ಇಂಡೋ–ಪಾಕ್ ಯುದ್ಧದ ವೇಳೆ ಗುಜರಾತ್ನ ಡಿಯು ಬಳಿ ಪಾಕಿಸ್ತಾನದ ಜಲಾಂತರ್ಗಾಮಿ ಹಾಂಗೋರ್ನ ದಾಳಿಗೆ ಒಳಗಾಗಿದ್ದ ಐಎನ್ಎಸ್ ಖುಕ್ರಿ, ಸಮುದ್ರದಲ್ಲಿ ಮುಳುಗಡೆಯಾಗಿತ್ತು. 1971ರ ಡಿ. 9ರಂದು ನಡೆದಿದ್ದ ಈ ಘಟನೆಯಲ್ಲಿ ನೌಕೆಯ ಕ್ಯಾಪ್ಟನ್ ಮಹೇಂದ್ರ ನಾಥ್ ಮುಲ್ಲಾ ಸೇರಿದಂತೆ 18 ಅಧಿಕಾರಿಗಳು ಮತ್ತು 176 ಸೈನಿಕರು ಹುತಾತ್ಮಕರಾಗಿದ್ದರು. 6 ಅಧಿಕಾರಿಗಳು ಮತ್ತು 61 ಸೈನಿಕರು ದುರಂತದಲ್ಲಿ ಬದುಕುಳಿದಿದ್ದರು.