<p><strong>ಬೆಂಗಳೂರು:</strong> ಮಹಾರಾಷ್ಟ್ರದ ಮರಾಠಾವಾಡದ ನಾಂದೇಡ್ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ, ಸಂತುಕ್ರಾವ್ ಹಂಬರ್ಡೆ (Santuk Hambarde) ಅವರು ವಿಜಯಶಾಲಿಯಾಗಿದ್ದಾರೆ.</p><p>ಕಾಂಗ್ರೆಸ್ನ ರವೀಂದ್ರ ಚೌಹಾಣ್ ಅವರರನ್ನು ಹಂಬರ್ಡೆ ಅವರು 39,365 ಮತಗಳ ಅಂತರದಿಂದ ಮಣಿಸಿದ್ದಾರೆ.</p><p>ಕಣದಲ್ಲಿ ವಿಬಿಎ ಪಕ್ಷದ ಅವಿನಾಶ್ ಬೋಸಿಕರ್ (3ನೇ ಸ್ಥಾನ) ಸೇರಿದಂತೆ 23 ಜನ ಇದ್ದರು.</p><p>ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ವಸಂತರಾವ್ ಚೌಹಾಣ್ ಅವರು 60 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಸಂಸದರಾಗಿದ್ದರು. ಆದರೆ ಆಗಸ್ಟ್ನಲ್ಲಿ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ತೆರವಾಗಿದ್ದ ಈ ಕ್ಷೇತ್ರಕ್ಕೆ ನವೆಂಬರ್ 20 ರಂದು ಉಪ ಚುನಾವಣೆ ನಡೆದಿತ್ತು.</p><p>ವಸಂತರಾವ್ ಅವರ ಮಗ ರವೀಂದ್ರ ಚೌಹಾಣ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಅನುಕಂಪ ಅವರ ಕೈ ಹಿಡಿಯಲಿಲ್ಲ.</p><p>ವೃತ್ತಿಯಲ್ಲಿ ವೈದ್ಯರಾಗಿರುವ ನಾಂದೇಡ್ ನೂತನ ಸಂಸದ ಸಂತುಕ್ರಾವ್ ಹಂಬರ್ಡೆ ಅವರು ನಾಂದೇಡ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೋಹನ್ ಹಂಬರ್ಡೆ ಅವರ ಸಹೋದರನಾಗಿದ್ದಾರೆ.</p><p>ಈ ಮೂಲಕ ಲೋಕಸಭೆಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಂಡಂತಾಗಿದೆ.</p>.ಇನ್ಸ್ಟಾಗ್ರಾಂನಲ್ಲಿ 56 ಲಕ್ಷ ಫಾಲೋವರ್ಸ್.. ಚುನಾವಣೆಯಲ್ಲಿ ಗಳಿಸಿದ್ದು 137 ಮತ!.ಮಹಾರಾಷ್ಟ್ರ ಚುನಾವಣೆ: ಹತ್ಯೆಯಾದ ಬಾಬಾ ಸಿದ್ದಿಕಿ ಮಗನಿಗೆ ಮುಂಬೈನಲ್ಲಿ ಸೋಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಹಾರಾಷ್ಟ್ರದ ಮರಾಠಾವಾಡದ ನಾಂದೇಡ್ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಡಾ, ಸಂತುಕ್ರಾವ್ ಹಂಬರ್ಡೆ (Santuk Hambarde) ಅವರು ವಿಜಯಶಾಲಿಯಾಗಿದ್ದಾರೆ.</p><p>ಕಾಂಗ್ರೆಸ್ನ ರವೀಂದ್ರ ಚೌಹಾಣ್ ಅವರರನ್ನು ಹಂಬರ್ಡೆ ಅವರು 39,365 ಮತಗಳ ಅಂತರದಿಂದ ಮಣಿಸಿದ್ದಾರೆ.</p><p>ಕಣದಲ್ಲಿ ವಿಬಿಎ ಪಕ್ಷದ ಅವಿನಾಶ್ ಬೋಸಿಕರ್ (3ನೇ ಸ್ಥಾನ) ಸೇರಿದಂತೆ 23 ಜನ ಇದ್ದರು.</p><p>ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ವಸಂತರಾವ್ ಚೌಹಾಣ್ ಅವರು 60 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಸಂಸದರಾಗಿದ್ದರು. ಆದರೆ ಆಗಸ್ಟ್ನಲ್ಲಿ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ತೆರವಾಗಿದ್ದ ಈ ಕ್ಷೇತ್ರಕ್ಕೆ ನವೆಂಬರ್ 20 ರಂದು ಉಪ ಚುನಾವಣೆ ನಡೆದಿತ್ತು.</p><p>ವಸಂತರಾವ್ ಅವರ ಮಗ ರವೀಂದ್ರ ಚೌಹಾಣ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಅನುಕಂಪ ಅವರ ಕೈ ಹಿಡಿಯಲಿಲ್ಲ.</p><p>ವೃತ್ತಿಯಲ್ಲಿ ವೈದ್ಯರಾಗಿರುವ ನಾಂದೇಡ್ ನೂತನ ಸಂಸದ ಸಂತುಕ್ರಾವ್ ಹಂಬರ್ಡೆ ಅವರು ನಾಂದೇಡ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೋಹನ್ ಹಂಬರ್ಡೆ ಅವರ ಸಹೋದರನಾಗಿದ್ದಾರೆ.</p><p>ಈ ಮೂಲಕ ಲೋಕಸಭೆಯಲ್ಲಿ ಒಂದು ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಂಡಂತಾಗಿದೆ.</p>.ಇನ್ಸ್ಟಾಗ್ರಾಂನಲ್ಲಿ 56 ಲಕ್ಷ ಫಾಲೋವರ್ಸ್.. ಚುನಾವಣೆಯಲ್ಲಿ ಗಳಿಸಿದ್ದು 137 ಮತ!.ಮಹಾರಾಷ್ಟ್ರ ಚುನಾವಣೆ: ಹತ್ಯೆಯಾದ ಬಾಬಾ ಸಿದ್ದಿಕಿ ಮಗನಿಗೆ ಮುಂಬೈನಲ್ಲಿ ಸೋಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>