<p><strong>ಚೆನ್ನೈ:</strong> ತಮಿಳುನಾಡಿನ ವಂಡಲೂರ್ ಎಂಬಲ್ಲಿರುವ ‘ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನ‘ದ ಸಿಂಹವೊಂದು ಕೊರೊನಾ ವೈರಸ್ಗೆ ಬಲಿಯಾಗಿದೆ. ಮೃಗಾಲಯದ ಇನ್ನೂ 9 ಸಿಂಹಗಳಿಗೂ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಶುಕ್ರವಾರತಿಳಿಸಿದ್ದಾರೆ.</p>.<p>ಸಫಾರಿಯಲ್ಲಿದ್ದ ಒಂಬತ್ತು ವರ್ಷದ 'ನೀಲಾ' ಎಂಬ ಸಿಂಹಿಣಿ ಗುರುವಾರ ವೈರಸ್ಗೆ ಬಲಿಯಾಗಿದೆ. ತಮಿಳುನಾಡಿನಲ್ಲಿ ಕೊರೊನಾ ವೈರಸ್ಗೆ ಸಿಂಹ ಬಲಿಯಾಗಿರುವುದು ಇದೇ ಮೊದಲು. ಜೈವಿಕ ಉದ್ಯಾನದ 11 ಸಿಂಹಗಳ ಪೈಕಿ ಇನ್ನೂ 9 ಸಿಂಹಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.</p>.<p>ಚೆನ್ನೈ ನಗರದಿಂದ 35 ಕಿ.ಮೀ ದೂರದಲ್ಲಿರುವ ವಂಡಲೂರಿನಲ್ಲಿ 602 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನವು ಲಾಕ್ಡೌನ್ ಜಾರಿಯಾದ ನಂತರ ಮುಚ್ಚಲಾಗಿತ್ತು.</p>.<p>‘ಸಿಂಹಗಳು ಸೋಂಕಿಗೆ ಒಳಗಾಗಿರುವುದುಮೇ 26 ರಂದು ಬೆಳಕಿಗೆ ಗೊತ್ತಾಯಿತು. 5 ಸಿಂಹಗಳು ಆಹಾರ ಸೇವಿಸುವುದು ಬಿಟ್ಟಿದ್ದವು. ಆಗಾಗ್ಗೆ ಕೆಮ್ಮುತ್ತಿದ್ದವು,‘ ಎಂದು ಉದ್ಯಾನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳುನಾಡಿನ ವಂಡಲೂರ್ ಎಂಬಲ್ಲಿರುವ ‘ಅರಿಗ್ನರ್ ಅಣ್ಣಾ ಜೈವಿಕ ಉದ್ಯಾನ‘ದ ಸಿಂಹವೊಂದು ಕೊರೊನಾ ವೈರಸ್ಗೆ ಬಲಿಯಾಗಿದೆ. ಮೃಗಾಲಯದ ಇನ್ನೂ 9 ಸಿಂಹಗಳಿಗೂ ಸೋಂಕು ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಶುಕ್ರವಾರತಿಳಿಸಿದ್ದಾರೆ.</p>.<p>ಸಫಾರಿಯಲ್ಲಿದ್ದ ಒಂಬತ್ತು ವರ್ಷದ 'ನೀಲಾ' ಎಂಬ ಸಿಂಹಿಣಿ ಗುರುವಾರ ವೈರಸ್ಗೆ ಬಲಿಯಾಗಿದೆ. ತಮಿಳುನಾಡಿನಲ್ಲಿ ಕೊರೊನಾ ವೈರಸ್ಗೆ ಸಿಂಹ ಬಲಿಯಾಗಿರುವುದು ಇದೇ ಮೊದಲು. ಜೈವಿಕ ಉದ್ಯಾನದ 11 ಸಿಂಹಗಳ ಪೈಕಿ ಇನ್ನೂ 9 ಸಿಂಹಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.</p>.<p>ಚೆನ್ನೈ ನಗರದಿಂದ 35 ಕಿ.ಮೀ ದೂರದಲ್ಲಿರುವ ವಂಡಲೂರಿನಲ್ಲಿ 602 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನವು ಲಾಕ್ಡೌನ್ ಜಾರಿಯಾದ ನಂತರ ಮುಚ್ಚಲಾಗಿತ್ತು.</p>.<p>‘ಸಿಂಹಗಳು ಸೋಂಕಿಗೆ ಒಳಗಾಗಿರುವುದುಮೇ 26 ರಂದು ಬೆಳಕಿಗೆ ಗೊತ್ತಾಯಿತು. 5 ಸಿಂಹಗಳು ಆಹಾರ ಸೇವಿಸುವುದು ಬಿಟ್ಟಿದ್ದವು. ಆಗಾಗ್ಗೆ ಕೆಮ್ಮುತ್ತಿದ್ದವು,‘ ಎಂದು ಉದ್ಯಾನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>