<p><strong>ನವದೆಹಲಿ:</strong> ‘ಪಂಜಾಬ್ನೊಳಗೆ ಖಾಲಿಸ್ತಾನ ಎಂಬ ಸ್ವತಂತ್ರ ರಾಷ್ಟ್ರ ಸ್ಥಾಪಿಸಲು ಖಾಲಿಸ್ತಾನಿ ಉಗ್ರರು 1980ರ ದಶಕದ ಮಧ್ಯಭಾಗದಿಂದಲೂ ಪ್ರಯತ್ನಿಸುತ್ತಿದ್ದಾರೆ’ ಎಂದು ಕೆನಡಾದ ಗುಪ್ತಚರ ಸಂಸ್ಥೆಯ ವರದಿ ತಿಳಿಸಿದೆ. </p>.<p>ಖಾಲಿಸ್ತಾನಿ ಉಗ್ರಗಾಮಿಗಳ ಒಂದು ಸಣ್ಣ ಗುಂಪು ದೇಣಿಗೆ ಸಂಗ್ರಹ ಮತ್ತು ಭಾರತದಲ್ಲಿ ಹಿಂಸಾ ಕೃತ್ಯಕ್ಕೆ ಯೋಜನೆ ರೂಪಿಸಲು ಕೆನಡಾವನ್ನು ನೆಲೆಯಾಗಿ ಬಳಸುವುದನ್ನು ಮುಂದುವರಿಸಿದೆ ಎಂದು ‘ದಿ ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸಸ್’ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. </p>.<p class="bodytext">ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಮಾತುಕತೆ ನಡೆಸಿರುವ ಬೆನ್ನಲ್ಲೇ ಈ ವರದಿ ಬಿಡುಗಡೆಯಾಗಿದೆ.</p>.<p class="bodytext">ಕೆನಡಾದಲ್ಲಿ ನೆಲಸಿರುವ ಖಾಲಿಸ್ತಾನಿ ಉಗ್ರರು ನಿರಂತರವಾಗಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕೆನಡಾ ಮತ್ತು ಕೆನಡಾದ ಪ್ರಜೆಗಳ ಹಿತಾಸಕ್ತಿಗಳಿಗೆ ಬೆದರಿಕೆಯಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ. ‘ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಹಸ್ತಕ್ಷೇಪ’ವನ್ನು ವರದಿಯಲ್ಲಿ ಟೀಕಿಸಲಾಗಿದೆ. </p>.<p>‘ನಿರ್ದಿಷ್ಟವಾಗಿ ಹೇಳುವುದಾದರೆ, ಖಾಲಿಸ್ತಾನಿ ಉಗ್ರರ ಚಟುವಟಿಕೆಗಳು ಕೆನಡಾದಲ್ಲಿ ಭಾರತದ ಹಸ್ತಕ್ಷೇಪಕ್ಕೆ ಹಾದಿಯೊದಗಿಸುತ್ತಿದೆ. ಭಾರತದ ಅಧಿಕಾರಿಗಳು ಮತ್ತು ಕೆನಡಾದಲ್ಲಿರುವ ಅವರ ಏಜೆಂಟ್ಗಳು ಕೆನಡಾದ ಸಮುದಾಯಗಳು ಹಾಗೂ ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಹಲವು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ’ ಎಂದು ಆರೋಪಿಸಿದೆ.</p>.<p>‘ಇಂತಹ ಚಟುವಟಿಕೆಗಳು ಮೋಸಗೊಳಿಸುವ ರೀತಿಯಲ್ಲಿ, ರಹಸ್ಯವಾಗಿ ಅಥವಾ ಬೆದರಿಕೆಯೊಡ್ಡುವಂತಿದ್ದರೆ, ಅವುಗಳನ್ನು ವಿದೇಶಿ ಹಸ್ತಕ್ಷೇಪವೆಂದು ಪರಿಗಣಿಸಲಾಗುತ್ತದೆ’ ಎಂದು ತಿಳಿಸಿದೆ.</p>.<p>ಖಾಲಿಸ್ತಾನಿ ಪರ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಿರ್ಭೀತಿಯಿಂದ ನಡೆಸುತ್ತಿದ್ದಾರೆ ಎಂಬ ಭಾರತದ ಆರೋಪವನ್ನು ವರದಿಯು ಸಮರ್ಥಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಪಂಜಾಬ್ನೊಳಗೆ ಖಾಲಿಸ್ತಾನ ಎಂಬ ಸ್ವತಂತ್ರ ರಾಷ್ಟ್ರ ಸ್ಥಾಪಿಸಲು ಖಾಲಿಸ್ತಾನಿ ಉಗ್ರರು 1980ರ ದಶಕದ ಮಧ್ಯಭಾಗದಿಂದಲೂ ಪ್ರಯತ್ನಿಸುತ್ತಿದ್ದಾರೆ’ ಎಂದು ಕೆನಡಾದ ಗುಪ್ತಚರ ಸಂಸ್ಥೆಯ ವರದಿ ತಿಳಿಸಿದೆ. </p>.<p>ಖಾಲಿಸ್ತಾನಿ ಉಗ್ರಗಾಮಿಗಳ ಒಂದು ಸಣ್ಣ ಗುಂಪು ದೇಣಿಗೆ ಸಂಗ್ರಹ ಮತ್ತು ಭಾರತದಲ್ಲಿ ಹಿಂಸಾ ಕೃತ್ಯಕ್ಕೆ ಯೋಜನೆ ರೂಪಿಸಲು ಕೆನಡಾವನ್ನು ನೆಲೆಯಾಗಿ ಬಳಸುವುದನ್ನು ಮುಂದುವರಿಸಿದೆ ಎಂದು ‘ದಿ ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸಸ್’ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ. </p>.<p class="bodytext">ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ಮಾತುಕತೆ ನಡೆಸಿರುವ ಬೆನ್ನಲ್ಲೇ ಈ ವರದಿ ಬಿಡುಗಡೆಯಾಗಿದೆ.</p>.<p class="bodytext">ಕೆನಡಾದಲ್ಲಿ ನೆಲಸಿರುವ ಖಾಲಿಸ್ತಾನಿ ಉಗ್ರರು ನಿರಂತರವಾಗಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದು ಕೆನಡಾ ಮತ್ತು ಕೆನಡಾದ ಪ್ರಜೆಗಳ ಹಿತಾಸಕ್ತಿಗಳಿಗೆ ಬೆದರಿಕೆಯಾಗಿ ಪರಿಣಮಿಸಿದೆ ಎಂದು ವರದಿ ಹೇಳಿದೆ. ‘ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಹಸ್ತಕ್ಷೇಪ’ವನ್ನು ವರದಿಯಲ್ಲಿ ಟೀಕಿಸಲಾಗಿದೆ. </p>.<p>‘ನಿರ್ದಿಷ್ಟವಾಗಿ ಹೇಳುವುದಾದರೆ, ಖಾಲಿಸ್ತಾನಿ ಉಗ್ರರ ಚಟುವಟಿಕೆಗಳು ಕೆನಡಾದಲ್ಲಿ ಭಾರತದ ಹಸ್ತಕ್ಷೇಪಕ್ಕೆ ಹಾದಿಯೊದಗಿಸುತ್ತಿದೆ. ಭಾರತದ ಅಧಿಕಾರಿಗಳು ಮತ್ತು ಕೆನಡಾದಲ್ಲಿರುವ ಅವರ ಏಜೆಂಟ್ಗಳು ಕೆನಡಾದ ಸಮುದಾಯಗಳು ಹಾಗೂ ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಹಲವು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ’ ಎಂದು ಆರೋಪಿಸಿದೆ.</p>.<p>‘ಇಂತಹ ಚಟುವಟಿಕೆಗಳು ಮೋಸಗೊಳಿಸುವ ರೀತಿಯಲ್ಲಿ, ರಹಸ್ಯವಾಗಿ ಅಥವಾ ಬೆದರಿಕೆಯೊಡ್ಡುವಂತಿದ್ದರೆ, ಅವುಗಳನ್ನು ವಿದೇಶಿ ಹಸ್ತಕ್ಷೇಪವೆಂದು ಪರಿಗಣಿಸಲಾಗುತ್ತದೆ’ ಎಂದು ತಿಳಿಸಿದೆ.</p>.<p>ಖಾಲಿಸ್ತಾನಿ ಪರ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ನಿರ್ಭೀತಿಯಿಂದ ನಡೆಸುತ್ತಿದ್ದಾರೆ ಎಂಬ ಭಾರತದ ಆರೋಪವನ್ನು ವರದಿಯು ಸಮರ್ಥಿಸಿಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>