<p><strong>ಮುಂಬೈ:</strong> ಜೈನ ಸಮುದಾಯದವರು ಸಾಂಪ್ರದಾಯಕವಾಗಿ ಪಾರಿವಾಳಗಳಿಗೆ ಆಹಾರ ನೀಡುತ್ತಿದ್ದ ದಾದರ್ ಖಬೂತರ್ಖಾನಾ ಮೈದಾನವನ್ನು ಮುಚ್ಚಿ ಮುಂಬೈ ಪಾಲಿಕೆಯು ಆದೇಶ ಹೊರಡಿಸಿದೆ. </p>.<p>ಪಾಲಿಕೆಯ ನಿರ್ಧಾರವನ್ನು ವಿರೋಧಿಸಿ ಜೈನ ಗುರು ನಿಲೇಶ್ಚಂದ್ರ ವಿಜಯ್ ಅವರು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕೇಂದ್ರ ಕಚೇರಿ ಬಳಿಯ ಅಜಾದ್ ಮೈದಾನದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಉಪವಾಸವನ್ನು ಆರಂಭಿಸಿದರು. </p>.<p>ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾಲಿಕೆಯು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೂ ಉಪವಾಸ ಪ್ರತಿಭಟನೆ ಮುಂದುವರಿಸುತ್ತೇನೆ’ ಎಂದು ಹೇಳಿದರು. </p>.<p>‘ದಾದರ್ ಖಬೂತರ್ಖಾನಾ ಬದಲಾಗಿ ಉಳಿದ ನಾಲ್ಕು ಕಡೆ ಇರುವ ಖಬೂತರ್ಖಾನಾಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಬಹುದಾಗಿದ್ದು, ಇದಕ್ಕೆ ಮುಂಜಾನೆ 7ರಿಂದ 9 ಗಂಟೆವರೆಗೆ ಮಾತ್ರ ಅವಕಾಶ ಇರುತ್ತದೆ. ಖಬೂತರ್ಖಾನಾಗಳನ್ನು ನಿರ್ವಹಿಸುವ ಜವಾಬ್ದಾರಿಯು ಸರ್ಕಾರೇತರ ಸಂಸ್ಥೆಗಳದ್ದಾಗಿರುತ್ತದೆ. ಈಗ ಮುಚ್ಚಲಾಗಿರುವ ಖಬೂತರ್ಖಾನಾವನ್ನು ಮತ್ತೆ ತೆರೆಯಲಾಗುವುದಿಲ್ಲ’ ಎಂದು ಬಿಎಂಸಿ ಇತ್ತೀಚೆಗೆ ಪ್ರಕಟಿಸಿದೆ. </p>.<p>‘ಅಜಾದ್ ಮೈದಾನ ತಲುಪಿದಾಗಿನಿಂದ ನೀರು ಕುಡಿಯುವುದನ್ನು ನಾನು ನಿಲ್ಲಿಸಿದ್ದೇನೆ. ದಾದರ್ ಖಬೂತರ್ಖಾನಾಗೆ ಪರ್ಯಾಯವಾಗಿ ನೀಡಿರುವ ಸ್ಥಳಗಳು 4, 5 ಹಾಗೂ 9 ಕಿ.ಮೀ ದೂರದಲ್ಲಿವೆ. ಅಷ್ಟು ದೂರ ಪಾರಿವಾಳಗಳು ಹಾರುತ್ತವೆಯೇ? ದಾದರ್ ಖಬೂತರ್ಖಾನಾದಿಂದ 2 ಕಿ.ಮೀ ವ್ಯಾಪ್ತಿಯೊಳಗೆ ಪರ್ಯಾಯ ಸ್ಥಳ ನೀಡಬೇಕಿತ್ತು. ಇಲ್ಲವೇ ಅದನ್ನೇ ಮತ್ತೆ ತೆರೆಯಬೇಕು’ ಎಂದು ನಿಲೇಶ್ಚಂದ್ರ ವಿಜಯ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಜೈನ ಸಮುದಾಯದವರು ಸಾಂಪ್ರದಾಯಕವಾಗಿ ಪಾರಿವಾಳಗಳಿಗೆ ಆಹಾರ ನೀಡುತ್ತಿದ್ದ ದಾದರ್ ಖಬೂತರ್ಖಾನಾ ಮೈದಾನವನ್ನು ಮುಚ್ಚಿ ಮುಂಬೈ ಪಾಲಿಕೆಯು ಆದೇಶ ಹೊರಡಿಸಿದೆ. </p>.<p>ಪಾಲಿಕೆಯ ನಿರ್ಧಾರವನ್ನು ವಿರೋಧಿಸಿ ಜೈನ ಗುರು ನಿಲೇಶ್ಚಂದ್ರ ವಿಜಯ್ ಅವರು ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕೇಂದ್ರ ಕಚೇರಿ ಬಳಿಯ ಅಜಾದ್ ಮೈದಾನದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಉಪವಾಸವನ್ನು ಆರಂಭಿಸಿದರು. </p>.<p>ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾಲಿಕೆಯು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೂ ಉಪವಾಸ ಪ್ರತಿಭಟನೆ ಮುಂದುವರಿಸುತ್ತೇನೆ’ ಎಂದು ಹೇಳಿದರು. </p>.<p>‘ದಾದರ್ ಖಬೂತರ್ಖಾನಾ ಬದಲಾಗಿ ಉಳಿದ ನಾಲ್ಕು ಕಡೆ ಇರುವ ಖಬೂತರ್ಖಾನಾಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡಬಹುದಾಗಿದ್ದು, ಇದಕ್ಕೆ ಮುಂಜಾನೆ 7ರಿಂದ 9 ಗಂಟೆವರೆಗೆ ಮಾತ್ರ ಅವಕಾಶ ಇರುತ್ತದೆ. ಖಬೂತರ್ಖಾನಾಗಳನ್ನು ನಿರ್ವಹಿಸುವ ಜವಾಬ್ದಾರಿಯು ಸರ್ಕಾರೇತರ ಸಂಸ್ಥೆಗಳದ್ದಾಗಿರುತ್ತದೆ. ಈಗ ಮುಚ್ಚಲಾಗಿರುವ ಖಬೂತರ್ಖಾನಾವನ್ನು ಮತ್ತೆ ತೆರೆಯಲಾಗುವುದಿಲ್ಲ’ ಎಂದು ಬಿಎಂಸಿ ಇತ್ತೀಚೆಗೆ ಪ್ರಕಟಿಸಿದೆ. </p>.<p>‘ಅಜಾದ್ ಮೈದಾನ ತಲುಪಿದಾಗಿನಿಂದ ನೀರು ಕುಡಿಯುವುದನ್ನು ನಾನು ನಿಲ್ಲಿಸಿದ್ದೇನೆ. ದಾದರ್ ಖಬೂತರ್ಖಾನಾಗೆ ಪರ್ಯಾಯವಾಗಿ ನೀಡಿರುವ ಸ್ಥಳಗಳು 4, 5 ಹಾಗೂ 9 ಕಿ.ಮೀ ದೂರದಲ್ಲಿವೆ. ಅಷ್ಟು ದೂರ ಪಾರಿವಾಳಗಳು ಹಾರುತ್ತವೆಯೇ? ದಾದರ್ ಖಬೂತರ್ಖಾನಾದಿಂದ 2 ಕಿ.ಮೀ ವ್ಯಾಪ್ತಿಯೊಳಗೆ ಪರ್ಯಾಯ ಸ್ಥಳ ನೀಡಬೇಕಿತ್ತು. ಇಲ್ಲವೇ ಅದನ್ನೇ ಮತ್ತೆ ತೆರೆಯಬೇಕು’ ಎಂದು ನಿಲೇಶ್ಚಂದ್ರ ವಿಜಯ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>