ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ನೀರಿನಲ್ಲಿ ಮುಳುಗಿಸಿ ಮಗುವಿನ ಕೊಲೆ; ವ್ಯಕ್ತಿ ಬಂಧನ

Published 25 ಏಪ್ರಿಲ್ 2023, 4:40 IST
Last Updated 25 ಏಪ್ರಿಲ್ 2023, 4:40 IST
ಅಕ್ಷರ ಗಾತ್ರ

ಪುಣೆ : ತಾಯಿ ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಒಂದೂವರೆ ವರ್ಷದ ಮಗುವನ್ನು ಬಿಸಿ ನೀರಿನ ಬಕೆಟ್‌ನಲ್ಲಿ ಮುಳುಗಿಸಿ ಕೊಂದ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿ ನಡೆದಿದೆ. ಕೊಲೆಗಾರನನ್ನು ಪೊಲೀಸರು ಬಂಧಿಸಿದ್ದಾರೆ.

ವಿಕ್ರಮ್‌ ಕೊಲೇಕರ್ ಮಗುವನ್ನು ಕೊಂದ ದುಷ್ಕರ್ಮಿ. ಏಪ್ರಿಲ್‌ 6ರಂದು ಕೊಲೆ ನಡೆದಿದ್ದು, ಭಯದಿಂದ ಮಗುವಿನ ತಾಯಿ ಈ ವಿಷಯವನ್ನು ಪೊಲೀಸರಿಂದ ಮುಚ್ಚಿಟ್ಟಿದ್ದಳು ಎಂಬ ವಿಷಯ ಇದೀಗ ತಿಳಿದುಬಂದಿದೆ.

‘ಕೊಲೆಗಾರ ವಿಕ್ರಮ್ ಮತ್ತು ಮಗುವಿನ ತಾಯಿ ಕಿರಣಾ ನಡುವೆ ಅಕ್ರಮ ಸಂಬಂಧವಿತ್ತು. ಕಿರಣಾಳನ್ನು ಮದುವೆಯಾಗಲು ವಿಕ್ರಮ್ ಬಯಸಿದ್ದು, ತನ್ನನ್ನು ಮದುವೆಯಾಗುವಂತೆ ಕಿರಣಾ ಬಳಿ ಕೇಳಿದ್ದಾನೆ. ಮದುವೆಯಾಗಲು ಕಿರಣಾ ನಿರಾಕರಿಸಿದ್ದು, ಇದೇ ಕೋಪಕ್ಕೆ ಮಗುವನ್ನು ಕೊಂದಿದ್ದಾನೆ‘ ಎಂದು ಹಿರಿಯ ಇನ್ಸ್‌ಪೆಕ್ಟರ್ ವೈಭವ್ ಶಿಂಗಾರೆ ಹೇಳಿದ್ದಾರೆ

‘ಈ ಕೃತ್ಯ ನಡೆಯುವ ವೇಳೆ ಮಗುವಿನ ತಾಯಿ ಇದ್ದಳು. ಭಯದಿಂದ ವಿಷಯವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಇದೀಗ ದೂರು ನೀಡಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದಾರೆ.

‘ನಾನು ಮದುವೆಯಾಗಲು ನಿರಾಕರಿಸುವುದೇ ನನ್ನ ಮಗುವಿನ ಕೊಲೆಗೆ ಕಾರಣವಾಗಿದೆ ಎಂದು ಕಿರಣಾ ದೂರಿನಲ್ಲಿ ಉಲ್ಲೇಖಸಿದ್ದಾರೆ. ದೂರಿನನ್ವಯ ವಿಕ್ರಮ್‌ನನ್ನು ಬಂಧಿಸಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT