ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: 3,113 ಕೈದಿಗಳಿಗೆ ಕ್ಷಮಾದಾನ

Last Updated 17 ಏಪ್ರಿಲ್ 2023, 14:07 IST
ಅಕ್ಷರ ಗಾತ್ರ

ಬ್ಯಾಂಕಾಕ್ (ಎ.ಪಿ): ಹೊಸ ವರ್ಷದ ಆಚರಣೆ ನಿಮಿತ್ತ ಮ್ಯಾನ್ಮಾರ್‌ನ ಸೇನಾ ಸರ್ಕಾರವು ಸೋಮವಾರ ಸುಮಾರು 3,113 ಕೈದಿಗಳಿಗೆ ಕ್ಷಮಾದಾನವನ್ನು ನೀಡಿದ್ದು, ಬಿಡುಗಡೆಗೆ ಕ್ರಮವಹಿಸಿದೆ.

ಆದರೆ, ಸೇನಾ ದಂಗೆಯನ್ನು ವಿರೋಧಿಸಿದ ಕಾರಣಕ್ಕೆ ಬಂಧಿಸಲಾಗಿರುವ ರಾಜಕೀಯ ಕೈದಿಗಳೂ ಇದರಲ್ಲಿ ಸೇರಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

‘ಸೇನೆ ಆಡಳಿತ ನಡೆಸಲು ರಚಿಸಿರುವ ರಾಜ್ಯ ಆಡಳಿತ ಮಂಡಳಿಯು 3,113 ಕೈದಿಗಳಿಗೆ ಕ್ಷಮಾದಾನ ನೀಡಿದೆ. ಇವರಲ್ಲಿ 98 ವಿದೇಶಿಯರು ಸೇರಿದ್ದಾರೆ‘ ಎಂದು ವರದಿ ತಿಳಿಸಿದೆ.

ಸೇನಾ ದಂಗೆ ವಿರೋಧಿಸಿದ ಕಾರಣ ಬಂಧಿಸಲಾಗಿರುವ 17,460 ರಾಜಕೀಯ ಕೈದಿಗಳಿದ್ದಾರೆ. ಆಂಗ್ ಸಾನ್ ಸೂ ಕಿ ಪದಚ್ಯುತಿ ಬಳಿಕ ಫೆ.1, 2021ರಿಂದ ಇಲ್ಲಿ ಸೇನಾ ಆಡಳಿತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT