ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮೃಘಾಲಯದ ವಕ್ತಾರ ರಿಯಾಜ್ ಅಹ್ಮದ್ ಖಾನ್, ’ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದಾವಿಸಲಾಯಿತು. ಆತನಿಗೆ ಏಣಿ ನೀಡಲು ಪ್ರಯತ್ನಿಸಲಾಯಿತಾದರೂ, ಆತ ನಮ್ಮ ಕೂಗನ್ನು ಕೇಳಿಸಿಕೊಳ್ಳಲಿಲ್ಲ. ನಂತರ ಸಿಂಹಕ್ಕೆ ಅರಿವಳಿಕೆ ನೀಡಿ ಆತನನ್ನು ರಕ್ಷಿಸಲಾಯಿತು,‘ ಎಂದು ತಿಳಿಸಿದ್ದಾರೆ.
ರೆಹಾನ್ ಅತ್ಯಂತ ಅದೃಷ್ಟಶಾಲಿ. ಯಾವುದೇ ಅವಘಡವಿಲ್ಲದೇ ಆತನ್ನನ್ನು ರಕ್ಷಿಸಿರುವುದು ಸೋಜಿಗದ ಸಂಗತಿ ಎಂದು ಪ್ರಾಣಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.