<p><strong>ಕೊಚ್ಚಿ:</strong> ಹೈಬ್ರಿಡ್ ಗಾಂಜಾ ಹೊಂದಿದ್ದ ಮಲಯಾಳದ ಖ್ಯಾತ ಚಿತ್ರ ನಿರ್ದೇಶಕರಾದ ಖಾಲಿದ್ ರೆಹಮಾನ್ ಮತ್ತು ಅಶ್ರಫ್ ಹಮ್ಸಾ ಸೇರಿದಂತೆ ಮೂವರನ್ನು ಭಾನುವಾರ ಮುಂಜಾನೆ ಇಲ್ಲಿನ ಫ್ಲಾಟ್ ಒಂದರಲ್ಲಿ ಬಂಧಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.</p>.ಮಲಯಾಳ ಸುದ್ದಿ ವಾಹಿನಿಯ ಮೂವರು ಪತ್ರಕರ್ತರ ವಿರುದ್ಧ ಪೋಕ್ಸೊ ಪ್ರಕರಣ!.<p>ಅವರಿಂದ 1.63 ಗ್ರಾಂ ಹೈಬ್ರಿಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನೂ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.</p><p>ಛಾಯಾಗ್ರಾಹಕ ಸಮೀರ್ ತಾಹಿರ್ ಬಾಡಿಗೆಗೆ ಪಡೆದ ಫ್ಲಾಟ್ ನಲ್ಲಿ ಮಾದಕ ದ್ರವ್ಯ ಬಳಸಲಾಗುತ್ತಿದೆ ಎಂಬ ಸುಳಿವು ಪಡೆದ ವಿಶೇಷ ದಳವು ಬೆಳಗಿನ ಜಾವ 2.00 ಗಂಟೆ ಸುಮಾರಿಗೆ ಫ್ಲಾಟ್ ಮೇಲೆ ದಾಳಿ ನಡೆಸಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.</p><p>ರೆಹಮಾನ್ ಮತ್ತು ಹಮ್ಸಾ ಅವರೊಂದಿಗೆ ಬಂಧಿಸಲಾದ ಮೂರನೇ ವ್ಯಕ್ತಿ ಅವರ ಸ್ನೇಹಿತ ಶಾಲಿಫ್ ಮೊಹಮ್ಮದ್ ಎಂದು ಪೊಲೀಸರು ತಿಳಿಸಿದ್ದಾರೆ.</p>.ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳ ನಿರ್ದೇಶಕ ರಂಜಿತ್ ವಿರುದ್ಧದ ಪ್ರಕರಣಕ್ಕೆ ತಡೆ.<p>‘ಅವರಿಂದ 1.63 ಗ್ರಾಂ ಹೈಬ್ರಿಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಅಬಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಅವರು ಹೊಂದಿದ್ದ ಮಾದಕ ದ್ರವ್ಯಗಳ ಮೂಲವನ್ನು ಕಂಡುಹಿಡಿಯಲು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಬಕಾರಿ ತಿಳಿಸಿದೆ.</p><p>ಖಾಲಿದ್ ರೆಹಮಾನ್ ‘ಅನುರಾಗ ಕರಿಕ್ಕಿನ್ವೆಳ್ಳಂ’ ಮತ್ತು ‘ಉಂಡಾ’ ನಂತಹ ಹಿಟ್ ಚಲನಚಿತ್ರಗಳ ನಿರ್ದೇಶನ ಮಾಡಿದ್ದಾರೆ. ಅಶ್ರಫ್ ಹಮ್ಸಾ ‘ಭೀಮಂಡೆ ವಯಿ’ ಸೇರಿದಂತೆ ಹಲವು ಚಲನಚಿತ್ರಗಳ ನಿರ್ಮಾಪಕರು. ರೆಹಮಾನ್ ಅವರ ಇತ್ತೀಚಿನ ಚಿತ್ರ ‘ಆಲಪ್ಪುಳ ಜಿಮ್ಖಾನಾ’ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.</p> .ಅತ್ಯಾಚಾರ ಪ್ರಕರಣ: ಮಲಯಾಳ ನಟ ಸಿದ್ದೀಕ್ಗೆ ನಿರೀಕ್ಷಣಾ ಜಾಮೀನು ಮಂಜೂರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ:</strong> ಹೈಬ್ರಿಡ್ ಗಾಂಜಾ ಹೊಂದಿದ್ದ ಮಲಯಾಳದ ಖ್ಯಾತ ಚಿತ್ರ ನಿರ್ದೇಶಕರಾದ ಖಾಲಿದ್ ರೆಹಮಾನ್ ಮತ್ತು ಅಶ್ರಫ್ ಹಮ್ಸಾ ಸೇರಿದಂತೆ ಮೂವರನ್ನು ಭಾನುವಾರ ಮುಂಜಾನೆ ಇಲ್ಲಿನ ಫ್ಲಾಟ್ ಒಂದರಲ್ಲಿ ಬಂಧಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.</p>.ಮಲಯಾಳ ಸುದ್ದಿ ವಾಹಿನಿಯ ಮೂವರು ಪತ್ರಕರ್ತರ ವಿರುದ್ಧ ಪೋಕ್ಸೊ ಪ್ರಕರಣ!.<p>ಅವರಿಂದ 1.63 ಗ್ರಾಂ ಹೈಬ್ರಿಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಮೂವರನ್ನೂ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.</p><p>ಛಾಯಾಗ್ರಾಹಕ ಸಮೀರ್ ತಾಹಿರ್ ಬಾಡಿಗೆಗೆ ಪಡೆದ ಫ್ಲಾಟ್ ನಲ್ಲಿ ಮಾದಕ ದ್ರವ್ಯ ಬಳಸಲಾಗುತ್ತಿದೆ ಎಂಬ ಸುಳಿವು ಪಡೆದ ವಿಶೇಷ ದಳವು ಬೆಳಗಿನ ಜಾವ 2.00 ಗಂಟೆ ಸುಮಾರಿಗೆ ಫ್ಲಾಟ್ ಮೇಲೆ ದಾಳಿ ನಡೆಸಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.</p><p>ರೆಹಮಾನ್ ಮತ್ತು ಹಮ್ಸಾ ಅವರೊಂದಿಗೆ ಬಂಧಿಸಲಾದ ಮೂರನೇ ವ್ಯಕ್ತಿ ಅವರ ಸ್ನೇಹಿತ ಶಾಲಿಫ್ ಮೊಹಮ್ಮದ್ ಎಂದು ಪೊಲೀಸರು ತಿಳಿಸಿದ್ದಾರೆ.</p>.ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳ ನಿರ್ದೇಶಕ ರಂಜಿತ್ ವಿರುದ್ಧದ ಪ್ರಕರಣಕ್ಕೆ ತಡೆ.<p>‘ಅವರಿಂದ 1.63 ಗ್ರಾಂ ಹೈಬ್ರಿಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಅಬಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಅವರು ಹೊಂದಿದ್ದ ಮಾದಕ ದ್ರವ್ಯಗಳ ಮೂಲವನ್ನು ಕಂಡುಹಿಡಿಯಲು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಬಕಾರಿ ತಿಳಿಸಿದೆ.</p><p>ಖಾಲಿದ್ ರೆಹಮಾನ್ ‘ಅನುರಾಗ ಕರಿಕ್ಕಿನ್ವೆಳ್ಳಂ’ ಮತ್ತು ‘ಉಂಡಾ’ ನಂತಹ ಹಿಟ್ ಚಲನಚಿತ್ರಗಳ ನಿರ್ದೇಶನ ಮಾಡಿದ್ದಾರೆ. ಅಶ್ರಫ್ ಹಮ್ಸಾ ‘ಭೀಮಂಡೆ ವಯಿ’ ಸೇರಿದಂತೆ ಹಲವು ಚಲನಚಿತ್ರಗಳ ನಿರ್ಮಾಪಕರು. ರೆಹಮಾನ್ ಅವರ ಇತ್ತೀಚಿನ ಚಿತ್ರ ‘ಆಲಪ್ಪುಳ ಜಿಮ್ಖಾನಾ’ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.</p> .ಅತ್ಯಾಚಾರ ಪ್ರಕರಣ: ಮಲಯಾಳ ನಟ ಸಿದ್ದೀಕ್ಗೆ ನಿರೀಕ್ಷಣಾ ಜಾಮೀನು ಮಂಜೂರು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>