<p><strong>ಮುಂಬೈ:</strong> 24 ವರ್ಷದ ಯುವಕನೊಬ್ಬ ಮಾಜಿ ಪ್ರೇಯಸಿಯನ್ನು ಬೆನ್ನಟ್ಟಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ತಾನೂ ಕತ್ತು ಸೀಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇಂದ್ರ ಮುಂಬೈನಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಮುಂಬೈ | ₹252 ಕೋಟಿ ಮೌಲ್ಯದ ಮಾದಕವಸ್ತು ವಶ ಪ್ರಕರಣ: ಪ್ರಮುಖ ಆರೋಪಿ ಬಂಧನ.<p>ಸೋನು ಬರಾಯಿ ಎಂಬಾತ ಈ ಕೃತ್ಯ ಎಸಗಿದ್ದು, ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಮನೀಷಾ ಯಾದವ್ (24) ಎಂಬವರ ಮೇಲೆ ಕಾಲಾಚೌಕಿ ಪ್ರದೇಶದಲ್ಲಿ ರಸ್ತೆಯಲ್ಲೇ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.</p><p>ಘಟನೆಯಲ್ಲಿ ಮನೀಷಾಗೆ ತೀವ್ರ ಗಾಯಗಳಾಗಿದ್ದು, ಬೈಕುಲದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.</p><p>ಬರಾಯಿಗೆ ಇನ್ನೊಂದು ಸಂಬಂಧ ಇರುವ ಶಂಕೆ ಜಗಳಕ್ಕೆ ಕಾರಣವಾಗಿ ಇವರಿಬ್ಬರು ಸ್ನೇಹವನ್ನು ಅಂತ್ಯಗೊಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.</p>.ಮುಂಬೈ | ಸಿಆರ್ಜೆಡ್ ಮಿತಿ ಕಡಿತ ಪ್ರಸ್ತಾವಕ್ಕೆ ವಿರೋಧ: ಮಧ್ಯಪ್ರವೇಶಿಸಿದ ಪಿಎಂಒ.<p>ಶುಕ್ರವಾರ ಬೆಳಿಗ್ಗೆ ಭೇಟಿಯಾಗಬೇಕು ಎಂದು ಮನೀಷಾರನ್ನು ಕರೆಸಿಕೊಂಡಿದ್ದ ಬರಾಯಿ ಚಾಕು ಹಿಡಿದುಕೊಂಡೇ ಹೋಗಿದ್ದ. ಮನೀಷಾ ಬಂದಾಗ ಎರಡ್ಮೂರು ಬಾರಿ ಇರಿದಿದ್ದಾನೆ. ಈ ವೇಳೆ ಜೀವ ಉಳಿಸಿಕೊಳ್ಳಲು ಆವರು ಸ್ಥಳದಲ್ಲಿದ್ದ ನರ್ಸಿಂಗ್ ಹೋಮ್ ಒಳಗೆ ಓಡಿದ್ದಾರೆ. ನರ್ಸಿಂಗ್ ಹೋಮ್ ಒಳಗೂ ಅವರನ್ನು ಹಿಡಿದು ಹಲ್ಲೆ ಮುಂದುವರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.</p><p>ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಲು ಮುಂದಾದವರೂ, ಆರೋಪಿ ಆಯುಧಪಾಣಿಯಾಗಿದ್ದರಿಂದ ಹಿಂಜರಿದಿದ್ದಾರೆ. ಈ ವೇಳೆ ಯಾರೋ ಒಬ್ಬರು ಆತನ ಮೇಲೆ ಕಲ್ಲು ಎಸೆದು, ಕೋಲಿನಿಂದ ಹೊಡೆದು ತಪ್ಪಿಸಿಕೊಳ್ಳದಂತೆ ನೋಡಿಕೊಂಡಿದ್ದಾರೆ.</p>.ಮುಂಬೈ | ಪ್ರತ್ಯೇಕ ಬೆಂಕಿ ಅವಘಡ: ಏಳು ಮಂದಿ ಸಾವು.<p>ಈ ಬೇಳೆ ಬರಾಯಿ ಕತ್ತು ಸೀಳಿಕೊಂಡಿದ್ದಾನೆ. ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ನರ್ಸಿಂಗ್ ಹೋಮ್ನಲ್ಲಿ ಆತ ಹಲ್ಲೆ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.</p><p>ಹಲ್ಲೆಕೋರನಿಂದ ಸಂತ್ರಸ್ತೆಯನ್ನು ಕಾಪಾಡಲು ಕೆಲವರು ಯತ್ನಿಸುವ ಹಾಗೂ ಕೆಲವರು ಆರೋಪಿಗೆ ಹೊಡೆಯುವುದು, ಕಲ್ಲೆಸೆಯುವುದು ವಿಡಿಯೊದಲ್ಲಿ ದಾಖಲಾಗಿದೆ.</p>.Bengaluru Cyber Crime: ‘ಗಂಟು’ ಸುಲಿಗೆಗೆ ಮುಂಬೈ ನಂಟು.<p>ಸಮೀಪದಲ್ಲಿ ಕರ್ತವ್ಯನಿರತರಾಗಿದ್ದ ಟ್ರಾಫಿಕ್ ಪೊಲೀಸ್ ಹಾಗೂ ಇನ್ನಿಬ್ಬರು ಸೇರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ.</p><p>ನರ್ಸಿಂಗ್ ಹೋಮ್ನ ಪ್ರವೇಶದಲ್ಲಿ ರಕ್ತದಲ್ಲಿ ತೊಯ್ದು ಬಿದ್ದಿದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.</p><p>ಎರಡು ಮೃತದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.</p> .ಮುಂಬೈ: ರೂಪಾಯಿ ದರ ಕನಿಷ್ಠ ಮಟ್ಟಕ್ಕೆ ಇಳಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> 24 ವರ್ಷದ ಯುವಕನೊಬ್ಬ ಮಾಜಿ ಪ್ರೇಯಸಿಯನ್ನು ಬೆನ್ನಟ್ಟಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ತಾನೂ ಕತ್ತು ಸೀಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇಂದ್ರ ಮುಂಬೈನಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಮುಂಬೈ | ₹252 ಕೋಟಿ ಮೌಲ್ಯದ ಮಾದಕವಸ್ತು ವಶ ಪ್ರಕರಣ: ಪ್ರಮುಖ ಆರೋಪಿ ಬಂಧನ.<p>ಸೋನು ಬರಾಯಿ ಎಂಬಾತ ಈ ಕೃತ್ಯ ಎಸಗಿದ್ದು, ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಮನೀಷಾ ಯಾದವ್ (24) ಎಂಬವರ ಮೇಲೆ ಕಾಲಾಚೌಕಿ ಪ್ರದೇಶದಲ್ಲಿ ರಸ್ತೆಯಲ್ಲೇ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.</p><p>ಘಟನೆಯಲ್ಲಿ ಮನೀಷಾಗೆ ತೀವ್ರ ಗಾಯಗಳಾಗಿದ್ದು, ಬೈಕುಲದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.</p><p>ಬರಾಯಿಗೆ ಇನ್ನೊಂದು ಸಂಬಂಧ ಇರುವ ಶಂಕೆ ಜಗಳಕ್ಕೆ ಕಾರಣವಾಗಿ ಇವರಿಬ್ಬರು ಸ್ನೇಹವನ್ನು ಅಂತ್ಯಗೊಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.</p>.ಮುಂಬೈ | ಸಿಆರ್ಜೆಡ್ ಮಿತಿ ಕಡಿತ ಪ್ರಸ್ತಾವಕ್ಕೆ ವಿರೋಧ: ಮಧ್ಯಪ್ರವೇಶಿಸಿದ ಪಿಎಂಒ.<p>ಶುಕ್ರವಾರ ಬೆಳಿಗ್ಗೆ ಭೇಟಿಯಾಗಬೇಕು ಎಂದು ಮನೀಷಾರನ್ನು ಕರೆಸಿಕೊಂಡಿದ್ದ ಬರಾಯಿ ಚಾಕು ಹಿಡಿದುಕೊಂಡೇ ಹೋಗಿದ್ದ. ಮನೀಷಾ ಬಂದಾಗ ಎರಡ್ಮೂರು ಬಾರಿ ಇರಿದಿದ್ದಾನೆ. ಈ ವೇಳೆ ಜೀವ ಉಳಿಸಿಕೊಳ್ಳಲು ಆವರು ಸ್ಥಳದಲ್ಲಿದ್ದ ನರ್ಸಿಂಗ್ ಹೋಮ್ ಒಳಗೆ ಓಡಿದ್ದಾರೆ. ನರ್ಸಿಂಗ್ ಹೋಮ್ ಒಳಗೂ ಅವರನ್ನು ಹಿಡಿದು ಹಲ್ಲೆ ಮುಂದುವರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.</p><p>ಸ್ಥಳದಲ್ಲಿದ್ದವರು ಮಧ್ಯಪ್ರವೇಶಿಸಲು ಮುಂದಾದವರೂ, ಆರೋಪಿ ಆಯುಧಪಾಣಿಯಾಗಿದ್ದರಿಂದ ಹಿಂಜರಿದಿದ್ದಾರೆ. ಈ ವೇಳೆ ಯಾರೋ ಒಬ್ಬರು ಆತನ ಮೇಲೆ ಕಲ್ಲು ಎಸೆದು, ಕೋಲಿನಿಂದ ಹೊಡೆದು ತಪ್ಪಿಸಿಕೊಳ್ಳದಂತೆ ನೋಡಿಕೊಂಡಿದ್ದಾರೆ.</p>.ಮುಂಬೈ | ಪ್ರತ್ಯೇಕ ಬೆಂಕಿ ಅವಘಡ: ಏಳು ಮಂದಿ ಸಾವು.<p>ಈ ಬೇಳೆ ಬರಾಯಿ ಕತ್ತು ಸೀಳಿಕೊಂಡಿದ್ದಾನೆ. ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ನರ್ಸಿಂಗ್ ಹೋಮ್ನಲ್ಲಿ ಆತ ಹಲ್ಲೆ ಮಾಡುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.</p><p>ಹಲ್ಲೆಕೋರನಿಂದ ಸಂತ್ರಸ್ತೆಯನ್ನು ಕಾಪಾಡಲು ಕೆಲವರು ಯತ್ನಿಸುವ ಹಾಗೂ ಕೆಲವರು ಆರೋಪಿಗೆ ಹೊಡೆಯುವುದು, ಕಲ್ಲೆಸೆಯುವುದು ವಿಡಿಯೊದಲ್ಲಿ ದಾಖಲಾಗಿದೆ.</p>.Bengaluru Cyber Crime: ‘ಗಂಟು’ ಸುಲಿಗೆಗೆ ಮುಂಬೈ ನಂಟು.<p>ಸಮೀಪದಲ್ಲಿ ಕರ್ತವ್ಯನಿರತರಾಗಿದ್ದ ಟ್ರಾಫಿಕ್ ಪೊಲೀಸ್ ಹಾಗೂ ಇನ್ನಿಬ್ಬರು ಸೇರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ.</p><p>ನರ್ಸಿಂಗ್ ಹೋಮ್ನ ಪ್ರವೇಶದಲ್ಲಿ ರಕ್ತದಲ್ಲಿ ತೊಯ್ದು ಬಿದ್ದಿದ್ದ ಆರೋಪಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.</p><p>ಎರಡು ಮೃತದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.</p> .ಮುಂಬೈ: ರೂಪಾಯಿ ದರ ಕನಿಷ್ಠ ಮಟ್ಟಕ್ಕೆ ಇಳಿಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>