<p><strong>ನವದೆಹಲಿ</strong>: ಮಹಾತ್ವ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ(ಎಂಜಿಎನ್ಆರ್ಇಜಿಎಸ್) ಪರಿಣಾಮಕಾರಿತ್ವದ ಬಗ್ಗೆ ಸ್ವತಂತ್ರ ಸಮೀಕ್ಷೆ ನಡೆಸಬೇಕು ಎಂದು ಸಂಸದೀಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದ್ದು, ಇತ್ತೀಚೆಗೆ ಉದ್ಭವಿಸುತ್ತಿರುವ ಹೊಸ ಹೊಸ ಸವಾಲುಗಳನ್ನು ಪರಿಗಣಿಸಿ ಯೋಜನೆಯ ಪರಿಷ್ಕರಣೆಗೆ ಸಲಹೆ, ಒತ್ತಾಯ ಮಾಡಿದೆ.</p><p>ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ನ ಬಜೆಟ್ ಅಧಿವೇಶನದಲ್ಲಿ ಸಮಿತಿ ವರದಿಯನ್ನು ಮಂಡಿಸಲಾಗಿದೆ. ಈ ವರದಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಬಂಧಿತ ಸಂಸದೀತ ಸ್ಥಾಯಿ ಸಮೀತಿಯು, ಯೋಜನೆಯಡಿ ಈಗ ಇರುವ 100 ದಿನಗಳ ಕೆಲಸದ ಅವಧಿಯನ್ನು 150ಕ್ಕೆ ಹೆಚ್ಚಿಸಬೇಕು ಮತ್ತು ದಿನದ ವೇತನವನ್ನು ₹400ಕ್ಕೆ ಹೆಚ್ಚಿಸಬೇಕೆಂದು ಶಿಫಾರಸು ಮಾಡಿದೆ.</p><p>ಪ್ರಮುಖ ಗ್ರಾಮೀಣ ಉದ್ಯೋಗ ಯೋಜನೆಗೆ ಅನುದಾನ ಹಂಚಿಕೆ ಸ್ಥಗಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಮಿತಿಯು, ಅದರ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಲೆಕ್ಕಪರಿಶೋಧನೆಯ ಬಗ್ಗೆಯೂ ಒತ್ತಿ ಹೇಳಿದೆ.</p><p>ಯೋಜನೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಸಮಗ್ರ ರಾಷ್ಟ್ರೀಯ ಸಮೀಕ್ಷೆಯನ್ನು ನಡೆಸಬೇಕು ಎಂದು ಸಮಿತಿ ನಂಬುತ್ತದೆ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಕಾ ನೇತೃತ್ವದ ಸಮಿತಿ ಹೇಳಿದೆ.</p><p>ಸಮೀಕ್ಷೆಯು ಕಾರ್ಮಿಕರ ತೃಪ್ತಿ, ವೇತನ ವಿಳಂಬ, ಭಾಗವಹಿಸುವಿಕೆಯ ಪ್ರವೃತ್ತಿಗಳು ಮತ್ತು ಯೋಜನೆಯೊಳಗಿನ ಹಣಕಾಸಿನ ಅಕ್ರಮಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಅದು ಹೇಳಿದೆ.</p><p>ಯೋಜನೆ ಕುರಿತಂತೆ ಮೌಲ್ಯಯುತ ಒಳನೋಟವನ್ನು ಪಡೆಯಲು ದೇಶದಾದ್ಯಂತ ಸ್ವತಂತ್ರ ಮತ್ತು ಪಾರದರ್ಶಕ ಸಮಗ್ರ ಸಮೀಕ್ಷೆಗೆ ಸಮಿತಿ ಒತ್ತಾಯಿಸಿದೆ. ಯೋಜನೆಯ ಪರಿಣಾಮಕತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀತಿ ಪರಿಷ್ಕರಣೆಗೂ ಸಮಿತಿ ಒತ್ತಾಯಿಸಿದೆ.</p><p>ಬದಲಾದ ಸನ್ನಿವೇಶ ಮತ್ತು ಹೊಸ ಹೊಸ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಪರಿಷ್ಕರಿಸುವ ಅಗತ್ಯವಿದೆ. ಈಗಿರುವ 100 ದಿನಗಳ ಕೆಲಸದ ಅವಧಿಯನ್ನು 150ಕ್ಕೆ ಹೆಚ್ಚಿಸುವ ಆಯ್ಕೆಗಳನ್ನು ಪರಿಶೀಲಿಸುವಂತೆ ಸಚಿವಾಲಯಕ್ಕೆ ಸಮಿತಿ ಒತ್ತಾಯಿಸಿದೆ.</p><p>ವಿಪತ್ತು ಪರಿಹಾರದ ಕ್ರಮವಾಗಿ ಯೋಜನೆಯಡಿ ಸದ್ಯ ಇರುವ 150 ದಿನಗಳ ಕೆಲಸದ ಅವಧಿಯನ್ನು 200ಕ್ಕೆ ಹೆಚ್ಚಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.</p><p>ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹೆಚ್ಚಳ ಆಗದಿರುವ ಬಗ್ಗೆ ಸಮಿತಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಸದ್ಯದ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಕೂಲಿಯನ್ನು ಪರಿಷ್ಕರಿಸಬೇಕು. ₹400 ಗೌರವಾನ್ವಿತ ಕೂಲಿ ನೀಡಬೇಕು ಎಂದೂ ಹೇಳಿದೆ.</p><p>ವೇತನ ಬಿಡುಗಡೆಯಲ್ಲಿ ದೀರ್ಘ ವಿಳಂಬವಾಗುತ್ತಿದ್ದು, ವಿಳಂಬಕ್ಕೆ ಪರಿಹಾರ ಸಹ ನೀಡಬೇಕು ಎಂದು ಹೇಳಿದೆ.</p><p>ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸಲು ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಹೆಚ್ಚಿಸಬೇಕು ಎಂದು ಸಮಿತಿಯು ಗಮನಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಾಮಾಜಿಕ ಲೆಕ್ಕಪರಿಶೋಧನಾ ಕ್ಯಾಲೆಂಡರ್ ಅನ್ನು ತರಲು ಒತ್ತಾಯಿಸಿದೆ.</p><p>ಹೆಚ್ಚಿನ ಸಂಖ್ಯೆಯ ಉದ್ಯೋಗ ಕಾರ್ಡ್ ರದ್ದನ್ನು ಗಮನಿಸಿದ ಸಮಿತಿಯು, 2021-22ರಲ್ಲಿ ಆಧಾರ್ ವಿವರಗಳಲ್ಲಿನ ಸಣ್ಣ ಕಾಗುಣಿತ ದೋಷಗಳು ಅಥವಾ ಹೊಂದಾಣಿಕೆಯಿಲ್ಲದ ಕಾರಣ ಸುಮಾರು 50.31 ಲಕ್ಷ ಉದ್ಯೋಗ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಹಾತ್ವ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ(ಎಂಜಿಎನ್ಆರ್ಇಜಿಎಸ್) ಪರಿಣಾಮಕಾರಿತ್ವದ ಬಗ್ಗೆ ಸ್ವತಂತ್ರ ಸಮೀಕ್ಷೆ ನಡೆಸಬೇಕು ಎಂದು ಸಂಸದೀಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದ್ದು, ಇತ್ತೀಚೆಗೆ ಉದ್ಭವಿಸುತ್ತಿರುವ ಹೊಸ ಹೊಸ ಸವಾಲುಗಳನ್ನು ಪರಿಗಣಿಸಿ ಯೋಜನೆಯ ಪರಿಷ್ಕರಣೆಗೆ ಸಲಹೆ, ಒತ್ತಾಯ ಮಾಡಿದೆ.</p><p>ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ನ ಬಜೆಟ್ ಅಧಿವೇಶನದಲ್ಲಿ ಸಮಿತಿ ವರದಿಯನ್ನು ಮಂಡಿಸಲಾಗಿದೆ. ಈ ವರದಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಬಂಧಿತ ಸಂಸದೀತ ಸ್ಥಾಯಿ ಸಮೀತಿಯು, ಯೋಜನೆಯಡಿ ಈಗ ಇರುವ 100 ದಿನಗಳ ಕೆಲಸದ ಅವಧಿಯನ್ನು 150ಕ್ಕೆ ಹೆಚ್ಚಿಸಬೇಕು ಮತ್ತು ದಿನದ ವೇತನವನ್ನು ₹400ಕ್ಕೆ ಹೆಚ್ಚಿಸಬೇಕೆಂದು ಶಿಫಾರಸು ಮಾಡಿದೆ.</p><p>ಪ್ರಮುಖ ಗ್ರಾಮೀಣ ಉದ್ಯೋಗ ಯೋಜನೆಗೆ ಅನುದಾನ ಹಂಚಿಕೆ ಸ್ಥಗಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಮಿತಿಯು, ಅದರ ಸರಿಯಾದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಲೆಕ್ಕಪರಿಶೋಧನೆಯ ಬಗ್ಗೆಯೂ ಒತ್ತಿ ಹೇಳಿದೆ.</p><p>ಯೋಜನೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಸಮಗ್ರ ರಾಷ್ಟ್ರೀಯ ಸಮೀಕ್ಷೆಯನ್ನು ನಡೆಸಬೇಕು ಎಂದು ಸಮಿತಿ ನಂಬುತ್ತದೆ ಎಂದು ಕಾಂಗ್ರೆಸ್ ಸಂಸದ ಸಪ್ತಗಿರಿ ಶಂಕರ್ ಉಲಕಾ ನೇತೃತ್ವದ ಸಮಿತಿ ಹೇಳಿದೆ.</p><p>ಸಮೀಕ್ಷೆಯು ಕಾರ್ಮಿಕರ ತೃಪ್ತಿ, ವೇತನ ವಿಳಂಬ, ಭಾಗವಹಿಸುವಿಕೆಯ ಪ್ರವೃತ್ತಿಗಳು ಮತ್ತು ಯೋಜನೆಯೊಳಗಿನ ಹಣಕಾಸಿನ ಅಕ್ರಮಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಅದು ಹೇಳಿದೆ.</p><p>ಯೋಜನೆ ಕುರಿತಂತೆ ಮೌಲ್ಯಯುತ ಒಳನೋಟವನ್ನು ಪಡೆಯಲು ದೇಶದಾದ್ಯಂತ ಸ್ವತಂತ್ರ ಮತ್ತು ಪಾರದರ್ಶಕ ಸಮಗ್ರ ಸಮೀಕ್ಷೆಗೆ ಸಮಿತಿ ಒತ್ತಾಯಿಸಿದೆ. ಯೋಜನೆಯ ಪರಿಣಾಮಕತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀತಿ ಪರಿಷ್ಕರಣೆಗೂ ಸಮಿತಿ ಒತ್ತಾಯಿಸಿದೆ.</p><p>ಬದಲಾದ ಸನ್ನಿವೇಶ ಮತ್ತು ಹೊಸ ಹೊಸ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಪರಿಷ್ಕರಿಸುವ ಅಗತ್ಯವಿದೆ. ಈಗಿರುವ 100 ದಿನಗಳ ಕೆಲಸದ ಅವಧಿಯನ್ನು 150ಕ್ಕೆ ಹೆಚ್ಚಿಸುವ ಆಯ್ಕೆಗಳನ್ನು ಪರಿಶೀಲಿಸುವಂತೆ ಸಚಿವಾಲಯಕ್ಕೆ ಸಮಿತಿ ಒತ್ತಾಯಿಸಿದೆ.</p><p>ವಿಪತ್ತು ಪರಿಹಾರದ ಕ್ರಮವಾಗಿ ಯೋಜನೆಯಡಿ ಸದ್ಯ ಇರುವ 150 ದಿನಗಳ ಕೆಲಸದ ಅವಧಿಯನ್ನು 200ಕ್ಕೆ ಹೆಚ್ಚಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ.</p><p>ಹಣದುಬ್ಬರಕ್ಕೆ ತಕ್ಕಂತೆ ಕೂಲಿ ಹೆಚ್ಚಳ ಆಗದಿರುವ ಬಗ್ಗೆ ಸಮಿತಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಸದ್ಯದ ಆರ್ಥಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಕೂಲಿಯನ್ನು ಪರಿಷ್ಕರಿಸಬೇಕು. ₹400 ಗೌರವಾನ್ವಿತ ಕೂಲಿ ನೀಡಬೇಕು ಎಂದೂ ಹೇಳಿದೆ.</p><p>ವೇತನ ಬಿಡುಗಡೆಯಲ್ಲಿ ದೀರ್ಘ ವಿಳಂಬವಾಗುತ್ತಿದ್ದು, ವಿಳಂಬಕ್ಕೆ ಪರಿಹಾರ ಸಹ ನೀಡಬೇಕು ಎಂದು ಹೇಳಿದೆ.</p><p>ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸಲು ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಹೆಚ್ಚಿಸಬೇಕು ಎಂದು ಸಮಿತಿಯು ಗಮನಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸಾಮಾಜಿಕ ಲೆಕ್ಕಪರಿಶೋಧನಾ ಕ್ಯಾಲೆಂಡರ್ ಅನ್ನು ತರಲು ಒತ್ತಾಯಿಸಿದೆ.</p><p>ಹೆಚ್ಚಿನ ಸಂಖ್ಯೆಯ ಉದ್ಯೋಗ ಕಾರ್ಡ್ ರದ್ದನ್ನು ಗಮನಿಸಿದ ಸಮಿತಿಯು, 2021-22ರಲ್ಲಿ ಆಧಾರ್ ವಿವರಗಳಲ್ಲಿನ ಸಣ್ಣ ಕಾಗುಣಿತ ದೋಷಗಳು ಅಥವಾ ಹೊಂದಾಣಿಕೆಯಿಲ್ಲದ ಕಾರಣ ಸುಮಾರು 50.31 ಲಕ್ಷ ಉದ್ಯೋಗ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>