<p><strong>ಇಂಫಾಲ: </strong>2016ರಲ್ಲಿ ರಚಿಸಲಾದ ಏಳು ಜಿಲ್ಲೆಗಳ ರಚನೆಯನ್ನು ಹಿಂದಕ್ಕೆ ಪಡೆಯುವ ಬೇಡಿಕೆಯ ಕುರಿತು ಸೇನಾಪತಿ ಜಿಲ್ಲೆಯಲ್ಲಿ ಕೇಂದ್ರ, ಮಣಿಪುರ ಸರ್ಕಾರ ಮತ್ತು ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್ಸಿ) ನಡುವೆ ಶುಕ್ರವಾರ ನಡೆದ ತ್ರಿಪಕ್ಷೀಯ ಮಾತುಕತೆಗಳು ಯಾವುದೇ ಫಲ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಕಾಮ್ಜಾಂಗ್, ಫರ್ಜಾಲ್, ಕಾಕ್ಚಿಂಗ್, ಕಾಂಗ್ಪೊಕ್ಪಿ, ಟೆಂಗ್ನೌಪಾಲ್, ನೋನಿ ಮತ್ತು ಜಿರೀಬಾಮ್ಗಳ ರಚನೆಯನ್ನು ಹಿಂಪಡೆಯಲು ಯುಎನ್ಸಿ ಒತ್ತಾಯಿಸುತ್ತಿದೆ. ಒ ಇಬೋಬಿ ಸಿಂಗ್ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಜಿಲ್ಲೆಗಳನ್ನು ರಚಿಸಲಾಗಿತ್ತು.</p>.<p>ಕೆಲವು ತೊಡಕುಗಳು ಇದ್ದಿದ್ದರಿಂದ ಬಲವಾದ ಪ್ರಸ್ತಾವನೆಯನ್ನು ಮುಂದಿಡಲು ಮಣಿಪುರ ಸರ್ಕಾರದ ಪ್ರತಿನಿಧಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯುಎನ್ಸಿ, ಮುಂದಿನ ಸುತ್ತಿನ ಮಾತುಕತೆಗಳಲ್ಲಿ ಬಲವಾದ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಒತ್ತಾಯಿಸಿತು.</p>.<p>ಸಭೆ ಸೌಹಾರ್ದಯುತವಾಗಿ ನಡೆದಿದ್ದು, ಹಿಂದಿನ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ರಾಜಕೀಯವಾಗಿ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ನಿರಂತರ ರೀತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತಷ್ಟು ಪ್ರಗತಿ ಸಾಧಿಸಲು ಪರಸ್ಪರ ಒಪ್ಪಿಗೆ ನೀಡಲಾಯಿತು ಎಂದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಯುಎನ್ಸಿ ಪ್ರತಿನಿಧಿಗಳು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p> <p>ಮುಂದಿನ ಸುತ್ತಿನ ಮಾತುಕತೆ ಜನವರಿ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.ಮಣಿಪುರ ಹಿಂಸಾಚಾರ: ಇಂಫಾಲ್ ಕಣಿವೆಯಲ್ಲಿ 13 ದಿನಗಳ ಬಳಿಕ ಶಾಲಾ–ಕಾಲೇಜು ಪುನರಾರಂಭ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ: </strong>2016ರಲ್ಲಿ ರಚಿಸಲಾದ ಏಳು ಜಿಲ್ಲೆಗಳ ರಚನೆಯನ್ನು ಹಿಂದಕ್ಕೆ ಪಡೆಯುವ ಬೇಡಿಕೆಯ ಕುರಿತು ಸೇನಾಪತಿ ಜಿಲ್ಲೆಯಲ್ಲಿ ಕೇಂದ್ರ, ಮಣಿಪುರ ಸರ್ಕಾರ ಮತ್ತು ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್ಸಿ) ನಡುವೆ ಶುಕ್ರವಾರ ನಡೆದ ತ್ರಿಪಕ್ಷೀಯ ಮಾತುಕತೆಗಳು ಯಾವುದೇ ಫಲ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಕಾಮ್ಜಾಂಗ್, ಫರ್ಜಾಲ್, ಕಾಕ್ಚಿಂಗ್, ಕಾಂಗ್ಪೊಕ್ಪಿ, ಟೆಂಗ್ನೌಪಾಲ್, ನೋನಿ ಮತ್ತು ಜಿರೀಬಾಮ್ಗಳ ರಚನೆಯನ್ನು ಹಿಂಪಡೆಯಲು ಯುಎನ್ಸಿ ಒತ್ತಾಯಿಸುತ್ತಿದೆ. ಒ ಇಬೋಬಿ ಸಿಂಗ್ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಜಿಲ್ಲೆಗಳನ್ನು ರಚಿಸಲಾಗಿತ್ತು.</p>.<p>ಕೆಲವು ತೊಡಕುಗಳು ಇದ್ದಿದ್ದರಿಂದ ಬಲವಾದ ಪ್ರಸ್ತಾವನೆಯನ್ನು ಮುಂದಿಡಲು ಮಣಿಪುರ ಸರ್ಕಾರದ ಪ್ರತಿನಿಧಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯುಎನ್ಸಿ, ಮುಂದಿನ ಸುತ್ತಿನ ಮಾತುಕತೆಗಳಲ್ಲಿ ಬಲವಾದ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದು ಒತ್ತಾಯಿಸಿತು.</p>.<p>ಸಭೆ ಸೌಹಾರ್ದಯುತವಾಗಿ ನಡೆದಿದ್ದು, ಹಿಂದಿನ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ರಾಜಕೀಯವಾಗಿ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ನಿರಂತರ ರೀತಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮತ್ತಷ್ಟು ಪ್ರಗತಿ ಸಾಧಿಸಲು ಪರಸ್ಪರ ಒಪ್ಪಿಗೆ ನೀಡಲಾಯಿತು ಎಂದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಯುಎನ್ಸಿ ಪ್ರತಿನಿಧಿಗಳು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p> <p>ಮುಂದಿನ ಸುತ್ತಿನ ಮಾತುಕತೆ ಜನವರಿ ಕೊನೆಯ ವಾರದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.ಮಣಿಪುರ ಹಿಂಸಾಚಾರ: ಇಂಫಾಲ್ ಕಣಿವೆಯಲ್ಲಿ 13 ದಿನಗಳ ಬಳಿಕ ಶಾಲಾ–ಕಾಲೇಜು ಪುನರಾರಂಭ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>