<p><strong>ನವದೆಹಲಿ:</strong> ಕೇಂದ್ರ ಸರ್ಕಾರ ಮುಂದಿಟ್ಟಿರುವ ಕ್ಷೇತ್ರ ಪುನರ್ವಿಂಗಡನೆ ಪ್ರಸ್ತಾವದ ವಿರುದ್ಧ ಧ್ವನಿ ಎತ್ತಿರುವ ಡಿಎಂಕೆ ಸಂಸದರು, ಘೋಷಣೆಗಳಿರುವ ಟಿ–ಷರ್ಟ್ಗಳನ್ನು ಧರಿಸಿ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ನಡೆಯನ್ನು ಟೀಕಿಸಿರುವ ಸ್ಪೀಕರ್ ಓಂ ಬಿರ್ಲಾ ಅವರು, ಲೋಕಸಭೆ ಕಾರ್ಯವಿಧಾನಕ್ಕೆ ಸಂಬಂಧಿಸಿದ ಸೆಕ್ಷನ್ 349 ಅನ್ನು ಪಾಲಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.</p><p>ಘೋಷಣೆಗಳಿರುವ ಟಿ–ಷರ್ಟ್ಗಳನ್ನು ಧರಿಸಿ ಸದನದ ಕಲಾಪಗಳಲ್ಲಿ ಭಾಗವಹಿಸುವುದನ್ನು ಒಪ್ಪಲಾಗದು ಎಂದಿರುವ ಬಿರ್ಲಾ, ಇದು ಸಂಸದೀಯ ನಿಯಮಗಳು ಮತ್ತು ಶಿಷ್ಟಾಚಾರಕ್ಕೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.</p><p>ನಿಯಮ 349 ಅನ್ನು ಉಲ್ಲೇಖಿಸಿದ ಅವರು, 'ಸದನವು ನಿಯಮಗಳು ಮತ್ತು ರೀತಿನೀತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸದಸ್ಯರು, ಸದನದ ಘನತೆ ಹಾಗೂ ಗೌರವ ಕಾಪಾಡಬೇಕು. ಆದರೆ, ಕೆಲವು ಸಂಸದರು ನಿಯಮಗಳನ್ನು ಪಾಲಿಸುತ್ತಿಲ್ಲ. ಸದನದ ಘನತೆಯನ್ನು ಉಲ್ಲಂಘಿಸುತ್ತಿದ್ದಾರೆ. ಅದನ್ನು ಒಪ್ಪಲಾಗದು' ಎಂದು ಎಂದಿದ್ದಾರೆ.</p><p>ಘೋಷಣೆಗಳಿರುವ ಟಿ–ಷರ್ಟ್ಗಳನ್ನು ಧರಿಸಿ ಸದನಕ್ಕೆ ಬಂದಿದ್ದ ಸಂಸದರಿಗೆ, ಹೊರಗೆ ಹೋಗಿ ಸರಿಯಾದ ಬಟ್ಟೆಗಳನ್ನು ಬದಲಿಸಿಕೊಂಡು ಬರುವಂತೆಯೂ ನಿರ್ದೇಶನ ನೀಡಿದ್ದಾರೆ.</p><p>ನ್ಯಾಯಯುತ ಕ್ಷೇತ್ರ ಪುನರ್ವಿಂಗಡನೆಗೆ ಒತ್ತಾಯಿಸಿ '#FairDelimitation' ಎಂಬ ಟ್ಯಾಗ್ ಮತ್ತು 'ತಮಿಳುನಾಡು ಹೋರಾಟ ನಡೆಸುತ್ತದೆ ಮತ್ತು ಜಯ ಸಾಧಿಸಲಿದೆ' ಎಂದು ಟಿ–ಷರ್ಟ್ ಮೇಲೆ ಬರೆಯಲಾಗಿದೆ.</p>.ಕ್ಷೇತ್ರ ಪುನರ್ವಿಂಗಡನೆ ವಿರುದ್ಧ ಲೋಕಸಭೆಯಲ್ಲಿ ಡಿಎಂಕೆ ಸಂಸದರ ಗಟ್ಟಿ ಧ್ವನಿ.ಕ್ಷೇತ್ರ ಮರುವಿಂಗಡಣೆ: ಒಗ್ಗಟ್ಟಾಗಲು ಸ್ಟಾಲಿನ್ ಕರೆ.<p>ನಿಯಮ 349, ಸಂಸದರು ಸದನದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ವಿವರಣೆ ನೀಡುತ್ತದೆ. ಈ ನಿಯಮದ 16ನೇ ಅಂಶವು, ಸದನ ನಡೆಯುತ್ತಿರುವ ಸಂದರ್ಭದಲ್ಲಿ ಸದಸ್ಯರು ರಾಷ್ಟ್ರಧ್ವಜ ಅಥವಾ ಅದಕ್ಕೆ ಸಂಬಂಧಿಸಿದ ಬ್ಯಾಡ್ಜ್ ಹೊರತುಪಡಿಸಿ ಬೇರೆ ಯಾವುದೇ ಧ್ವಜ, ಚಿಹ್ನೆ ಅಥವಾ ವಸ್ತುಗಳನ್ನು ಪ್ರದರ್ಶಿಸಬಾರದು ಎಂದು ಹೇಳುತ್ತದೆ.</p><p>ಡಿಎಂಕೆ ಸದಸ್ಯರು ರಾಜ್ಯಸಭೆಯಲ್ಲಿಯೂ ಇದೇ ರೀತಿಯ ಟಿ–ಷರ್ಟ್ಗಳನ್ನು ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ಎರಡೂ ಸದನಗಳಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.</p><p>ಮೇಲ್ಮನೆಯಲ್ಲಿ ಸಭಾಪತಿ ಜಗದೀಪ್ ಧನಕರ್ ಅವರು ಯಾವುದೇ ನಿಯಮವನ್ನು ಉಲ್ಲೇಖಿಸಿಲ್ಲ. ಆದರೆ, ಡಿಎಂಕೆ ಸದಸ್ಯರು ಟಿ–ಷರ್ಟ್ಗಳನ್ನು ಧರಿಸಿ ಬಂದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೇಂದ್ರ ಸರ್ಕಾರ ಮುಂದಿಟ್ಟಿರುವ ಕ್ಷೇತ್ರ ಪುನರ್ವಿಂಗಡನೆ ಪ್ರಸ್ತಾವದ ವಿರುದ್ಧ ಧ್ವನಿ ಎತ್ತಿರುವ ಡಿಎಂಕೆ ಸಂಸದರು, ಘೋಷಣೆಗಳಿರುವ ಟಿ–ಷರ್ಟ್ಗಳನ್ನು ಧರಿಸಿ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ನಡೆಯನ್ನು ಟೀಕಿಸಿರುವ ಸ್ಪೀಕರ್ ಓಂ ಬಿರ್ಲಾ ಅವರು, ಲೋಕಸಭೆ ಕಾರ್ಯವಿಧಾನಕ್ಕೆ ಸಂಬಂಧಿಸಿದ ಸೆಕ್ಷನ್ 349 ಅನ್ನು ಪಾಲಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.</p><p>ಘೋಷಣೆಗಳಿರುವ ಟಿ–ಷರ್ಟ್ಗಳನ್ನು ಧರಿಸಿ ಸದನದ ಕಲಾಪಗಳಲ್ಲಿ ಭಾಗವಹಿಸುವುದನ್ನು ಒಪ್ಪಲಾಗದು ಎಂದಿರುವ ಬಿರ್ಲಾ, ಇದು ಸಂಸದೀಯ ನಿಯಮಗಳು ಮತ್ತು ಶಿಷ್ಟಾಚಾರಕ್ಕೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.</p><p>ನಿಯಮ 349 ಅನ್ನು ಉಲ್ಲೇಖಿಸಿದ ಅವರು, 'ಸದನವು ನಿಯಮಗಳು ಮತ್ತು ರೀತಿನೀತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸದಸ್ಯರು, ಸದನದ ಘನತೆ ಹಾಗೂ ಗೌರವ ಕಾಪಾಡಬೇಕು. ಆದರೆ, ಕೆಲವು ಸಂಸದರು ನಿಯಮಗಳನ್ನು ಪಾಲಿಸುತ್ತಿಲ್ಲ. ಸದನದ ಘನತೆಯನ್ನು ಉಲ್ಲಂಘಿಸುತ್ತಿದ್ದಾರೆ. ಅದನ್ನು ಒಪ್ಪಲಾಗದು' ಎಂದು ಎಂದಿದ್ದಾರೆ.</p><p>ಘೋಷಣೆಗಳಿರುವ ಟಿ–ಷರ್ಟ್ಗಳನ್ನು ಧರಿಸಿ ಸದನಕ್ಕೆ ಬಂದಿದ್ದ ಸಂಸದರಿಗೆ, ಹೊರಗೆ ಹೋಗಿ ಸರಿಯಾದ ಬಟ್ಟೆಗಳನ್ನು ಬದಲಿಸಿಕೊಂಡು ಬರುವಂತೆಯೂ ನಿರ್ದೇಶನ ನೀಡಿದ್ದಾರೆ.</p><p>ನ್ಯಾಯಯುತ ಕ್ಷೇತ್ರ ಪುನರ್ವಿಂಗಡನೆಗೆ ಒತ್ತಾಯಿಸಿ '#FairDelimitation' ಎಂಬ ಟ್ಯಾಗ್ ಮತ್ತು 'ತಮಿಳುನಾಡು ಹೋರಾಟ ನಡೆಸುತ್ತದೆ ಮತ್ತು ಜಯ ಸಾಧಿಸಲಿದೆ' ಎಂದು ಟಿ–ಷರ್ಟ್ ಮೇಲೆ ಬರೆಯಲಾಗಿದೆ.</p>.ಕ್ಷೇತ್ರ ಪುನರ್ವಿಂಗಡನೆ ವಿರುದ್ಧ ಲೋಕಸಭೆಯಲ್ಲಿ ಡಿಎಂಕೆ ಸಂಸದರ ಗಟ್ಟಿ ಧ್ವನಿ.ಕ್ಷೇತ್ರ ಮರುವಿಂಗಡಣೆ: ಒಗ್ಗಟ್ಟಾಗಲು ಸ್ಟಾಲಿನ್ ಕರೆ.<p>ನಿಯಮ 349, ಸಂಸದರು ಸದನದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ವಿವರಣೆ ನೀಡುತ್ತದೆ. ಈ ನಿಯಮದ 16ನೇ ಅಂಶವು, ಸದನ ನಡೆಯುತ್ತಿರುವ ಸಂದರ್ಭದಲ್ಲಿ ಸದಸ್ಯರು ರಾಷ್ಟ್ರಧ್ವಜ ಅಥವಾ ಅದಕ್ಕೆ ಸಂಬಂಧಿಸಿದ ಬ್ಯಾಡ್ಜ್ ಹೊರತುಪಡಿಸಿ ಬೇರೆ ಯಾವುದೇ ಧ್ವಜ, ಚಿಹ್ನೆ ಅಥವಾ ವಸ್ತುಗಳನ್ನು ಪ್ರದರ್ಶಿಸಬಾರದು ಎಂದು ಹೇಳುತ್ತದೆ.</p><p>ಡಿಎಂಕೆ ಸದಸ್ಯರು ರಾಜ್ಯಸಭೆಯಲ್ಲಿಯೂ ಇದೇ ರೀತಿಯ ಟಿ–ಷರ್ಟ್ಗಳನ್ನು ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ಎರಡೂ ಸದನಗಳಲ್ಲಿ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಗಿದೆ.</p><p>ಮೇಲ್ಮನೆಯಲ್ಲಿ ಸಭಾಪತಿ ಜಗದೀಪ್ ಧನಕರ್ ಅವರು ಯಾವುದೇ ನಿಯಮವನ್ನು ಉಲ್ಲೇಖಿಸಿಲ್ಲ. ಆದರೆ, ಡಿಎಂಕೆ ಸದಸ್ಯರು ಟಿ–ಷರ್ಟ್ಗಳನ್ನು ಧರಿಸಿ ಬಂದದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>