<p>ವತ್ತಾರೆ ಪಾರ್ಕಲ್ಲಿ ವಾಕಿಂಗ್ ಮಾಡ್ತಿದ್ದೆ. ಯಾರೋ ಹಿಂದ್ಲಿಂದ ಕರೆದಂಗಾತು, ‘ಹಲೋ, ರೀ ಸ್ವಾಮಿ. ನಿಮ್ಮನ್ನೇ ಕನ್ರೀ ಕರೀತಿರದು’ ಅಂದ್ರು. ತಿರುಗಿ ನೋಡಿದರೆ, ಯಾರೋ ಸಿಲ್ಕ್ ಪಂಚೆ ಉಟ್ಟುಕಂದು, ಕತ್ತಿಗೆ ಗಮಗುಡೋ ಹೂವಿನ ಹಾರ, ತಂಬೂರಿ ಅಡ್ಡಡ್ಡ ನ್ಯಾತಾಕ್ಕ್ಯಂದಿದ್ರು.</p>.<p>‘ಯಾರು ಸ್ವಾಮಿ ತಾವು? ಹಗಲುವೇಷದೋರೆ?’ ಅಂತಂದೆ.</p>.<p>‘ನಾರಾಯಣ, ನಾರಾಯಣ. ಲೇ ಬೊಡ್ಡಿಹೈದ್ನೆ, ನಾನು ನಾರದ ಕಲಾ. ನಿಮಗೆ ಟೆರರಿಷ್ಟುಗಳು ಗೊತ್ತಾತರೆ, ನಾರದ ಕಾಣಕ್ಕಿಲ್ಲವಾ?’ ಅಂತ ಬೇಸರದಿಂದ ಬೋದ್ರು.</p>.<p>‘ತೆಪ್ಪಾತು ಕನ ನಾರದಣ್ಣ. ತಾವು ಇತ್ತಗೆ ಬಂದ ಕಾರಣವೇನು?’ ನಾಟಕದ ಶೈಲಿಯಲ್ಲಿ ಕೇಳಿದೆ.</p>.<p>‘ಭಾರತದಾಗೆ ಪರಿಸ್ಥಿತಿ ಹ್ಯಂಗದೆ ನೋಡಿಕ್ಯಂದು ಬರೋಗು ಅಂತ ಎಲ್ಲಾ ಧರ್ಮದ ದೇವರುಗಳೂ ನನ್ನ ಕಳಿಸ್ಯವ್ರೆ’ ನಾರದರು ಉತ್ತರಿಸಿದರು.</p>.<p>‘ಏನಣೈ ನೋಡದು. ಬುದುವಂತ್ರು, ವೈದ್ಯರೇ ಬದುಕಿಸದು ಬುಟ್ಟು, ಜಾತಿ–ಧರ್ಮ ಅಂತ ಗೆರೆ ಕೊರಕಂದು ಬಾಂಬು ಸಿಡಿಸ್ತಾವರೆ. ಹರಳೆಣ್ಣೆ ಬೀಜದ ಇಕ್ಮದ್ದಾಕಿ ನಮ್ಮುನ್ನೆಲ್ಲಾ ಮ್ಯಾಕೆ ಕಳುಗಿಸೋ ಪ್ಲಾನ್ ಮಾಡ್ತಾವ್ರೆ’ ಅಂದೆ.</p>.<p>‘ಅಲ್ಲ ಕನ್ರಯ್ಯಾ, ಓದಿದ್ದು ನಿಮ್ಮ ಸ್ಕೂಲೇಲಿ, ತಿಂದುದ್ದು ನಿಮ್ಮ ಅನ್ನ, ಕುಡಿದಿದ್ದು ನಿಮ್ಮ ನೀರು, ಉಸಿರಾಡಿದ್ದು ನಿಮ್ಮ ಗಾಳಿ. ವಿದ್ಯಾವಂತರು ಅಂದಾರೇನ್ಲಾ ಇವರ್ನಾ? ಈಗ ವೈಟ್ ಕಾಲರ್ ಭಯೋತ್ಪಾದನೆ ಕಲಿತುಗಂದು ಸೀದಾ ಸ್ವರ್ಗಕ್ಕೆ ಸೇರಿಕ್ಯಬೈದು ಅಂತ ತಿಳಕಂದವ್ರೆ’ ನಾರದರು ನೊಂದ್ಕಂದರು.</p>.<p>‘ನಾರದಣೈ ಅದಕ್ಕೇನು ಕಾರಣ ಅಂತ ನೀವೇ ಹೇಳಬಕು’ ಅಂತಂದೆ.</p>.<p>‘ಹೇಳದೇನ್ಲಾ ಬೊಡ್ಡಿಹೈದ್ನೇ, ಇದಕ್ಕೆಲ್ಲಾ ಅವಕಾಶವಾದಿ ರಾಜಕಾರಣವೇ ಕಾರಣ. ನಿಮ್ಮ ನಡಂತರಕ್ಕೆ ಕಿತಾಪತಿ ತಂದು ಮಡಗ್ಯವುರೆ. ಅನುಭೋಗಿಸಿ. ನಾನು ಈಗ ಹೋಗಿ ಎಲ್ಲಾ ದೇವರುಗಳಿಗೂ ಟೆರರಿಸ್ಟುಗಳನ್ನ ಸ್ವರ್ಗಕ್ಕೆ ಬುಟ್ಕಬ್ಯಾಡಿ ಅಂತ ರಿಪೋರ್ಟು ಕೊಡ್ತೀನಿ. ನಾರಾಯಣ, ನಾರಾಯಣ’ ಅಂತ ಹೊಂಟೋದರು.</p>.<p>ನಾನು ತೆಪರನಂತೆ ತಪ್ಪು ಯಾರದ್ದು ಅಂತ ಯೋಚ್ನೆ ಮಾಡ್ತಾ ಕುತುಗಂದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವತ್ತಾರೆ ಪಾರ್ಕಲ್ಲಿ ವಾಕಿಂಗ್ ಮಾಡ್ತಿದ್ದೆ. ಯಾರೋ ಹಿಂದ್ಲಿಂದ ಕರೆದಂಗಾತು, ‘ಹಲೋ, ರೀ ಸ್ವಾಮಿ. ನಿಮ್ಮನ್ನೇ ಕನ್ರೀ ಕರೀತಿರದು’ ಅಂದ್ರು. ತಿರುಗಿ ನೋಡಿದರೆ, ಯಾರೋ ಸಿಲ್ಕ್ ಪಂಚೆ ಉಟ್ಟುಕಂದು, ಕತ್ತಿಗೆ ಗಮಗುಡೋ ಹೂವಿನ ಹಾರ, ತಂಬೂರಿ ಅಡ್ಡಡ್ಡ ನ್ಯಾತಾಕ್ಕ್ಯಂದಿದ್ರು.</p>.<p>‘ಯಾರು ಸ್ವಾಮಿ ತಾವು? ಹಗಲುವೇಷದೋರೆ?’ ಅಂತಂದೆ.</p>.<p>‘ನಾರಾಯಣ, ನಾರಾಯಣ. ಲೇ ಬೊಡ್ಡಿಹೈದ್ನೆ, ನಾನು ನಾರದ ಕಲಾ. ನಿಮಗೆ ಟೆರರಿಷ್ಟುಗಳು ಗೊತ್ತಾತರೆ, ನಾರದ ಕಾಣಕ್ಕಿಲ್ಲವಾ?’ ಅಂತ ಬೇಸರದಿಂದ ಬೋದ್ರು.</p>.<p>‘ತೆಪ್ಪಾತು ಕನ ನಾರದಣ್ಣ. ತಾವು ಇತ್ತಗೆ ಬಂದ ಕಾರಣವೇನು?’ ನಾಟಕದ ಶೈಲಿಯಲ್ಲಿ ಕೇಳಿದೆ.</p>.<p>‘ಭಾರತದಾಗೆ ಪರಿಸ್ಥಿತಿ ಹ್ಯಂಗದೆ ನೋಡಿಕ್ಯಂದು ಬರೋಗು ಅಂತ ಎಲ್ಲಾ ಧರ್ಮದ ದೇವರುಗಳೂ ನನ್ನ ಕಳಿಸ್ಯವ್ರೆ’ ನಾರದರು ಉತ್ತರಿಸಿದರು.</p>.<p>‘ಏನಣೈ ನೋಡದು. ಬುದುವಂತ್ರು, ವೈದ್ಯರೇ ಬದುಕಿಸದು ಬುಟ್ಟು, ಜಾತಿ–ಧರ್ಮ ಅಂತ ಗೆರೆ ಕೊರಕಂದು ಬಾಂಬು ಸಿಡಿಸ್ತಾವರೆ. ಹರಳೆಣ್ಣೆ ಬೀಜದ ಇಕ್ಮದ್ದಾಕಿ ನಮ್ಮುನ್ನೆಲ್ಲಾ ಮ್ಯಾಕೆ ಕಳುಗಿಸೋ ಪ್ಲಾನ್ ಮಾಡ್ತಾವ್ರೆ’ ಅಂದೆ.</p>.<p>‘ಅಲ್ಲ ಕನ್ರಯ್ಯಾ, ಓದಿದ್ದು ನಿಮ್ಮ ಸ್ಕೂಲೇಲಿ, ತಿಂದುದ್ದು ನಿಮ್ಮ ಅನ್ನ, ಕುಡಿದಿದ್ದು ನಿಮ್ಮ ನೀರು, ಉಸಿರಾಡಿದ್ದು ನಿಮ್ಮ ಗಾಳಿ. ವಿದ್ಯಾವಂತರು ಅಂದಾರೇನ್ಲಾ ಇವರ್ನಾ? ಈಗ ವೈಟ್ ಕಾಲರ್ ಭಯೋತ್ಪಾದನೆ ಕಲಿತುಗಂದು ಸೀದಾ ಸ್ವರ್ಗಕ್ಕೆ ಸೇರಿಕ್ಯಬೈದು ಅಂತ ತಿಳಕಂದವ್ರೆ’ ನಾರದರು ನೊಂದ್ಕಂದರು.</p>.<p>‘ನಾರದಣೈ ಅದಕ್ಕೇನು ಕಾರಣ ಅಂತ ನೀವೇ ಹೇಳಬಕು’ ಅಂತಂದೆ.</p>.<p>‘ಹೇಳದೇನ್ಲಾ ಬೊಡ್ಡಿಹೈದ್ನೇ, ಇದಕ್ಕೆಲ್ಲಾ ಅವಕಾಶವಾದಿ ರಾಜಕಾರಣವೇ ಕಾರಣ. ನಿಮ್ಮ ನಡಂತರಕ್ಕೆ ಕಿತಾಪತಿ ತಂದು ಮಡಗ್ಯವುರೆ. ಅನುಭೋಗಿಸಿ. ನಾನು ಈಗ ಹೋಗಿ ಎಲ್ಲಾ ದೇವರುಗಳಿಗೂ ಟೆರರಿಸ್ಟುಗಳನ್ನ ಸ್ವರ್ಗಕ್ಕೆ ಬುಟ್ಕಬ್ಯಾಡಿ ಅಂತ ರಿಪೋರ್ಟು ಕೊಡ್ತೀನಿ. ನಾರಾಯಣ, ನಾರಾಯಣ’ ಅಂತ ಹೊಂಟೋದರು.</p>.<p>ನಾನು ತೆಪರನಂತೆ ತಪ್ಪು ಯಾರದ್ದು ಅಂತ ಯೋಚ್ನೆ ಮಾಡ್ತಾ ಕುತುಗಂದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>