸಿದ್ದಾರೆ.</p>.<p>ಪ್ರತ್ಯೂಷಾ ಮದುವೆಯಲ್ಲಿ ಸಮಿತಿ ಸದಸ್ಯರು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>