<p><strong>ಜಾರ್ಸುಗುಡ(ಒಡಿಶಾ):</strong> ‘ಕಡಿಮೆ ಆದಾಯ ಹೊಂದಿದ್ದ ಕುಟುಂಬಗಳ ಮೇಲೆಯೂ ತೆರಿಗೆ ಹೇರುವ ಮೂಲಕ ಕಾಂಗ್ರೆಸ್ ದೇಶದ ಜನರನ್ನು ಲೂಟಿ ಮಾಡಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದರು.</p><p>ಇಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಜನರನ್ನು ಲೂಟಿ ಮಾಡುವ ಯಾವುದೇ ಅವಕಾಶವನ್ನು ಕಾಂಗ್ರೆಸ್ ಬಿಟ್ಟಿರಲಿಲ್ಲ. ವಾರ್ಷಿಕ ₹2 ಲಕ್ಷ ಆದಾಯ ಹೊಂದಿದ್ದ ಕುಟುಂಬಗಳ ಮೇಲೆ ಕಾಂಗ್ರೆಸ್ ತೆರಿಗೆ ವಿಧಿಸಿತ್ತು. ಆದರೆ, ನಮ್ಮ ಸರ್ಕಾರವು ಆ ಮಿತಿಯನ್ನು ₹12 ಲಕ್ಷಕ್ಕೆ ಹೆಚ್ಚಿಸಿತು’ ಎಂದು ಹೇಳಿದರು.</p><p>‘ನಾವು ಸಿಮೆಂಟ್ ದರವನ್ನು ಇಳಿಸಿದರೂ ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ತನ್ನದೇ ಆದ ತೆರಿಗೆಯನ್ನು ವಿಧಿಸಿತ್ತು. ಈಗ ಜಿಎಸ್ಟಿ ಕಡಿತಗೊಳಿಸುವ ಮೂಲಕ ದೇಶದಾದ್ಯಂತ ಬೆಲೆ ಇಳಿಕೆಯಾಗಿದೆ. ಆದರೆ, ಕಾಂಗ್ರೆಸ್ ಇದನ್ನು ಟೀಕಿಸುತ್ತಿದೆ’ ಎಂದರು.</p><p>ಮುಂದುವರಿದು, ‘ಹಲವು ದಶಕಗಳಿಂದ ಬಡತನದಲ್ಲಿ ಮುಳುಗಿದ್ದ ಒಡಿಶಾ ಈಗ ಸಮೃದ್ಧಿಯ ಹಾದಿಯಲ್ಲಿದೆ. ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ಒಡಿಶಾ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ನಮ್ಮ ಸರ್ಕಾರ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಸಬಲೀಕರಣದತ್ತ ಗಮನಹರಿಸಿದೆ’ ಎಂದು ಹೇಳಿದರು.</p><p> ‘ಚಿಪ್ನಿಂದ ಹಿಡಿದು ಹಡಗಿನವರೆಗೆ ಎಲ್ಲ ಕ್ಷೇತ್ರಗಳಲ್ಲೂ ಭಾರತವು ಸ್ವಾವಲಂಬಿಯಾಗಬೇಕೆಂಬುವುದು ನಮ್ಮ ಸಂಕಲ್ಪವಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಾರ್ಸುಗುಡ(ಒಡಿಶಾ):</strong> ‘ಕಡಿಮೆ ಆದಾಯ ಹೊಂದಿದ್ದ ಕುಟುಂಬಗಳ ಮೇಲೆಯೂ ತೆರಿಗೆ ಹೇರುವ ಮೂಲಕ ಕಾಂಗ್ರೆಸ್ ದೇಶದ ಜನರನ್ನು ಲೂಟಿ ಮಾಡಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದರು.</p><p>ಇಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಜನರನ್ನು ಲೂಟಿ ಮಾಡುವ ಯಾವುದೇ ಅವಕಾಶವನ್ನು ಕಾಂಗ್ರೆಸ್ ಬಿಟ್ಟಿರಲಿಲ್ಲ. ವಾರ್ಷಿಕ ₹2 ಲಕ್ಷ ಆದಾಯ ಹೊಂದಿದ್ದ ಕುಟುಂಬಗಳ ಮೇಲೆ ಕಾಂಗ್ರೆಸ್ ತೆರಿಗೆ ವಿಧಿಸಿತ್ತು. ಆದರೆ, ನಮ್ಮ ಸರ್ಕಾರವು ಆ ಮಿತಿಯನ್ನು ₹12 ಲಕ್ಷಕ್ಕೆ ಹೆಚ್ಚಿಸಿತು’ ಎಂದು ಹೇಳಿದರು.</p><p>‘ನಾವು ಸಿಮೆಂಟ್ ದರವನ್ನು ಇಳಿಸಿದರೂ ಹಿಮಾಚಲದಲ್ಲಿ ಕಾಂಗ್ರೆಸ್ ಸರ್ಕಾರ ತನ್ನದೇ ಆದ ತೆರಿಗೆಯನ್ನು ವಿಧಿಸಿತ್ತು. ಈಗ ಜಿಎಸ್ಟಿ ಕಡಿತಗೊಳಿಸುವ ಮೂಲಕ ದೇಶದಾದ್ಯಂತ ಬೆಲೆ ಇಳಿಕೆಯಾಗಿದೆ. ಆದರೆ, ಕಾಂಗ್ರೆಸ್ ಇದನ್ನು ಟೀಕಿಸುತ್ತಿದೆ’ ಎಂದರು.</p><p>ಮುಂದುವರಿದು, ‘ಹಲವು ದಶಕಗಳಿಂದ ಬಡತನದಲ್ಲಿ ಮುಳುಗಿದ್ದ ಒಡಿಶಾ ಈಗ ಸಮೃದ್ಧಿಯ ಹಾದಿಯಲ್ಲಿದೆ. ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ಒಡಿಶಾ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ನಮ್ಮ ಸರ್ಕಾರ ಬಡವರು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಸಬಲೀಕರಣದತ್ತ ಗಮನಹರಿಸಿದೆ’ ಎಂದು ಹೇಳಿದರು.</p><p> ‘ಚಿಪ್ನಿಂದ ಹಿಡಿದು ಹಡಗಿನವರೆಗೆ ಎಲ್ಲ ಕ್ಷೇತ್ರಗಳಲ್ಲೂ ಭಾರತವು ಸ್ವಾವಲಂಬಿಯಾಗಬೇಕೆಂಬುವುದು ನಮ್ಮ ಸಂಕಲ್ಪವಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>