<p><strong>ಐಜೋಲ್ (ಮಿಜೋರಾಂ):</strong> ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದಕ್ಕೆ ಸಂಬಂಧಿಸಿದಂತೆ ಮಿಜೋರಾಂನ ಮಾಜಿ ಬಂಡುಕೋರರ ಸಂಘಟನೆ, ಮೈತೇಯಿ ಸಮುದಾಯದವರಿಗೆ ಗಂಭೀರ ಎಚ್ಚರಿಕೆ ನೀಡಿದೆ. ಹೀಗಾಗಿ ಮಿಜೋರಾಂನಲ್ಲಿರುವ ಮೈತೇಯಿ ಸಮುದಾಯದವರು ರಾಜ್ಯದಿಂದ ಶನಿವಾರ ಪಲಾಯನ ಮಾಡುತ್ತಿದ್ದಾರೆ.</p><p>ಶಾಂತಿ ಒಪ್ಪಂದದ ಮೇರೆಗೆ ಮಿಜೋರಾಂ ನ್ಯಾಷನಲ್ ಫ್ರಂಟ್ನಿಂದ ಮರಳಿದವರ ಸಂಘಟನೆ (ಪಿಎಎಂಆರ್ಎ) ಮೈತೇಯಿ ಸಮುದಾಯದವರಿಗೆ ಶನಿವಾರ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಸುಮಾರು 60 ಮಂದಿ ಇಂದು (ಶನಿವಾರ) ಬೆಳಗ್ಗೆ ಮಣಿಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.</p><p>ಈ ಸಂಬಂಧ ಮಿಜೋರಾಂ ಗೃಹ ಇಲಾಖೆ ಆಯುಕ್ತ ಎಚ್. ಲಾಲೆಂಗ್ಮಾವಿಯಾ ಅವರು ಮಾಜಿ ಬಂಡುಕೋರರ ಸಂಘಟನೆ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. </p><p>ಮಿಜೋರಾಂನಲ್ಲಿರುವ ಮಣಿಪುರ ಸಮುದಾಯದವರನ್ನು ಬಳಿಕ ಭೇಟಿ ಮಾಡಿದ ಆಯಕ್ತರು ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದು, ರಾಜ್ಯ ತೊರೆಯದಂತೆ ಮನವಿ ಮಾಡಿದ್ದಾರೆ.</p><p>ಮಿಜೋರಾಂ ಸರ್ಕಾರವು ರಾಜಧಾನಿ ಐಜೋಲ್ ಸೇರಿದಂತೆ ಮೈತೇಯಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಮುನ್ನೆಚ್ಚರಿಕೆ ದೃಷ್ಟಿಯಿಂದ ರಕ್ಷಣಾ ಸಿಬ್ಬಂದಿಯನ್ನು ಶುಕ್ರವಾರವೇ ನಿಯೋಜಿಸಿದೆ.</p><p><strong>ಇದನ್ನೂ ಓದಿ:</strong><a href="https://www.prajavani.net/news/india-news/before-parading-women-naked-in-manipur-mob-killed-one-torched-houses-fir-2401033"> ಮಹಿಳೆಯರನ್ನು ನಗ್ನಗೊಳಿಸುವ ಮುನ್ನ ಇಡೀ ಊರಿಗೆ ಬೆಂಕಿ ಹಚ್ಚಿದ ಉದ್ರಿಕ್ತರು: FIR </a></p><p>ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಮೇ 3ರಿಂದಲೂ ಹಿಂಸಾಚಾರ ನಡೆಯುತ್ತಿದೆ. ಈವರೆಗೆ 160ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.</p><p>ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯ ಗ್ರಾಮವೊಂದಕ್ಕೆ ಮೇ 4ರಂದು ಮುತ್ತಿಗೆ ಹಾಕಿದ್ದ ಸಾವಿರಾರು ಜನರ ಗುಂಪು, ಮನೆಗಳನ್ನು ಲೂಟಿ ಮಾಡಿ ಇಡೀ ಊರಿಗೆ ಬೆಂಕಿ ಹಚ್ಚಿತ್ತು. ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ, ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಬೆತ್ತಲೆ ಮೆರವಣಿಗೆ ನಡೆಸಲಾಗಿತ್ತು.</p><p>ಬಲವಂತದ ಮೆರವಣಿಗೆ, ಲೈಂಗಿಕ ಕಿರುಕುಳ ನೀಡಿದ ಹೇಯ ಕೃತ್ಯಕ್ಕೆ ಸಂಬಂಧಿಸಿದ ವಿಡಿಯೊಗಳು ಜುಲೈ 19ರಂದು ಎಲ್ಲೆಡೆ ಹರಿದಾಡಿದ್ದವು. ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಐಜೋಲ್ (ಮಿಜೋರಾಂ):</strong> ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದಕ್ಕೆ ಸಂಬಂಧಿಸಿದಂತೆ ಮಿಜೋರಾಂನ ಮಾಜಿ ಬಂಡುಕೋರರ ಸಂಘಟನೆ, ಮೈತೇಯಿ ಸಮುದಾಯದವರಿಗೆ ಗಂಭೀರ ಎಚ್ಚರಿಕೆ ನೀಡಿದೆ. ಹೀಗಾಗಿ ಮಿಜೋರಾಂನಲ್ಲಿರುವ ಮೈತೇಯಿ ಸಮುದಾಯದವರು ರಾಜ್ಯದಿಂದ ಶನಿವಾರ ಪಲಾಯನ ಮಾಡುತ್ತಿದ್ದಾರೆ.</p><p>ಶಾಂತಿ ಒಪ್ಪಂದದ ಮೇರೆಗೆ ಮಿಜೋರಾಂ ನ್ಯಾಷನಲ್ ಫ್ರಂಟ್ನಿಂದ ಮರಳಿದವರ ಸಂಘಟನೆ (ಪಿಎಎಂಆರ್ಎ) ಮೈತೇಯಿ ಸಮುದಾಯದವರಿಗೆ ಶನಿವಾರ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಸುಮಾರು 60 ಮಂದಿ ಇಂದು (ಶನಿವಾರ) ಬೆಳಗ್ಗೆ ಮಣಿಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.</p><p>ಈ ಸಂಬಂಧ ಮಿಜೋರಾಂ ಗೃಹ ಇಲಾಖೆ ಆಯುಕ್ತ ಎಚ್. ಲಾಲೆಂಗ್ಮಾವಿಯಾ ಅವರು ಮಾಜಿ ಬಂಡುಕೋರರ ಸಂಘಟನೆ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. </p><p>ಮಿಜೋರಾಂನಲ್ಲಿರುವ ಮಣಿಪುರ ಸಮುದಾಯದವರನ್ನು ಬಳಿಕ ಭೇಟಿ ಮಾಡಿದ ಆಯಕ್ತರು ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದು, ರಾಜ್ಯ ತೊರೆಯದಂತೆ ಮನವಿ ಮಾಡಿದ್ದಾರೆ.</p><p>ಮಿಜೋರಾಂ ಸರ್ಕಾರವು ರಾಜಧಾನಿ ಐಜೋಲ್ ಸೇರಿದಂತೆ ಮೈತೇಯಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಮುನ್ನೆಚ್ಚರಿಕೆ ದೃಷ್ಟಿಯಿಂದ ರಕ್ಷಣಾ ಸಿಬ್ಬಂದಿಯನ್ನು ಶುಕ್ರವಾರವೇ ನಿಯೋಜಿಸಿದೆ.</p><p><strong>ಇದನ್ನೂ ಓದಿ:</strong><a href="https://www.prajavani.net/news/india-news/before-parading-women-naked-in-manipur-mob-killed-one-torched-houses-fir-2401033"> ಮಹಿಳೆಯರನ್ನು ನಗ್ನಗೊಳಿಸುವ ಮುನ್ನ ಇಡೀ ಊರಿಗೆ ಬೆಂಕಿ ಹಚ್ಚಿದ ಉದ್ರಿಕ್ತರು: FIR </a></p><p>ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಮೇ 3ರಿಂದಲೂ ಹಿಂಸಾಚಾರ ನಡೆಯುತ್ತಿದೆ. ಈವರೆಗೆ 160ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.</p><p>ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯ ಗ್ರಾಮವೊಂದಕ್ಕೆ ಮೇ 4ರಂದು ಮುತ್ತಿಗೆ ಹಾಕಿದ್ದ ಸಾವಿರಾರು ಜನರ ಗುಂಪು, ಮನೆಗಳನ್ನು ಲೂಟಿ ಮಾಡಿ ಇಡೀ ಊರಿಗೆ ಬೆಂಕಿ ಹಚ್ಚಿತ್ತು. ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ, ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಬೆತ್ತಲೆ ಮೆರವಣಿಗೆ ನಡೆಸಲಾಗಿತ್ತು.</p><p>ಬಲವಂತದ ಮೆರವಣಿಗೆ, ಲೈಂಗಿಕ ಕಿರುಕುಳ ನೀಡಿದ ಹೇಯ ಕೃತ್ಯಕ್ಕೆ ಸಂಬಂಧಿಸಿದ ವಿಡಿಯೊಗಳು ಜುಲೈ 19ರಂದು ಎಲ್ಲೆಡೆ ಹರಿದಾಡಿದ್ದವು. ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>