<p><strong>ನಾಗ್ಪುರ</strong>: ಮಧ್ಯಪ್ರದೇಶ –ಮಹಾರಾಷ್ಟ್ರ ಗಡಿಯ ಪೆಂಚ್ ಹುಲಿ ಸಂರಕ್ಷಿತಾರಣ್ಯದಿಂದ ಮಿಡತೆಗಳ ಸೈನ್ಯವು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಅಜ್ನಿ ಗ್ರಾಮಕ್ಕೆ ದಾಳಿಯಿಟ್ಟಿವೆ. ಹೀಗಾಗಿ ಬೆಳೆಗಳು ಮತ್ತು ಗಿಡ–ಮರಗಳ ಮೇಲೆ ಡ್ರೋನ್ಗಳಿಂದ ಕೀಟನಾಶಕ ಸಿಂಪಡಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.</p>.<p>ಮಿಡತೆಗಳ ದಾಳಿಯಿಂದ ಇಲ್ಲಿಯವರೆಗೆ ಬೆಳೆ ಹಾನಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.</p>.<p>ಪೆಂಚ್ ಹುಲಿಧಾಮದಲ್ಲಿ ಮಂಗಳವಾರ ಮಿಡತೆಗಳ ಹಿಂಡು ಕಾಣಿಸಿಕೊಂಡಿತ್ತು. ಇದು ಸಂರಕ್ಷಿತ ಪ್ರದೇಶವಾದ್ದರಿಂದ ಕೀಟನಾಶಕಗಳನ್ನು ಸಿಂಪಡಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.</p>.<p>ಸಣ್ಣ ಕೊಂಬಿನ ಈ ಮಿಡತೆಗಳು ಬಳಿಕ ಹಿಂಡು ಹಿಂಡಾಗಿ ಅಜ್ನಿ ಗ್ರಾಮಕ್ಕೆ ದಾಳಿಯಿಟ್ಟಿವೆ. ಅಲ್ಲಿನ ಮರಗಳು ಮತ್ತು ಬೆಳೆಗಳ ಮೇಲೆ ಡ್ರೋನ್ಗಳ ನೆರವಿನಿಂದ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ ಎಂದು ಕೃಷಿ ವಿಭಾಗದ ಜಂಟಿ ನಿರ್ದೇಶಕ ರವಿ ಭೋಸ್ಲೆ ಮಾಹಿತಿ ನೀಡಿದ್ದಾರೆ.</p>.<p>ಈ ಪ್ರದೇಶದಲ್ಲಿ ಇನ್ನೂ ಬತ್ತವನ್ನು ನಾಟಿ ಮಾಡಿಲ್ಲ. ಹೀಗಾಗಿ ಬೆಳೆಗಳಿಗೆ ಯಾವುದೇ ಹಾನಿ ಆಗಿಲ್ಲ. ಮಿಡತೆಗಳ ಹಿಂಡು ಜಿಲ್ಲೆಯ ಮೌಡಾ ತಹಸಿಲ್ ಕಡೆಗೆ ನುಗ್ಗಿವೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗ್ಪುರ</strong>: ಮಧ್ಯಪ್ರದೇಶ –ಮಹಾರಾಷ್ಟ್ರ ಗಡಿಯ ಪೆಂಚ್ ಹುಲಿ ಸಂರಕ್ಷಿತಾರಣ್ಯದಿಂದ ಮಿಡತೆಗಳ ಸೈನ್ಯವು ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಅಜ್ನಿ ಗ್ರಾಮಕ್ಕೆ ದಾಳಿಯಿಟ್ಟಿವೆ. ಹೀಗಾಗಿ ಬೆಳೆಗಳು ಮತ್ತು ಗಿಡ–ಮರಗಳ ಮೇಲೆ ಡ್ರೋನ್ಗಳಿಂದ ಕೀಟನಾಶಕ ಸಿಂಪಡಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.</p>.<p>ಮಿಡತೆಗಳ ದಾಳಿಯಿಂದ ಇಲ್ಲಿಯವರೆಗೆ ಬೆಳೆ ಹಾನಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.</p>.<p>ಪೆಂಚ್ ಹುಲಿಧಾಮದಲ್ಲಿ ಮಂಗಳವಾರ ಮಿಡತೆಗಳ ಹಿಂಡು ಕಾಣಿಸಿಕೊಂಡಿತ್ತು. ಇದು ಸಂರಕ್ಷಿತ ಪ್ರದೇಶವಾದ್ದರಿಂದ ಕೀಟನಾಶಕಗಳನ್ನು ಸಿಂಪಡಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.</p>.<p>ಸಣ್ಣ ಕೊಂಬಿನ ಈ ಮಿಡತೆಗಳು ಬಳಿಕ ಹಿಂಡು ಹಿಂಡಾಗಿ ಅಜ್ನಿ ಗ್ರಾಮಕ್ಕೆ ದಾಳಿಯಿಟ್ಟಿವೆ. ಅಲ್ಲಿನ ಮರಗಳು ಮತ್ತು ಬೆಳೆಗಳ ಮೇಲೆ ಡ್ರೋನ್ಗಳ ನೆರವಿನಿಂದ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ ಎಂದು ಕೃಷಿ ವಿಭಾಗದ ಜಂಟಿ ನಿರ್ದೇಶಕ ರವಿ ಭೋಸ್ಲೆ ಮಾಹಿತಿ ನೀಡಿದ್ದಾರೆ.</p>.<p>ಈ ಪ್ರದೇಶದಲ್ಲಿ ಇನ್ನೂ ಬತ್ತವನ್ನು ನಾಟಿ ಮಾಡಿಲ್ಲ. ಹೀಗಾಗಿ ಬೆಳೆಗಳಿಗೆ ಯಾವುದೇ ಹಾನಿ ಆಗಿಲ್ಲ. ಮಿಡತೆಗಳ ಹಿಂಡು ಜಿಲ್ಲೆಯ ಮೌಡಾ ತಹಸಿಲ್ ಕಡೆಗೆ ನುಗ್ಗಿವೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>