<p><strong>ಲಖನೌ:</strong> ‘ಸದಾ ಕುತೂಹಲದಿಂದ ಇರಿ, ಕಲಿಯುವುದನ್ನು ನಿಲ್ಲಿಸಬೇಡಿ, ಯಾವುದೇ ಅಭಿಪ್ರಾಯವಿರಲಿ ಅದನ್ನು ಪ್ರಶ್ನಿಸಿ– ವಕೀಲಿಕೆ ಬಗ್ಗೆ ತೀವ್ರ ಹಂಬಲ ಇರುವವರನ್ನೂ ಮತ್ತು ಇದೊಂದು ಜೀವನೋಪಾಯ ಎಂದುಕೊಂಡವರನ್ನೂ ಈ ಗುಣಗಳೇ ಪ್ರತ್ಯೇಕಿಸುತ್ತವೆ’ ಎಂದು ಸುಪ್ರೀಂ ಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾ. ಸೂರ್ಯ ಕಾಂತ್ ಅವರು ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಡಾ. ರಾಮ ಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರು ಭಾನುವಾರ ಮಾತನಾಡಿದರು. ಸಹೋದರರ ಆಸ್ತಿ ವಿವಾದ ಸಂಬಂಧದ ಪ್ರಕರಣವೊಂದರಿಂದ ತಾವು ಕಲಿತ ಪಾಠವೊಂದರ ಬಗ್ಗೆ ವಿದ್ಯಾರ್ಥಿಗಳೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು.</p>.<p>‘ನನಗೆ ನನ್ನ ನಿರ್ಧಾರದ ಬಗ್ಗೆ ಅತೀವ ನಂಬಿಕೆ ಇತ್ತು. ಅಂತಾದರೂ ನಾನು ನನ್ನದೇ ತೀರ್ಪಿನ ಕರಡನ್ನು ಮತ್ತೊಮ್ಮೆ ಪರಿಶೀಲಿಸಲು ಹಿಂಜರಿಯಲಿಲ್ಲ. ಮುಂದೇನು ಎನ್ನುವುದು ತೋಚದಿದ್ದಾಗ, ವಿಚಾರಣೆ ಸಂದರ್ಭದಲ್ಲಿ ನಾನು ಕೆಲವು ಗಂಭೀರ ಪ್ರಶ್ನೆಗಳನ್ನು ಕಡೆಗಣಿಸಿದ್ದೆ. ಈ ಸೋಲೇ ನನಗೆ ಪಾಠವಾಯಿತು. ಎಲ್ಲವನ್ನೂ ಮತ್ತೊಮ್ಮೆ ಹೊಸದಾಗಿ ಆರಂಭಿಸಿದೆ. ಇದೇ ನನಗೆ ಜೀವನಪಾಠವಾಯಿತು’ ಎಂದರು.</p>.ಮುಂದಿನ ಸಿಜೆಐ ಆಗಿ ಸೂರ್ಯ ಕಾಂತ್ ನೇಮಕ: ಅವರು ನೀಡಿದ ಪ್ರಮುಖ ತೀರ್ಪುಗಳು ಇಂತಿವೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ‘ಸದಾ ಕುತೂಹಲದಿಂದ ಇರಿ, ಕಲಿಯುವುದನ್ನು ನಿಲ್ಲಿಸಬೇಡಿ, ಯಾವುದೇ ಅಭಿಪ್ರಾಯವಿರಲಿ ಅದನ್ನು ಪ್ರಶ್ನಿಸಿ– ವಕೀಲಿಕೆ ಬಗ್ಗೆ ತೀವ್ರ ಹಂಬಲ ಇರುವವರನ್ನೂ ಮತ್ತು ಇದೊಂದು ಜೀವನೋಪಾಯ ಎಂದುಕೊಂಡವರನ್ನೂ ಈ ಗುಣಗಳೇ ಪ್ರತ್ಯೇಕಿಸುತ್ತವೆ’ ಎಂದು ಸುಪ್ರೀಂ ಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾ. ಸೂರ್ಯ ಕಾಂತ್ ಅವರು ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಡಾ. ರಾಮ ಮನೋಹರ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರು ಭಾನುವಾರ ಮಾತನಾಡಿದರು. ಸಹೋದರರ ಆಸ್ತಿ ವಿವಾದ ಸಂಬಂಧದ ಪ್ರಕರಣವೊಂದರಿಂದ ತಾವು ಕಲಿತ ಪಾಠವೊಂದರ ಬಗ್ಗೆ ವಿದ್ಯಾರ್ಥಿಗಳೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು.</p>.<p>‘ನನಗೆ ನನ್ನ ನಿರ್ಧಾರದ ಬಗ್ಗೆ ಅತೀವ ನಂಬಿಕೆ ಇತ್ತು. ಅಂತಾದರೂ ನಾನು ನನ್ನದೇ ತೀರ್ಪಿನ ಕರಡನ್ನು ಮತ್ತೊಮ್ಮೆ ಪರಿಶೀಲಿಸಲು ಹಿಂಜರಿಯಲಿಲ್ಲ. ಮುಂದೇನು ಎನ್ನುವುದು ತೋಚದಿದ್ದಾಗ, ವಿಚಾರಣೆ ಸಂದರ್ಭದಲ್ಲಿ ನಾನು ಕೆಲವು ಗಂಭೀರ ಪ್ರಶ್ನೆಗಳನ್ನು ಕಡೆಗಣಿಸಿದ್ದೆ. ಈ ಸೋಲೇ ನನಗೆ ಪಾಠವಾಯಿತು. ಎಲ್ಲವನ್ನೂ ಮತ್ತೊಮ್ಮೆ ಹೊಸದಾಗಿ ಆರಂಭಿಸಿದೆ. ಇದೇ ನನಗೆ ಜೀವನಪಾಠವಾಯಿತು’ ಎಂದರು.</p>.ಮುಂದಿನ ಸಿಜೆಐ ಆಗಿ ಸೂರ್ಯ ಕಾಂತ್ ನೇಮಕ: ಅವರು ನೀಡಿದ ಪ್ರಮುಖ ತೀರ್ಪುಗಳು ಇಂತಿವೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>