<p>ಯುವ ಪೀಳಿಗೆಗೆ ಸೃಜನಶೀಲತೆ, ಸ್ವಂತಿಕೆ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಧೈ ಅಕ್ಷರ' ವತಿಯಿಂದ ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆ ಆಯೋಜಿಸಿದೆ. </p><p>ಅರ್ಥಪೂರ್ಣ ಶಬ್ದಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರೇರಣೆ ನೀಡುವುದರ ಜೊತೆಗೆ ಬರವಣಿಗೆ ಕೌಶಲ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಪೋಸ್ಟ್ ಮಾಸ್ಟರ್ ಜನರಲ್ ಕೃಷ್ಣ ಕುಮಾರ್ ಹೇಳಿದ್ದಾರೆ.</p><p><strong>ಯೋಜನೆಯ ಸೂಚನೆಗಳು ಹೀಗಿವೆ: </strong></p><p>ಭಾಗವಹಿಸುವವರು ನೀಡಿರುವ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಪತ್ರವನ್ನು ಸಂಬಂಧಿತ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ಗೆ ಬರೆಯುತ್ತಾರೆ, ಅವರು ಶಾರ್ಟ್ಲಿಸ್ಟ್ ಮಾಡಿದರೆ ನಗದು ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ, ಮೊದಲು ರಾಜ್ಯ ಮಟ್ಟದಲ್ಲಿ ಮತ್ತು ನಂತರ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ.</p><ul><li><p>ಬರೆದ ಪತ್ರವನ್ನು ಲಕೋಟೆ ಅಥವಾ ಅಂಚೆ ಕಾರ್ಡ್ಗಳ ಮೂಲಕ ಮಾತ್ರ ಕಳುಹಿಸಲು ಅವಕಾಶ.</p></li><li><p> 18 ವರ್ಷ ಅಥವಾ ಅದಕ್ಕಿಂತ ಮೇಲ್ಟಟ್ಟವರಿಗೆ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು.</p></li><li><p>ಇಂಗ್ಲಿಷ್, ಹಿಂದಿ ಅಥವಾ ಯಾವುದೇ ಸ್ಥಳೀಯ ಭಾಷೆಯಲ್ಲಿ 500ರಿಂದ 1000 ಪದಗಳಲ್ಲಿ ಕೈಬರಹವನ್ನು ಪತ್ರದ ಮೂಲಕ ಕಳುಹಿಸಬಹುದು. </p></li><li><p>ಸ್ಪರ್ಧೆಯಲ್ಲಿ ಭಾಗವಹಿಸುವವರ ಪೂರ್ಣ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಶಾಲೆ/ಕಾಲೇಜು ಹೆಸರನ್ನು ಒಳಗೊಂಡಿರಬೇಕು.</p></li><li><p>ಇದೇ ಡಿ. 8ರೊಳಗೆ ಆಯಾ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ಗೆ ನೀವು ಬರೆದ ಪತ್ರವನ್ನು ಕಳುಹಿಸಬೇಕು.</p> </li><li><p>ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಪತ್ರಗಳಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.</p></li><li><p>ಸ್ಪರ್ಧೆಯ ವಿಜೇತರಿಗೆ ರಾಜ್ಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುವುದು. ಆಯ್ಕೆಯಾದ ಅತ್ಯುತ್ತಮ ಪತ್ರಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ₹25,000, ₹10,000 ಮತ್ತು ₹5,000 ನೀಡಲಾಗುತ್ತದೆ.</p></li><li><p>ರಾಷ್ಟ್ರೀಯ ಮಟ್ಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಆಯ್ಕೆಯಾದ ಅತ್ಯುತ್ತಮ ಪತ್ರಗಳಿಗೆ ₹50,000 , ₹25,000 ಮತ್ತು ₹10,000 ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಪೋಸ್ಟ್ ಮಾಸ್ಟರ್ ಜನರಲ್ ಹೇಳಿದ್ದಾರೆ.</p></li></ul>.<p><strong>ಹೆಚ್ಚಿನ ಮಾಹಿತಿಗಾಗಿ</strong> :<a href="https://www.indiapost.gov.in/api/documents/file/U2FsdGVkX1-4QwWi8dSOZVLOxhv_ehYXFddJ5nDVD19xsHjD5zAnOdtKHZqIXexhewAkz6fByDiulJnqD4x7xA">https://www.indiapost.gov.in/api/documents/file/U2FsdGVkX1-4QwWi8dSOZVLOxhv_ehYXFddJ5nDVD19xsHjD5zAnOdtKHZqIXexhewAkz6fByDiulJnqD4x7xA</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯುವ ಪೀಳಿಗೆಗೆ ಸೃಜನಶೀಲತೆ, ಸ್ವಂತಿಕೆ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಧೈ ಅಕ್ಷರ' ವತಿಯಿಂದ ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆ ಆಯೋಜಿಸಿದೆ. </p><p>ಅರ್ಥಪೂರ್ಣ ಶಬ್ದಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರೇರಣೆ ನೀಡುವುದರ ಜೊತೆಗೆ ಬರವಣಿಗೆ ಕೌಶಲ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಪೋಸ್ಟ್ ಮಾಸ್ಟರ್ ಜನರಲ್ ಕೃಷ್ಣ ಕುಮಾರ್ ಹೇಳಿದ್ದಾರೆ.</p><p><strong>ಯೋಜನೆಯ ಸೂಚನೆಗಳು ಹೀಗಿವೆ: </strong></p><p>ಭಾಗವಹಿಸುವವರು ನೀಡಿರುವ ವಿಷಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಪತ್ರವನ್ನು ಸಂಬಂಧಿತ ಮುಖ್ಯ ಪೋಸ್ಟ್ಮಾಸ್ಟರ್ ಜನರಲ್ಗೆ ಬರೆಯುತ್ತಾರೆ, ಅವರು ಶಾರ್ಟ್ಲಿಸ್ಟ್ ಮಾಡಿದರೆ ನಗದು ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ, ಮೊದಲು ರಾಜ್ಯ ಮಟ್ಟದಲ್ಲಿ ಮತ್ತು ನಂತರ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ.</p><ul><li><p>ಬರೆದ ಪತ್ರವನ್ನು ಲಕೋಟೆ ಅಥವಾ ಅಂಚೆ ಕಾರ್ಡ್ಗಳ ಮೂಲಕ ಮಾತ್ರ ಕಳುಹಿಸಲು ಅವಕಾಶ.</p></li><li><p> 18 ವರ್ಷ ಅಥವಾ ಅದಕ್ಕಿಂತ ಮೇಲ್ಟಟ್ಟವರಿಗೆ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಬಹುದು.</p></li><li><p>ಇಂಗ್ಲಿಷ್, ಹಿಂದಿ ಅಥವಾ ಯಾವುದೇ ಸ್ಥಳೀಯ ಭಾಷೆಯಲ್ಲಿ 500ರಿಂದ 1000 ಪದಗಳಲ್ಲಿ ಕೈಬರಹವನ್ನು ಪತ್ರದ ಮೂಲಕ ಕಳುಹಿಸಬಹುದು. </p></li><li><p>ಸ್ಪರ್ಧೆಯಲ್ಲಿ ಭಾಗವಹಿಸುವವರ ಪೂರ್ಣ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಶಾಲೆ/ಕಾಲೇಜು ಹೆಸರನ್ನು ಒಳಗೊಂಡಿರಬೇಕು.</p></li><li><p>ಇದೇ ಡಿ. 8ರೊಳಗೆ ಆಯಾ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ಗೆ ನೀವು ಬರೆದ ಪತ್ರವನ್ನು ಕಳುಹಿಸಬೇಕು.</p> </li><li><p>ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಪತ್ರಗಳಿಗೆ ನಗದು ಬಹುಮಾನಗಳನ್ನು ನೀಡಲಾಗುತ್ತದೆ.</p></li><li><p>ಸ್ಪರ್ಧೆಯ ವಿಜೇತರಿಗೆ ರಾಜ್ಯ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುವುದು. ಆಯ್ಕೆಯಾದ ಅತ್ಯುತ್ತಮ ಪತ್ರಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ₹25,000, ₹10,000 ಮತ್ತು ₹5,000 ನೀಡಲಾಗುತ್ತದೆ.</p></li><li><p>ರಾಷ್ಟ್ರೀಯ ಮಟ್ಟದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿ ಆಯ್ಕೆಯಾದ ಅತ್ಯುತ್ತಮ ಪತ್ರಗಳಿಗೆ ₹50,000 , ₹25,000 ಮತ್ತು ₹10,000 ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಪೋಸ್ಟ್ ಮಾಸ್ಟರ್ ಜನರಲ್ ಹೇಳಿದ್ದಾರೆ.</p></li></ul>.<p><strong>ಹೆಚ್ಚಿನ ಮಾಹಿತಿಗಾಗಿ</strong> :<a href="https://www.indiapost.gov.in/api/documents/file/U2FsdGVkX1-4QwWi8dSOZVLOxhv_ehYXFddJ5nDVD19xsHjD5zAnOdtKHZqIXexhewAkz6fByDiulJnqD4x7xA">https://www.indiapost.gov.in/api/documents/file/U2FsdGVkX1-4QwWi8dSOZVLOxhv_ehYXFddJ5nDVD19xsHjD5zAnOdtKHZqIXexhewAkz6fByDiulJnqD4x7xA</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>