<p><strong>ನವದೆಹಲಿ</strong>: ಭಾರತದ ಸ್ವದೇಶಿ ಚಳವಳಿಯನ್ನು ವಿವರಿಸುವ ಎರಡು ಹೊಸ ಪಠ್ಯಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ಪರಿಚಯಿಸಿದೆ. 1905ರಿಂದ ಆರಂಭಗೊಂಡು ಪ್ರಧಾನಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ ಆಗುವ ಬಗ್ಗೆ ಕರೆ ನೀಡಿದವರೆಗಿನ ಮಾಹಿತಿಗಳನ್ನು ಪಠ್ಯಗಳಲ್ಲಿ ಅಳವಡಿಸಲಾಗಿದೆ.</p>.<p>6ರಿಂದ 8ನೇ ತರಗತಿವರೆಗೆ ‘ಸ್ವದೇಶಿ’: ವೋಕಲ್ ಫಾರ್ ಲೋಕಲ್’ ಮತ್ತು 9ರಿಂದ 12ನೇ ತರಗತಿವರೆಗೆ ‘ಸ್ವದೇಶಿ: ಆತ್ಮನಿರ್ಭರ ಭಾರತಕ್ಕಾಗಿ’ ಎಂಬ ಹೆಸರಿನ ಪಠ್ಯಗಳನ್ನು ಸೇರಿಸಲಾಗಿದೆ. ‘ಆತ್ಮನಿರ್ಭರ ಭಾರತಕ್ಕಾಗಿ’ ಪಠ್ಯದಲ್ಲಿ ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ‘ವಿಕಸಿಕ ಭಾರತ’ದ ಪರಿಕಲ್ಪನೆ ಕುರಿತು ಮಾಡಿದ ಭಾಷಣದ ಆಯ್ದ ಭಾಗಗಳನ್ನು ಸೇರಿಸಲಾಗಿದೆ.</p>.<p>ರಾಷ್ಟ್ರೀಯ ಪುರಸ್ಕಾರ ಪಡೆದ ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ಅವರು ಕಳೆದ ತಿಂಗಳು ಮಾತುಕತೆ ನಡೆಸಿದ್ದರು. ಈ ವೇಳೆ, ‘ಮಕ್ಕಳಿಗೆ ನೀವು ಹೋಂವರ್ಕ್ ನೀಡುತ್ತೀರಿ. ಇದರಲ್ಲಿ ಸಣ್ಣ ಬದಲಾವಣೆ ಮಾಡೋಣ. ನಾನು ನಿಮಗೆ ಹೋಂವರ್ಕ್ ನೀಡುತ್ತೇನೆ. ಸ್ವದೇಶಿ ವಸ್ತುಗಳ ಬಗ್ಗೆ ಮಕ್ಕಳೊಂದಿಗೆ ಸೇರಿಕೊಂಡು ಪ್ರಚಾರ ಅಭಿಯಾನ ನಡೆಸಿ’ ಎಂದಿದ್ದರು. ಈಗ ಎನ್ಸಿಇಆರ್ಟಿ ಈ ಹೊಸ ಪಠ್ಯಗಳನ್ನು ಪರಿಚಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಭಾರತದ ಸ್ವದೇಶಿ ಚಳವಳಿಯನ್ನು ವಿವರಿಸುವ ಎರಡು ಹೊಸ ಪಠ್ಯಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ಪರಿಚಯಿಸಿದೆ. 1905ರಿಂದ ಆರಂಭಗೊಂಡು ಪ್ರಧಾನಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ ಆಗುವ ಬಗ್ಗೆ ಕರೆ ನೀಡಿದವರೆಗಿನ ಮಾಹಿತಿಗಳನ್ನು ಪಠ್ಯಗಳಲ್ಲಿ ಅಳವಡಿಸಲಾಗಿದೆ.</p>.<p>6ರಿಂದ 8ನೇ ತರಗತಿವರೆಗೆ ‘ಸ್ವದೇಶಿ’: ವೋಕಲ್ ಫಾರ್ ಲೋಕಲ್’ ಮತ್ತು 9ರಿಂದ 12ನೇ ತರಗತಿವರೆಗೆ ‘ಸ್ವದೇಶಿ: ಆತ್ಮನಿರ್ಭರ ಭಾರತಕ್ಕಾಗಿ’ ಎಂಬ ಹೆಸರಿನ ಪಠ್ಯಗಳನ್ನು ಸೇರಿಸಲಾಗಿದೆ. ‘ಆತ್ಮನಿರ್ಭರ ಭಾರತಕ್ಕಾಗಿ’ ಪಠ್ಯದಲ್ಲಿ ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ‘ವಿಕಸಿಕ ಭಾರತ’ದ ಪರಿಕಲ್ಪನೆ ಕುರಿತು ಮಾಡಿದ ಭಾಷಣದ ಆಯ್ದ ಭಾಗಗಳನ್ನು ಸೇರಿಸಲಾಗಿದೆ.</p>.<p>ರಾಷ್ಟ್ರೀಯ ಪುರಸ್ಕಾರ ಪಡೆದ ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ಅವರು ಕಳೆದ ತಿಂಗಳು ಮಾತುಕತೆ ನಡೆಸಿದ್ದರು. ಈ ವೇಳೆ, ‘ಮಕ್ಕಳಿಗೆ ನೀವು ಹೋಂವರ್ಕ್ ನೀಡುತ್ತೀರಿ. ಇದರಲ್ಲಿ ಸಣ್ಣ ಬದಲಾವಣೆ ಮಾಡೋಣ. ನಾನು ನಿಮಗೆ ಹೋಂವರ್ಕ್ ನೀಡುತ್ತೇನೆ. ಸ್ವದೇಶಿ ವಸ್ತುಗಳ ಬಗ್ಗೆ ಮಕ್ಕಳೊಂದಿಗೆ ಸೇರಿಕೊಂಡು ಪ್ರಚಾರ ಅಭಿಯಾನ ನಡೆಸಿ’ ಎಂದಿದ್ದರು. ಈಗ ಎನ್ಸಿಇಆರ್ಟಿ ಈ ಹೊಸ ಪಠ್ಯಗಳನ್ನು ಪರಿಚಯಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>